ಕಾರ ಹುಣ್ಣಿಮೆ ನಿಮಿತ್ತ ಸಂಭ್ರಮದ `ಕರಿ’ ಹರಿಯುವ ಕಾರ್ಯಕ್ರಮ

ಸಿದ್ದನಗೌಡ ಪಾಟೀಲರ ಎತ್ತಿಗೆ ಮೊದಲ ಸ್ಥಾನ

Team Udayavani, Jun 4, 2023, 7:31 PM IST

1-sdsad
ರಬಕವಿ-ಬನಹಟ್ಟಿ : ಕಾರ ಹುಣ್ಣಿಮೆಯ ಪ್ರಯುಕ್ತ ನಗರದಲ್ಲಿ ಭಾನುವಾರ ಸಂಜೆ ಕರಿ ಹರಿಯುವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಜನ ಈ ಗ್ರಾಮೀಣ ಆಚರಣೆಯನ್ನು ನೋಡಲು ಆಗಮಿಸಿದ್ದರು.
ಗಾಂಧಿ ವೃತ್ತದ ಹತ್ತಿರ ಊರಿನ ಗೌಡರಾದ ಸಿದ್ದನಗೌಡ ಪಾಟೀಲ ಎತ್ತುಗಳಿಗೆ ಪೂಜೆ ಸಲ್ಲಿಸಿ ಎತ್ತುಗಳ ಓಟಕ್ಕೆ ಚಾಲನೆ ನೀಡಿದರು. ಒಟ್ಟು ನಾಲ್ಕು ಎತ್ತುಗಳು ಓಟದಲ್ಲಿ ಪಾಲ್ಗೊಂಡಿದ್ದವು. ಅದರಲ್ಲಿ ಸಿದ್ದನಗೌಡ ಪಾಟೀಲ ಎತ್ತು ಮೊದಲ ಸ್ಥಾನ ಪಡೆಯಿತು. ಎರಡನೇ ಸ್ಥಾನವನ್ನು ರಾಜುಗೌಡ ಪಾಟೀಲ ಹಾಗೂ ಮೂರನೇಯ ಸ್ಥಾನವನ್ನು ಬಸಪ್ಪ ದೇಸಾರ ಎತ್ತು, ನಾಲ್ಕನೇ ಸ್ಥಾನವನ್ನು ಗುರು ತೇಲಿ ಎತ್ತು ಪಡೆದುಕೊಂಡವು.
ಎತ್ತುಗಳು ವೇಗದಲ್ಲಿ ಕೊನೆಯವರೆಗೂ ಭಾರಿ ಪೈಪೋಟಿ ನಡೆಸುವ ಮೂಲಕ ನೋಡುಗರಿಗೆ ಅತ್ಯಂತ ಕುತೂಹಲ ಮೂಡಿಸಿದವು. ಕರಿ ಹರಿಯುವ ಕಾರ್ಯಕ್ರಮದ ನಂತರ ಹನುಮಾನ ದೇವಸ್ಥಾನದಲ್ಲಿ ಮಾಳಿಂಗರಾಯ ಪೂಜಾರಿಯಿಂದ ಬಿತ್ತನೆಗಾಗಿ ರೈತರಿಗೆ ಬೀಜ ಕೊಡುವ ಕಾರ್ಯಕ್ರಮ ನಡೆಯಿತು. ಇಲ್ಲಿ ಕೊಡುವ ಬೀಜಗಳನ್ನು ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡುವ ಕಾಳುಗಳಲ್ಲಿ ಕೂಡಿಸಿ ಬಿತ್ತನೆ ಮಾಡುವುದರಿಂದ ಬೆಳೆ ಸಮೃದ್ಧಿಯಾಗಿ ಬರುತ್ತದೆ ಎಂಬ ನಂಬಿಕೆ ಇದೆ.
ಇದೇ ಸಂದರ್ಭದಲ್ಲಿ ಊರಿನ ಗೌಡರಾದ ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಶ್ರೀಶೈಲ ಉಳ್ಳಾಗಡ್ಡಿ, ಮಲ್ಲಪ್ಪ ಜನವಾಡ, ಮಲ್ಲಪ್ಪ ತುಂಗಳ, ಪ್ರಶಾಂತ ಕೊಳಕಿ, ಪಂಡಿತಪ್ಪ ಪಟ್ಟಣ, ಮಹಾಶಾಂತ ಶೆಟ್ಟಿ, ಶ್ರೀಶೈಲ ಧಬಾಡಿ, ದಾನಪ್ಪ ಹುಲಜತ್ತಿ, ಭೀಮಶಿ ಪಾಟೀಲ, ರಮೇಶ ಮಹಿಷವಾಡಗಿ, ಬಸವರಾಜ ಜಾಡಗೌಡ, ಚೆನ್ನಪ್ಪ ಗುಣಕಿ, ಶಿವು ಬಾಗೇವಾಡಿ, ಗಿರಮಲ್ಲಪ್ಪ ಹೂಗಾರ, ಡಾ. ಸದಾನಂದ ಬಿಳ್ಳೂರ, ರೇವಣಪ್ಪ ಶಿವಸಿಂಪಿ, ಭೀಮಸಿ ಆದಗೊಂಡ, ಈಶ್ವರ ಪಾಟೀಲ, ಮಲಕಪ್ಪ ಪಾಟೀಲ ರೈತರು ಮತ್ತು ಗೌಡರ ದೈವ ಮಂಡಳ, ಮಂಗಳವಾರ ಪೇಟೆ ದೈವ ಮಂಡಳ ಹಾಗೂ ಸೋಮವಾರ ಪೇಟೆ ಸಮಸ್ತ ದೈವ ಮಂಡಳದ ಹಿರಿಯರು, ಸುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-saasd

