ಬೇಸಿಗೆ ಬಾಯಾರಿಕೆ ತಣಿಸಿದ ಬ್ಯಾರೇಜ್‌

ಹೆರಕಲ್‌ ಬ್ಯಾರೇಜ್‌ನಿಂದ ಬಾಗಲಕೋಟೆ ನೀರಿನ ಸಮಸ್ಯೆಗೆ ಮುಕ್ತಿ

Team Udayavani, May 25, 2020, 11:14 AM IST

ಬೇಸಿಗೆ ಬಾಯಾರಿಕೆ ತಣಿಸಿದ ಬ್ಯಾರೇಜ್‌

ಬಾಗಲಕೋಟೆ: ಪ್ರತಿವರ್ಷ ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬೆಳಗಾವಿಯ ಹಿಡಕಲ್‌ ಡ್ಯಾಂನಿಂದ ನೀರು ಬಿಡಿ ಎಂಬ ಬೇಡಿಕೆಗೆ ಈ ಬಾರಿ ಬ್ರೇಕ್‌ ಬಿದ್ದಿದೆ. ಬಾಗಲಕೋಟೆ ಜನರ ಬೇಸಿಗೆಯ ಬಾಯಾರಿಕೆಯನ್ನು ಹೆರಕಲ್‌ ಬ್ಯಾರೇಜ್‌ ಸಮರ್ಥವಾಗಿ ನಿಭಾಯಿಸಿದೆ.

ಹೌದು, ನಗರಕ್ಕೆ ಹೊಂದಿಕೊಂಡಿರುವ ಘಟಪ್ರಭಾ ನದಿಗೆ ಅಡ್ಡಲಾಗಿ ಬೀಳಗಿ ತಾಲೂಕಿನ ಹರಕಲ್‌ ಬಳಿ 1.80 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಬ್ಯಾರೇಜ್‌ ಅನ್ನು 75.57 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಕಳೆದ ಡಿಸೆಂಬರ್‌ನಿಂದ ನೀರು ಸಂಗ್ರಹಿಸಲಾಗುತ್ತಿದೆ. ಈ ನೀರು, ಬಾಗಲಕೋಟೆಗೆ ಕುಡಿಯುವ ನೀರು ಪೂರೈಸುವ ಬನ್ನಿದಿನ್ನಿ ಬ್ಯಾರೇಜ್‌ ವರೆಗೂ ಸಂಗ್ರಹವಾಗಿದ್ದು, ನಗರಕ್ಕೆ ನೀರು ಪೂರೈಕೆಗೆ ಬನ್ನಿದಿನ್ನಿ ಬ್ಯಾರೇಜ್‌ಗೆ ಸದ್ಯಕ್ಕೆ ನೀರಿನ ಕೊರತೆಯಾಗಿಲ್ಲ.

ಜಿಲ್ಲೆಯ ಸುಂದರ ಬ್ಯಾರೇಜ್‌: ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗೆ ಹಲವಾರು ಬ್ಯಾರೇಜ್‌ಗಳಿದ್ದು, ಅಷ್ಟೂ ಬ್ಯಾರೇಜ್‌ ಗಳಲ್ಲಿಯೇ ಹೆರಕಲ್‌ ಬ್ಯಾರೇಜ್‌, ತನ್ನ ನಿರ್ಮಾಣದ ಮೂಲಕ ಗಮನ ಸೆಳೆಯುತ್ತದೆ. ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್‌ವರೆಗೆ ನೀರು ನಿಲ್ಲಿಸಿದಾಗ, ಈ ಬ್ಯಾರೇಜ್‌ನಲ್ಲಿ 515 ಮೀಟರ್‌ ವರೆಗೆ ನೀರು ಸಂಗ್ರಹಿಸಲು ಸಧ್ಯ ಕೆಬಿಜೆಎನ್‌ಎಲ್‌ ಅನುಮತಿ ನೀಡಿದೆ. ಈ ಬ್ಯಾರೇಜ್‌ 528 ಮೀಟರ್‌ ಎತ್ತರದ ವರೆಗೂ ನೀರು ನಿಲ್ಲಿಸುವ ಸಾಮರ್ಥ್ಯ ಹೊಂದಿದೆ.

ಘಟಪ್ರಭಾ ನದಿಯ 503 ಮೀಟರ್‌ ತಳಮಟ್ಟದಿಂದ ಬ್ಯಾರೇಜ್‌ ನಿರ್ಮಿಸಿದ್ದು, 528 ಮೀಟರ್‌ ಎತ್ತರವಿದೆ. ಒಟ್ಟು 18 ಗೇಟ್‌ಗಳು, 1.80 ಟಿಎಂಸಿ ಅಡಿ ನೀರು ಸಂಗ್ರಹ, 178 ಮೀಟರ್‌ ಬ್ಯಾರೇಜ್‌ ಉದ್ದ, 260 ಮೀಟರ್‌ ಉದ್ದದ ಸೇತುವೆ ಒಳಗೊಂಡಿದೆ. ವಿಜಯಪುರ-ಉಡುಪಿಯ ಪ್ರಥಮ ದರ್ಜೆ ಗುತ್ತಿಗೆದಾರ ಜಿ. ಶಂಕರ ಅವರ ಗುತ್ತಿಗೆ ಸಂಸ್ಥೆ, ಈ ಬ್ಯಾರೇಜ್‌ ಅನ್ನು ಕೇವಲ 18 ತಿಂಗಳಲ್ಲಿ ಪೂರ್ಣಗೊಳಿಸಿದೆ.

