ಕೃಷಿ ಅಂದ್ರೆ ಇಷ್ಟ…ಹೊಲ್ದಾಗ್‌ ಗಳ್ಯಾ ಹೊಡಿಯೋದು ನನಗಿಷ್ಟ! ಸುಧಾಮೂರ್ತಿ

ಮನುಷ್ಯ ಯಾವಾಗಲು ಬಿಜಿಯಾಗಿರಬೇಕು. ಜೀವನದಲ್ಲಿ ಅತಿ ಮುಖ್ಯವಾದದ್ದು ಸಮಯ

Team Udayavani, Jan 26, 2023, 6:10 PM IST

ಹೊಲ್ದಾಗ್‌ ಗಳ್ಯಾ ಹೊಡಿಯೋದು ನನಗಿಷ್ಟ! ಸುಧಾಮೂರ್ತಿ

ಬಾಗಲಕೋಟೆ: ಇನ್ಫೋಸಿಸ್‌ ಇಡೀ ಪ್ರಪಂಚದಾದ್ಯಂತ ಹೆಸರು ಮಾಡಿರುವ ಪ್ರತಿಷ್ಠಿತ ಸಂಸ್ಥೆ. ಲಕ್ಷಾಂತರ ಕೋಟಿ ವಹಿವಾಟು ನಡೆಸಿದ ದೇಶದ ಸಿರಿವಂತ ಐಟಿ ಕಂಪನಿಗಳಲ್ಲಿ ಇನ್ಫೋಸಿಸ್‌ ಕೂಡ ಒಂದು. ಆದರೆ ಈ ಸಂಸ್ಥೆಯ ಒಡತಿ ಸುಧಾಮೂರ್ತಿ ಮಾತ್ರ ಸರಳತೆಯಿಂದ ಎಲ್ಲರ ಅಚ್ಚುಮೆಚ್ಚುಗೆಗೆ ಕಾರಣರಾಗಿದ್ದಾರೆ.ಸರಳತೆಗೆ ಇನ್ನೊಂದು ಹೆಸರೇ ಸುಧಾಮೂರ್ತಿ ಅಂದರೆ ತಪ್ಪಿಲ್ಲ.

ಹೌದು. ಅವರು ಬುಧವಾರ ನವನಗರದ ಎಂಆರ್‌ಎನ್‌ಎ ಫೌಂಡೆಶನ್‌ನ ತೇಜಸ್‌ ಅಂತಾರಾಷ್ಟ್ರೀಯ ಶಾಲೆಗೆ ಭೇಟಿ ನೀಡಿ ಮಕ್ಕಳ ಜತೆ ಮಕ್ಕಳಾಗಿದ್ದರು. ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳು ಸಾಲು ಸಾಲಾಗಿ ಪ್ರಶ್ನೆಗಳ ಸುರಿಮಳೆಗೈದರೆ ಎಲ್ಲ ಪ್ರಶ್ನೆಗಳಿಗೂ ಸುಧಾಮೂರ್ತಿ ಅವರು ನಗು ನಗುತ್ತಾ ಉತ್ತರ ನೀಡಿ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು.

ನಿಮಗೆ ರೋಲ್‌ ಮಾಡಲ್‌ ಯಾರು ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಮೂರ್ತಿ, ವಿವಿಧ ವಯೋಮಾನದಲ್ಲಿ ಒಬ್ಬೊಬ್ಬರು ಎಂದು ನಗುತ್ತಾ ಉತ್ತರಿಸಿದರು. ನಾನು ಚಿಕ್ಕವಳಿದ್ದಾಗ ನಮ್ಮ ಅಜ್ಜ -ಅಜ್ಜಿ, ನಂತರ ಬೆಳೆದಾಗ ನಮ್ಮ ತಂದೆ ನನಗೆ ರೋಲ್‌ ಮಾಡಲ್‌ ಆಗಿದ್ದರು. ಹೀಗೆ ಬೆಳೆದಂತೆ ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬರು ರೋಲ್‌ ಮಾಡಲ್‌ ಆಗಿದ್ದಾರೆ. ಅವರೆಲ್ಲರ ವಿಚಾರಧಾರೆ ಜೀವನ ಶೈಲಿ ಅಳವಡಿಸಿಕೊಂಡು ನಾನು ಬೆಳೆದಿದ್ದೇನೆ ಎಂದರು.