Tamil Nadu : ನೀಲಗಿರಿಯಲ್ಲಿ ಪ್ರವಾಸಿಗರ ಬಸ್ ಕಮರಿಗೆ ಬಿದ್ದು 8 ಮಂದಿ ಮೃತ್ಯು

1-sasa

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

accident

Holehonnuru ; ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

1-asdasd

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

Shamanuru Shivashankarappa

Lingayat ಅಧಿಕಾರಿಗಳಿಗೆ ಅನ್ಯಾಯ ಹೇಳಿಕೆಗೆ ಬದ್ಧ: ಶಾಮನೂರು ಪುನರುಚ್ಚಾರ

1-sasa-sa

Hirekerur ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasd-a

Mahalingpur ಮಹಾಲಿಂಗೇಶ್ವರ ಅದ್ದೂರಿ ರಥೋತ್ಸವ: ಲಕ್ಷಾಂತರ ಭಕ್ತರು ಭಾಗಿ

Bagalkote; ಸ್ವಚ್ಛ ವಾಹಿನಿಗೆ ಬಂತು ಗಾಂಧಿ ಪುರಸ್ಕಾರ

Bagalkote; ಸ್ವಚ್ಛ ವಾಹಿನಿಗೆ ಬಂತು ಗಾಂಧಿ ಪುರಸ್ಕಾರ

Rabkavi Banhatti ಕೆರೆ ರಸ್ತೆಯಲ್ಲಿ 20 ಕೆಜಿ ಗಾಂಜಾ ಗಿಡ ವಶ

Rabkavi Banhatti ಕೆರೆ ರಸ್ತೆಯಲ್ಲಿ 20 ಕೆಜಿ ಗಾಂಜಾ ಗಿಡ ವಶ

Bagalkote ಅ. 28ರಂದು ಉತ್ತರ ಕರ್ನಾಟಕದ ಕಿಚಡಿ ಜಾತ್ರೆ

Bagalkote ಸೆ. 28ರಂದು ಉತ್ತರ ಕರ್ನಾಟಕದ ಕಿಚಡಿ ಜಾತ್ರೆ

Rabkavi Banhatti ದೇವರ ದಾಸಿಮಯ್ಯ ಹಟಗಾರ ಸಮಾಜದ ಜಗದ್ಗುರು ಅಸ್ತಂಗತ

Rabkavi Banhatti ದೇವರ ದಾಸಿಮಯ್ಯ ಹಟಗಾರ ಸಮಾಜದ ಜಗದ್ಗುರು ಅಸ್ತಂಗತ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

5 eyes

Five Eyes; ಫೈವ್‌ ಐಸ್‌ ಜಾಗತಿಕವಾಗಿ ಮತ್ತೆ ಸದ್ದು ಮಾಡಿದ ಗುಪ್ತಚರ ಒಕ್ಕೂಟ

beg

Pakistani: ಅರಬ್‌ ರಾಷ್ಟ್ರಗಳಲ್ಲಿ ಪಾಕ್‌ ಭಿಕ್ಷುಕರ ಸಾಮ್ರಾಜ್ಯ!

art of living

Art of Living: ಕಲಾರಾಧನೆಗೆ ಆರ್ಟ್‌ ಆಫ್ ಲಿವಿಂಗ್‌ ಸಾಮರಸ್ಯದ ವೇದಿಕೆ

chandrayaan 3………….

Fraud: ಚಂದ್ರಯಾನ-3 ಹೆಸರಿನಲ್ಲಿ 20 ಕೋಟಿ ರೂ. ವಂಚನೆ!

ny rain

Rain: ದಿಢೀರ್‌ ಪ್ರವಾಹಕ್ಕೆ ನ್ಯೂಯಾರ್ಕ್‌ ತತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.