ಕಸದಿಂದಲೇ ಕಸದಿಂದಲೇ ರಸ


Team Udayavani, May 5, 2019, 11:39 AM IST

bag-2

ಕಸದಿಂದ ಏನು ಮಾಡಲು ಸಾಧ್ಯ ಎನ್ನುವವರೇ ಹೆಚ್ಚು. ಆದರೆ, ಅದೇ ಕಸದಿಂದ ವಿದ್ಯುತ್‌, ಗ್ಯಾಸ್‌, ಗೊಬ್ಬರ ತಯಾರಿಸಿ ರಾಜ್ಯದಲ್ಲೇ ಮಾದರಿ ಘಟಕ ನಿರ್ವಹಿಸುವ ಕೆಲಸ ಇಲ್ಲಿನ ಬಾಗಲಕೋಟೆ ನಗರಸಭೆ ಮಾಡಿದೆ. ವಿದ್ಯುತ್‌ ಉತ್ಪಾದನೆಯಿಂದ ವಾರ್ಷಿಕ 4 ಲಕ್ಷದಷ್ಟು ಹೊರೆ ನಗರಸಭೆಗೆ ಕಡಿಮೆಯಾದರೆ, ಗೊಬ್ಬರ ಉತ್ಪಾದನೆಯಿಂದ ರೈತರಿಗೂ ಗುಣಮಟ್ಟದ ಸಾವಯವ ಗೊಬ್ಬರ ನೀಡುವ ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದೆ. ನಗರಸಭೆ ಕೈಗೊಳ್ಳುತ್ತಿರುವ ಈ ಕಾರ್ಯದ ವಿವರ ಇಲ್ಲಿದೆ

ಬಾಗಲಕೋಟೆ: ಕಸದಿಂದ ರಸ ತೆಗೆಯುವುದು ಎಂದರೆ ಇದೆ ಇರಬೇಕು. ಮನೆ-ಮನೆಯಿಂದ ತರುವ ಕಸದಿಂದ ವಿದ್ಯುತ್‌, ಬಯೋಗ್ಯಾಸ್‌ ಹಾಗೂ ಸಾವಯವ ಗೊಬ್ಬರ ಉತ್ಪಾದನೆ ಮಾಡುವ ನಗರಸಭೆಯ ಪ್ರಯತ್ನ ಸಫಲಗೊಂಡಿದೆ. ಬಾಗಲಕೋಟೆ ನಗರಸಭೆಯ ಈ ಪ್ರಯತ್ನವನ್ನು ಕಣ್ಣಾರೆ ಕಂಡು ಅಧ್ಯಯನ ಮಾಡಲು ರಾಜ್ಯದ ವಿವಿಧ ನಗರ ಪಾಲಿಕೆಗಳ ಅಧಿಕಾರಿಗಳ ವರ್ಗ ಈಗ ಬಾಗಲಕೋಟೆಯತ್ತ ಬರುತ್ತಿದ್ದಾರೆ!

ಹೌದು, ಇಲ್ಲಿನ ಬಾಗಲಕೋಟೆ ನಗರಸಭೆಯಿಂದ ಹಳೆಯ ಎಪಿಎಂಸಿ ಬಳಿ ಇರುವ ಘನ ತ್ಯಾಜ್ಯ ನಿರ್ವಹಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ನಿತ್ಯ ನಗರದಲ್ಲಿ 50 ಟನ್‌ ಕಸ ಸಂಗ್ರಹವಾಗುತ್ತದೆ. ಅದರಲ್ಲೇ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡಿ, ಹಸಿ ಕಸದಿಂದ ವಿದ್ಯುತ್‌,
ಬಯೋಗ್ಯಾಸ್‌ ಮತ್ತು ಸಾವಯವ ಗೊಬ್ಬರ ಉತ್ಪಾದನೆ ಮಾಡಲಾಗುತ್ತಿದೆ.