ತನ್ವಿ ಎಂಬ ವಿದ್ಯಾರ್ಥಿನಿ ನೀವು ಜೀವನದಲ್ಲಿ ಏನನ್ನು ಮಿಸ್‌ ಮಾಡಿಕೊಳ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸುಧಾ ಮೂರ್ತಿ, ನಾನು ಹಳ್ಳಿ ಜೀವನವನ್ನು ಮಿಸ್‌ ಮಾಡಿಕೊಳ್ಳುತ್ತೇನೆ. ನನಗೆ ಕೃಷಿ ಅಂದರೆ ಬಹಳ ಇಷ್ಟ. ನೇಗಿಲು ಹೊಡೆಯಬೇಕೆಂದು ಮನ ಬಯಸುತ್ತದೆ. ಇನ್ನು ಟ್ರಾಕ್ಟರ್‌ ಚಲಾಯಿಸೋದು ಅಂದರೆ ನನಗೆ ತುಂಬಾ ಇಷ್ಟ. ದನಕರುಗಳೆಂದರೆ ತುಂಬಾ ಇಷ್ಟ. ನಾನು ರೈತ ಮಹಿಳೆ ಆಗಲಿಲ್ಲ ಅನ್ನೋದನ್ನು ನಾನು ಮಿಸ್‌ ಮಾಡಿಕೊಳ್ಳುತ್ತೇನೆ ಎಂದರು.

ನಿಮ್ಮ ದಿನಚರಿ ಏನು ಎಂಬ ವಿದ್ಯಾರ್ಥಿನಿ ವಿದ್ಯಾಶ್ರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬೆಳಗ್ಗೆ ಐದು ಗಂಟೆಗೆ ಏಳುತ್ತೇನೆ. ಎಲ್ಲ ದಿನಕರ್ಮ ಮುಗಿಸಿ ನಮ್ಮ ನಾಯಿ ಗೋಪಿ ಅಂತಿದೆ. ಅದರ ಜತೆ ಕೆಲ ಹೊತ್ತು ಆಟ ಆಡುತ್ತೇನೆ. ನಂತರ ಪುಸ್ತಕ ಓದೋದು. ನಾನು ಯಾವುದೇ ಹಬ್ಬ ಹರಿದಿನ, ಮದುವೆ ಮುಂಜಿಯಲ್ಲಿ ಜಾಸ್ತಿ ಭಾಗಿಯಾಗೋದಿಲ್ಲ. ಅದು ಸಮಯ ವ್ಯರ್ಥ. ಇ ಮೇಲ್‌ ನೋಡೋದು ವಾಟ್ಸ್‌ ಆ್ಯಪ್‌ ನೋಡೋದು ಮಾಡುತ್ತೇನೆ. ಎಲ್ಲವೂ ಕೆಲಸಕ್ಕೆ ಸಂಬಂಧಿಸಿದ್ದು. ವರ್ಷದ 365 ದಿನ ಬಿಜಿಯಾಗಿರುತ್ತೇನೆ. ಮನುಷ್ಯ ಯಾವಾಗಲು ಬಿಜಿಯಾಗಿರಬೇಕು. ಜೀವನದಲ್ಲಿ ಅತಿ ಮುಖ್ಯವಾದದ್ದು ಸಮಯ. ಅದನ್ನು ವ್ಯರ್ಥ ಮಾಡಬಾರದೆಂದು ಕಿವಿಮಾತು ಹೇಳಿದರು.

ನೀವು ಆರಾಮ ಅದಿರಿ. ದೇಶ ಕೂಡ ಅರಾಮ ಇರಬೇಕು ಎಂದರೆ ನೀವು ಈ ರಾಷ್ಟ್ರದ ರಾಷ್ಟ್ರಪತಿ ಆಗಬೇಕು ಎಂದು ಮಾಧುರಿ ಮುಧೋಳ ಹಾಗೂ ಎಂಎಲ್‌ಸಿ ಹನುಮಂತ ನಿರಾಣಿ ಹೇಳಿದಾಗ, ಏನು ಬೇಡ ನಾನು ನಮ್ಮ ಊರಾಗ ಆರಾಮ ರಾಣಿ ಇದ್ದಂಗ ಅದಿನಿ ಎಂದು ಸುಧಾಮೂರ್ತಿ ಕೈ ಮುಗಿದರು. ಒಟ್ಟಾರೆ ಸುಧಾಮೂರ್ತಿ ಮಕ್ಕಳ ಜತೆ ಮಕ್ಕಳಾಗಿ ತಮ್ಮ ಜೀವನದ ಎಲ್ಲ ಅನುಭವಗಳನ್ನು ಹಂಚಿಕೊಂಡರು.

ಸುಧಾಮೂರ್ತಿ ಅವರು ನಮ್ಮ ದೇಶದ ರಾಷ್ಟ್ರಪತಿ ಆಗಬೇಕು. ನಮ್ಮ ದೇಶದ ಪ್ರೆಸಿಡೆಂಟ್‌ ಆಗಬೇಕೆಂದು ನಾವೆಲ್ಲ ಪ್ರಾರ್ಥನೆ ಮಾಡುತ್ತೇವೆ. ಅಬ್ದುಲ್‌ ಕಲಾಂ ನಂತರ ಇಂತಹ ವ್ಯಕ್ತಿ ರಾಷ್ಟ್ರಪತಿಗಳಾಗಬೇಕು.
ಮಾಧುರಿ ಮುಧೋಳ,
ಮುಖ್ಯಸ್ಥೆ, ತೇಜಸ್‌ ಅಂತಾರಾಷ್ಟ್ರೀಯ ಸ್ಕೂಲ್‌

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.