ಕಂಠಿ ರಿಫಿಲಿಂಗ್‌ ಘಟಕವೇ ಆಪತ್ಭಾಂದವ!

ಜಿಲ್ಲೆಗೂ ಆಮ್ಲಜನಕ ಕೊರತೆ ಸಂಭವ ! | ನಿತ್ಯ 13 ಕೆ.ಎಲ್‌. ಅಗತ್ಯ| ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ ಆಕ್ಸಿಜನ್‌ ­

Team Udayavani, May 5, 2021, 7:58 PM IST

yjtytrytr

ವರದಿ: ಶ್ರೀಶೈಲ ಕೆ. ಬಿರಾದಾರ

ಬಾಗಲಕೋಟೆ: ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೆ ಜಿಲ್ಲೆಗೆ ಆಕ್ಸಿಜನ್‌ ಕೊರತೆ ಎದುರಾಗುವ ಭೀತಿಯೂ ಎದುರಾಗಿದೆ. ಜಿಲ್ಲೆಯ ಜಿಲ್ಲಾ ಕೋವಿಡ್‌ ಆಸ್ಪತ್ರೆಯೂ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ನಗರ ಹೊರ ವಲಯದ ಕಂಠಿ ರಿಫಿಲಿಂಗ್‌ ಘಟಕವೇ ಆಪತ್ಭಾಂದವ ಆಗಿದೆ.

ಹೌದು, ಜಿಲ್ಲೆಯಲ್ಲಿ ಆಕ್ಸಿಜನ್‌ ರಿಫಿಲಿಂಗ್‌ ಘಟಕ ಏಕೈಕವಾಗಿದೆ. ಕಂಠಿ ರಿಫಿಲಿಂಗ್‌ ಘಟಕ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಬೇರ್ಯಾವ ಘಟಕವೂ ಇಲ್ಲ. ನಗರದ ಬಾದಾಮಿ ರಸ್ತೆಯ ಶಿಗಿಕೇರಿ ಕ್ರಾಸ್‌ ಬಳಿ ಇರುವ ಕಂಠಿ ರಿಫಿಲಿಂಗ್‌ ಘಟಕದಿಂದ ನಿತ್ಯವೂ 400ರಿಂದ 450 ಸಿಲಿಂಡರ್‌ ಹಾಗೂ ಒಂದು ಕಂಟೇನರ್‌ ಲಿಕ್ವಿಟ್‌ ಜಿಲ್ಲೆಯಾದ್ಯಂತ ಪೂರೈಕೆಯಾಗುತ್ತಿದೆ. ಆದರೆ, ಈ ಆಕ್ಸಿಜನ್‌ ರಿಫಿಲಿಂಗ್‌ ಮಾಡಿ ಪೂರೈಸುವ ಕಂಠಿ ರಿಫಿಲಿಂಗ್‌ ಘಟಕಕ್ಕೇ ಈಗ ಮೂಲ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎನ್ನಲಾಗಿದೆ.

ನಿತ್ಯ 13 ಕೆ.ಎಲ್‌ ಅಗತ್ಯ: ಜಿಲ್ಲಾ ಕೋವಿಡ್‌ ಆಸ್ಪತ್ರೆ ಸೇರಿದಂತೆ ಒಟ್ಟು 38 ಆಸ್ಪತ್ರೆಗಳಿಗೆ ನಿತ್ಯ 13 ಕೆ.ಎಲ್‌ (ಕಿಲೋ ಲೀಟರ್‌) ಆಕ್ಸಿಜನ್‌ ಅಗತ್ಯವಿದೆ. ಆದರೆ, ಜಿಲ್ಲೆಗೆ 16 ಕೆ.ಎಲ್‌ ಬೇಡಿಕೆ ಇಟ್ಟಿದ್ದು, ಇಷ್ಟೊಂದು ಪ್ರಮಾಣದಲ್ಲಿ ಆಕ್ಸಿಜನ್‌ ಪೂರೈಕೆ ಆಗುತ್ತಿಲ್ಲ. ಕಂಠಿ ರಿಫಿಲಿಂಗ್‌ ಘಟಕಕ್ಕೆ ಬಳ್ಳಾರಿಯ ಜಿಂದಾಲ್‌ ಕಂಪನಿಯಿಂದ ಆಕ್ಸಿಜನ್‌ ಪೂರೈಕೆಯಾಗುತ್ತಿದೆ. ಅಲ್ಲಿಯೂ ಆಮ್ಲಜನ ಕೊರತೆ ಇರುವುದರಿಂದ ಜಿಲ್ಲೆಗೆ ಒಂದು ದಿನ 6 ಕೆ.ಎಲ್‌ ಬಂದರೆ, ಮತ್ತೂಂದು ದಿನ 10 ಕೆ.ಎಲ್‌. ಬರುತ್ತಿದೆ. ಹೀಗಾಗಿ ಅದರಲ್ಲಿಯೇ ನಿತ್ಯ 13 ಕೆ.ಎಲ್‌ ಜಿಲ್ಲೆಗೆ ಪೂರೈಸಲು ಕಂಠಿ ರಿಫಿಲಿಂಗ್‌ ಘಟಕದ ಸರ್ಕಸ್‌ ಮಾಡುತ್ತಿದೆ.