2 ಟನ್‌ ಹಸಿ ಕಸ ಬಳಕೆ: ನಗರದ ಮನೆ-ಮನೆ, ಹೊಟೇಲ್‌ ಗಳಿಂದ ಸಂಗ್ರಹಿಸುವ ಒಟ್ಟು ಕಸದಲ್ಲಿ ಹಸಿ ಕಸವನ್ನು ನಗರಸಭೆ ಕಾರ್ಮಿಕರು ವಿಂಗಡಣೆ ಮಾಡುತ್ತಾರೆ. ಆ ಹಸಿ ಕಸವನ್ನು 47.50 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿದ ಬಯೋಗ್ಯಾಸ್‌ ಪ್ಲಾಂಟ್‌ ಯಂತ್ರಕ್ಕೆ ಹಾಕಲಾಗುತ್ತದೆ. ನಿತ್ಯ 2 ಟನ್‌ ಹಸಿ
ಕಸವನ್ನು ಈ ಯಂತ್ರಕ್ಕೆ ಹಾಕಿ, 160 ಕಿಲೋ ವ್ಯಾಟ್‌ ವಿದ್ಯುತ್‌, 50 ಕ್ಯೂಬಿಕ್‌ ಮೀಟರ್‌ ಬಯೋಗ್ಯಾಸ್‌ ಹಾಗೂ 20ರಿಂದ 25 ಕೆ.ಜಿ. ಸಾವಯವ ಗೊಬ್ಬರ ಉತ್ಪಾದನೆಯಾಗುತ್ತಿದೆ.

160ಕಿಲೋ ವ್ಯಾಟ್‌ ವಿದ್ಯುತ್‌ಅನ್ನು, ಇಲ್ಲಿನ ಬಯೋಗ್ಯಾಸ್‌ ಪ್ಲಾಂಟ್‌ನ ಜನರೇಟರ್‌, ವಿವಿಧ ಹಂತದ 8
ಎಚ್‌ಪಿ ಸಾಮರ್ಥ್ಯದ ಮೋಟಾರ್‌ಗಳಿಗೆ ಬಳಸಲಾಗುತ್ತದೆ. ಜತೆಗೆ ಇಡೀ 16 ಎಕರೆ ಪ್ರದೇಶದ ಬೀದಿ ದೀಪಗಳಿಗೆ (250 ವ್ಯಾಟ್‌ನ 15 ಕಂಬಗಳಿವೆ) ಇದೇ ವಿದ್ಯುತ್‌ ಬಳಕೆ ಮಾಡುತ್ತಿದ್ದು, ಇದರಿಂದ ನಗರಸಭೆಗೆ ವಾರ್ಷಿಕ 4.20 ಲಕ್ಷ ರೂ. ವಿದ್ಯುತ್‌ (ಘಟಕ ಆರಂಭಗೊಂಡಾಗಿನಿಂದ ವಿದ್ಯುತ್‌ ಬಿಲ್‌ ಪಾವತಿಸುವ ಪ್ರಮೇಯ ಬಂದಿಲ್ಲ) ಬಿಲ್‌ ಉಳಿತಾಯವಾಗಿದೆ.

ಸಮರ್ಪಕ ನಿರ್ವಹಣೆ: ರಾಜ್ಯದಲ್ಲಿ ಮೈಸೂರು, ಬೆಂಗಳೂರು, ರಾಮನಗರ, ಮಂಗಳೂರು ಸೇರಿದಂತೆ
ಕೆಲವೇ ಕೆಲವು ಮಹಾನಗರಗಳಲ್ಲಿ ಇಂತಹ ಬಯೋಗ್ಯಾಸ್‌ ಪ್ಲಾಂಟ್‌ ಅಳವಡಿಸಿದ್ದು, ಕೆಲವೆಡೆ ಸೂಕ್ತ ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿವೆ. ಆದರೆ, ಬಾಗಲಕೋಟೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಈ ಘಟಕ ಸಮರ್ಪಕವಾಗಿ ನಡೆಯುತ್ತಿದ್ದು, ಸದ್ಯ 2 ಟನ್‌ ಸಾವಯವ ಗೊಬ್ಬರ ಉತ್ಪಾದನೆಯಾಗಿದೆ. ಇದು ರೈತರಿಗೆ ಅತ್ಯಂತ ಉಪಯುಕ್ತವಾದ ಗೊಬ್ಬರವಾಗಿದ್ದು, ಒಂದು ಕೆ.ಜಿ.ಗೆ 8 ರೂ.ಗೆ ಮಾರಾಟವಾಗುತ್ತದೆ.