ನಗರ-ನೂರಾರು ಹಳ್ಳಿಗೆ ಆಸರೆ: ಈ ಬ್ಯಾರೇಜ್‌ನ ನೀರನ್ನುನಂಬಿಕೊಂಡೇ ಬಾಗಲಕೋಟೆ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಯ 72 ಕೋಟಿ ವೆಚ್ಚದ ಯೋಜನೆ ಕೈಗೊಂಡಿದ್ದು, ಬಿಟಿಡಿಎ ನಿರ್ಲಕ್ಷ್ಯದಿಂದ ಅದು ಸಕಾಲಕ್ಕೆ ಪೂರ್ಣಗೊಂಡಿಲ್ಲ. ಸದ್ಯ ಈ ಯೋಜನೆಯಡಿ ಹೆರಕಲ್‌ದಿಂದ ಬನ್ನಿದಿನ್ನಿ ಬ್ಯಾರೇಜ್‌ಗೆ ನೀರು ತಂದು, ಅಲ್ಲಿಂದ ಬನ್ನಿದಿನ್ನಿ ಬ್ಯಾರೇಜ್‌ನ ಹಳೆಯ ಜಾಕವೆಲ್‌ ಮೂಲಕವೇ ನಗರಕ್ಕೆ ಕುಡಿಯುವ ನೀರು ಕೊಡಲು ಉದ್ದೇಶಿಸಲಾಗಿದೆ.

ಆದರೆ, ಲಾಕ್‌ಡೌನ್‌ ಘೋಷಣೆಯಾದ ಬಳಿಕ, ಮುಖ್ಯವಾಗಿ ಹೆರಕಲ್‌ ಬ್ಯಾರೇಜ್‌ನಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹ ಇರುವುದರಿಂದ ನೀರು ಪೂರೈಕೆ ಯೋಜನೆ ಆರಂಭಿಸಿಲ್ಲ. ಬ್ಯಾರೇಜ್‌ನಿಂದ ಬಾಗಲಕೋಟೆ ನಗರ, 23ಕ್ಕೂ ಪುನರ್‌ವಸತಿ ಕೇಂದ್ರಗಳು, ಬಾಗಲಕೋಟೆ, ಬೀಳಗಿ ತಾಲೂಕಿನ ಹಲವಾರು ಹಳ್ಳಿಗಳಿಗೆ ನೀರಿನ ಕೊರತೆ ನೀಗಿದೆ. ಇಂತಹ ಬಿರು ಬೇಸಿಗೆಯಲ್ಲೂ ಸದ್ಯ ಹೆರಕಲ್‌ ಬ್ಯಾರೇಜ್‌ನಲ್ಲಿ ನೀರು ವಿಶಾಲವಾಗಿ ಹರಡಿಕೊಂಡಿದ್ದು, ಜನರ ಬಾಯಾರಿಕೆಯ ಬವಣೆ ನೀಗಿಸಿದೆ.

123 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಸಧ್ಯ 30.048 ಟಿಎಂಸಿ ಅಡಿ ನೀರು ಸಂಗ್ರಹವಿದೆ. 519.60 ಮೀಟರ್‌ ಗರಿಷ್ಠ ಮಟ್ಟದ ಡ್ಯಾಂನಲ್ಲಿ 510.03 ಮೀಟರ್‌ ವರೆಗೆ ನೀರಿದೆ. 17.36 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್‌ ಇದ್ದು, ಅದು ಹೊರತುಪಡಿಸಿ, ಸದ್ಯಕ್ಕೆ ಕುಡಿಯುವ ನೀರಿನ ಅಭಾವವಿಲ್ಲ.

ಗೋಚರಿಸುತ್ತಿವೆ ಗುಡಿಗಳು :  ಸಧ್ಯ ಹೆರಕಲ್‌ ಬಳಿ ಘಟಪ್ರಭಾ ನದಿಯ ಆಲಮಟ್ಟಿ ಹಿನ್ನೀರ ಪ್ರಮಾಣ ಇಳಿಮುಖವಾಗಿದ್ದು, ಬ್ಯಾರೇಜ್‌ ಹಿಂಬದಿಯ ಪ್ರದೇಶದಲ್ಲಿ ಹೆರಕಲ್‌ ಮುಳುಗಡೆ ಊರಿನಲ್ಲಿದ್ದ ಹಳೆಯ ಮನೆಗಳು, ದೇವಸ್ಥಾನಗಳು ಗೋಚರಿಸುತ್ತಿವೆ. ಇಲ್ಲಿನ ಬಸವಣ್ಣ, ಹನಮಂತ ದೇವರ ಗುಡಿಗಳು, ಗ್ರಾಮ ದೇವತೆ ಗುಡಿ ಹೀಗೆ ಹಲವು ದೇವಾಲಯಗಳ ಗೋಪರದ ಜತೆಗೆ ಅರ್ಧಕ್ಕೂ ಹೆಚ್ಚು ಗುಡಿಯ ಭಾಗ ಕಣ್ತುಂಬಿಕೊಳ್ಳಲು ಕಾಣಸಿಗುತ್ತಿವೆ.

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.