ಜಿಲ್ಲೆಯಲ್ಲಿ 382 ಆಕ್ಸಿಜನ್‌ ಬೆಡ್‌ಗಳು: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟಾರೆ 1595 ಬೆಡ್‌ಗಳಿವೆ. ಅದರಲ್ಲಿ 108 ಐಸಿಯು (ವೆಂಟಿಲೇಟರ್‌ ಸಹಿತ), 103 ಎಚ್‌ಡಿಯು ಹಾಗೂ 171 ಐಸಿಯು ಯೂನಿಟ್‌ ಸೇರಿದಂತೆ 382 ಆಕ್ಸಿಜನ್‌ ಬೆಡ್‌ಗಳಿವೆ. ಸಧ್ಯ ಜಿಲ್ಲೆಯಲ್ಲಿ 34 ಖಾಸಗಿ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆ ನೀಡುತ್ತಿವೆ. ಅಲ್ಲದೇ 2481 ಆಕ್ಸಿವ್‌ ಕೇಸ್‌ಗಳಿದ್ದು, ಎಲ್ಲರೂ ಆಸ್ಪತ್ರೆಗೆ ದಾಖಲಾಗಿಲ್ಲ. 1990 ಜನರು ಹೋಂ ಐಸೋಲೇಶನ್‌ನಲ್ಲಿದ್ದು, ಉಳಿದವರು ಮಾತ್ರ ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೇ ಸೋಂಕಿತರಿಗೇ ಸಧ್ಯ ಆಕ್ಸಿಜನ್‌ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲು ತೊಂದರೆ ಆಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕಿತರು ಹೆಚ್ಚಾದರೆ, ವೆಂಟಿಲೇಟರ್‌ ಮೂಲಕ ಚಿಕಿತ್ಸೆ ಕೊಡಬೇಕಾದರೆ ಆಕ್ಸಿಜನ್‌ ಪೂರೈಕೆಯ ವ್ಯವಸ್ಥೆ ಏನು ಎಂಬ ಭೀತಿ ಎದುರಾಗಿದೆ.

ಫಿಟ್ಟೆಡ್‌ ಆಂಬ್ಯುಲೆನ್ಸ್‌ ಇಲ್ಲವೇ ಇಲ್ಲ: ವೈದ್ಯಕೀಯ ಸೇವೆಯ ವಿಷಯದಲ್ಲಿ ಬಾಗಲಕೋಟೆಯನ್ನು 2ನೇ ಮೀರಜ್‌ ಎಂದು ಕರೆಯಲಾಗುತ್ತದೆ. ಕ್ಲಿನಿಕ್‌ ಗಳು ಸೇರಿದಂತೆ ಜಿಲ್ಲೆಯಲ್ಲಿ 817 ಆಸ್ಪತ್ರೆಗಳಿವೆ. ಬಾಗಲಕೋಟೆ ನಗರವೊಂದರಲ್ಲೇ 192 ಆಸ್ಪತ್ರೆಗಳಿದ್ದು, ಬಹುತೇಕ ಹೈಟೆಕ್‌ ಮತ್ತು ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಗಳಿವೆ. ಆದರೆ, ವೆಂಟಿಲೇಟರ್‌ ಫಿಟ್ಟೆಡ್‌ ಅಂಬ್ಯುಲೆನ್ಸ್‌ ಮಾತ್ರ ಜಿಲ್ಲೆಯಲ್ಲಿ ಒಂದೂ ಇಲ್ಲ ಎಂಬುದೇ ದೊಡ್ಡ ಕೊರಗು. ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಒಂದು ಮಾತ್ರ ಫಿಟ್ಟೆಡ್‌ ಅಂಬ್ಯುಲೆನ್ಸ ಇದ್ದು, ಅದು ಕಳೆದೆರಡು ದಿನಗಳಿಂದ ದುರಸ್ಥಿಗೆ ಹೋಗಿದೆ. ಹೀಗಾಗಿ ಸದ್ಯಕ್ಕೆ ಫಿಟ್ಟೆಡ್‌ ವೆಂಟಿಲೇಟರ್‌ ಇಲ್ಲ.

ಟಾಪ್ ನ್ಯೂಸ್

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

1-sdasdas

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

arrested

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

1——dsad

Women’s Reservation Bill ಮೂಲಕ ‘ಶಕ್ತಿ’ಯನ್ನು ಪೂಜಿಸುವ ಭಾವನೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-banahatti

Special Story: ಬನಹಟ್ಟಿ ಕಾಡಸಿದ್ಧೇಶ್ವರ ರಥಕ್ಕೆ 154 ವರ್ಷದ ಇತಿಹಾಸ …!

1-sadasd-a

Mahalingpur ಮಹಾಲಿಂಗೇಶ್ವರ ಅದ್ದೂರಿ ರಥೋತ್ಸವ: ಲಕ್ಷಾಂತರ ಭಕ್ತರು ಭಾಗಿ

Bagalkote; ಸ್ವಚ್ಛ ವಾಹಿನಿಗೆ ಬಂತು ಗಾಂಧಿ ಪುರಸ್ಕಾರ

Bagalkote; ಸ್ವಚ್ಛ ವಾಹಿನಿಗೆ ಬಂತು ಗಾಂಧಿ ಪುರಸ್ಕಾರ

Rabkavi Banhatti ಕೆರೆ ರಸ್ತೆಯಲ್ಲಿ 20 ಕೆಜಿ ಗಾಂಜಾ ಗಿಡ ವಶ

Rabkavi Banhatti ಕೆರೆ ರಸ್ತೆಯಲ್ಲಿ 20 ಕೆಜಿ ಗಾಂಜಾ ಗಿಡ ವಶ

Bagalkote ಅ. 28ರಂದು ಉತ್ತರ ಕರ್ನಾಟಕದ ಕಿಚಡಿ ಜಾತ್ರೆ

Bagalkote ಸೆ. 28ರಂದು ಉತ್ತರ ಕರ್ನಾಟಕದ ಕಿಚಡಿ ಜಾತ್ರೆ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

1-sdasdas

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.