ಬಯೋಗ್ಯಾಸ್‌ ತಯಾರಿಕೆ: ಘನ ತ್ಯಾಜ್ಯ ನಿರ್ವಹಣೆಗಾಗಿ ಅಳವಡಿಸಿರುವ ಬಯೋಗ್ಯಾಸ್‌ ಪ್ಲಾಂಟ್‌ನಲ್ಲಿ ನಿತ್ಯ 50 ಕ್ಯೂಬಿಕ್‌ ಮೀಟರ್‌ ಗ್ಯಾಸ್‌ ತಯಾರಿಸಲಾಗುತ್ತಿದ್ದು, ಅದನ್ನು ನಗರಸಭೆ ವಿವಿಧ ಕಾರ್ಯಕ್ಕೆ ಬಳಕೆ ಮಾಡುತ್ತಿದೆ. ಅಲ್ಲದೇ ಈ ಘಟಕದ ಪಕ್ಕದಲ್ಲೇ ಕುಷ್ಠ ರೋಗಿಗಳ ಕಾಲೋನಿ ಇದ್ದು, ಅಲ್ಲಿನ ಜನರು, ಇದೇ ಗ್ಯಾಸ್‌ ಮೂಲಕ ಅಡುಗೆ ತಯಾರಿಕೆ ಸಹಿತ ವಿವಿಧಕ್ಕೂ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ನಗರಸಭೆ ಮನೆ-ಮನೆಯಿಂದ ಸಂಗ್ರಹಿಸುವ ಕಸದಿಂದ ವಿದ್ಯುತ್‌, ಗ್ಯಾಸ್‌ ಹಾಗೂ ಸಾವಯವ ಗೊಬ್ಬರ ಉತ್ಪಾದನೆ ಮಾಡಬೇಕೆಂಬುದು ಸರ್ಕಾರದ ಯೋಜನೆ. ಅದು ಬಾಗಲಕೋಟೆಯಲ್ಲಿ ಸಾಕಾರಗೊಳ್ಳಲು ಇಲ್ಲಿನ ನಗರಸಭೆಯ ಹಿಂದಿನ ಪೌರಾಯುಕ್ತ ಎಸ್‌.ಎನ್‌. ರುದ್ರೇಶ, ಈಗಿನ ಪರಿಸರ ಅಭಿಯಂತರ ಎಚ್‌.ವಿ. ಕಲಾದಗಿ ಅವರ ಪ್ರಯತ್ನ ಬಹಳಷ್ಟಿದೆ ಎನ್ನುತ್ತಾರೆ ನಗರಸಭೆಯ ಸಿಬ್ಬಂದಿ.

ಒಟ್ಟಾರೆ, ನಗರಸಭೆ ಕೈಗೊಂಡ ಈ ಪ್ರಯತ್ನ ಸದ್ಯಕ್ಕೆ ಅತ್ಯಂತ ಯಶಸ್ವಿ ಹಾಗೂ ಸಮರ್ಪಕವಾಗಿ ನಡೆಯುತ್ತಿದೆ. ಇದು ರಾಜ್ಯದ 10 ಮಹಾನಗರ ಪಾಲಿಕೆ, 58 ನಗರಸಭೆ, 116 ಪುರಸಭೆ ಹಾಗೂ 90 ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪರಿಸರ ಶಾಖೆಯ ಅಧಿಕಾರಿಗಳಿಗೆ ಒಂದು ಪ್ರಾತ್ಯಕ್ಷಿಕೆ
ಕೂಡಾ ಆಗಿದೆ. ಕಸದಿಂದ ವಿದ್ಯುತ್‌, ಗ್ಯಾಸ್‌ ಹಾಗೂ ಗೊಬ್ಬರ ತಯಾರಿಕೆ ಕಾರ್ಯ ವೀಕ್ಷಣೆಗೆ ಪ್ರತಿ ತಿಂಗಳಿಗೊಮ್ಮೆ ಬೇರೆ-ಬೇರೆ ನಗರಸಭೆ, ಪುರಸಭೆ ಅಧಿಕಾರಿಗಳು ಇಲ್ಲಿ ಭೇಟಿ ಕೊಡುತ್ತಾರೆ.

ನಗರ, ನವನಗರ ಹಾಗೂ ವಿದ್ಯಾಗಿರಿ ಸೇರಿ ನಿತ್ಯ 50 ಟನ್‌ ಕಸ ಉತ್ಪಾದನೆಯಾಗುತ್ತದೆ. ಮನೆ-ಮನೆಯಿಂದ ಕಸ ಸಂಗ್ರಹಿಸಿ ತರುವ ವ್ಯವಸ್ಥೆ ನಮ್ಮಲ್ಲಿದ್ದು, ವಿದ್ಯುತ್‌, ಗ್ಯಾಸ್‌ ಮತ್ತು ಸಾವಯವ ಗೊಬ್ಬರ ತಯಾರಿಕೆಗೆ ಹಸಿ ಕಸ ಮಾತ್ರ ಬಳಕೆ ಮಾಡುತ್ತಿದ್ದೇವೆ. ಜನರು, ತಮ್ಮ ಮನೆಯ ಎದುರು ಬರುವ ವಾಹನಗಳಿಗೆ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಹಾಕಿದರೆ, ನಮ್ಮ ಕಾರ್ಯಕ್ಕೆ ಇನ್ನಷ್ಟು ಸಹಕಾರ ಕೊಟ್ಟಂತೆ ಆಗುತ್ತದೆ. ಹಸಿ-ಒಣ ಕಸ ಒಟ್ಟಿಗೆ ಹಾಕುವುದರಿಂದ ಪ್ರತ್ಯೇಕಿಸಲು ಸಾಕಷ್ಟು ಸಮಯ-
ಕಾರ್ಮಿಕರ ಶ್ರಮ ವ್ಯರ್ಥ್ಯವಾಗುತ್ತಿದೆ.
ಎಚ್‌.ವಿ. ಕಲಾದಗಿ, ನಗರಸಭೆ ಪರಿಸರ ಅಭಿಯಂತರ

„ಶ್ರೀಶೈಲ ಕೆ. ಬಿರಾದಾರ

Ad

ಟಾಪ್ ನ್ಯೂಸ್

Parameshawar

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ

DCF-Chakrapani

ಐದು ಹುಲಿಗಳ ಸಾವು ಪ್ರಕರಣ: ಎಂಎಂ ಹಿಲ್ಸ್‌ ಡಿಸಿಎಫ್ ಚಕ್ರಪಾಣಿ ಅಮಾನತು

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

Australia Vs West Indies; ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

AUS Vs WI: ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Jamkhandi ಪ್ರೀ ಆ್ಯಕ್ಟೀವ್‌ ಪೊಲೀಸಿಂಗ್‌ ವ್ಯವಸ್ಥೆ

9

kulageri cross: ಬಾರದ ಮಳೆ; ಬೆಳೆ ಉಳಿಸಿಕೊಳ್ಳಲು ಪರದಾಟ

7

Mudhol: ಕಾಡಂಚಿನ ಜನರ ಸಮಸ್ಯೆಗಳಿಗೆ ಸ್ಪಂದನೆ

8

Jamkhandi: ನ್ಯಾಯಾಲಯದ ಶೌಚಾಲಯ ಸ್ವಚ್ಛತೆ ನಿರ್ಲಕ್ಷ್ಯ

10

Mudhol: ಅರಣ್ಯ ಸಂಪತ್ತು ವೃದ್ಧಿಗೆ ಬೇಡರ ಕೊಡುಗೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-aa-kovi

ಗೇರುಕಟ್ಟೆಯ ಮನೆಗೆ ಅರಣ್ಯ ಇಲಾಖೆ ಸಿಬಂದಿ ದಾಳಿ:ಕಾಡುಪ್ರಾಣಿ ಮಾಂಸ, ಕೋವಿ ವಶಕ್ಕೆ

1-aa-aa-crick-aa-ara-DC

ಶಿಕ್ಷಣ ಸಂಸ್ಥೆಗಳಲ್ಲಿ ತಿಂಗಳೊಳಗೆ ಡ್ರಗ್ಸ್‌ ತಡೆ ಸಮಿತಿ ರಚನೆಗೆ ಜಿಲ್ಲಾಧಿಕಾರಿ ಸೂಚನೆ

police

ಅಂಗಡಿ ಕೆಲಸಕ್ಕಿದ್ದ ದಂಪತಿಯಿಂದ ಕಳವು: ಮೂರು ತಿಂಗಳ ಬಳಿಕ ದೂರು

arrested

ಬೊಳುವಾರು ಬಳಿ ತಲವಾರು ಪ್ರದರ್ಶನ: ಆರೋಪಿ ವಶಕ್ಕೆ

Parameshawar

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.