
ಆತ್ಮಹತ್ಯೆಗೆ ಶರಣಾದ ನೇಕಾರನ ಕುಟುಂಬಕ್ಕೆ ಡಿಕೆಶಿ ಸಾಂತ್ವಾನ
Team Udayavani, Jul 18, 2021, 9:57 PM IST

ಬನಹಟ್ಟಿ : ರಾಜ್ಯದಲ್ಲಿ ನೇಕಾರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ. ನೇಕಾರರು ಕಳೆದೊಂದು ವರ್ಷದಲ್ಲಿ ೨೫ ಕ್ಕೂ ಅಧಿಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕುಟುಂಬಗಳಿಗೆ ಸರ್ಕಾರ ಸ್ವತಃ ಘೋಷಿಸಿರುವ ೫ ಲಕ್ಷ ರೂ. ಪರಿಹಾರವನ್ನು ಒದಗಿಸಲು ವಿಳಂಬನೀತಿ ಸರಿಯಲ್ಲ ತಕ್ಷಣವೇ ಪರಿಹಾರ ಒದಗಿಸಿ ಮೃತ ಕುಟುಂಬಕ್ಕೆ ನೆರವಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ಬಾಗಲಕೊಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರದ ಆತ್ಮಹತ್ಯೆ ಮಾಡಿಕೊಂಡ ಷಣ್ಮುಖ ಮುರಗುಂಡಿ ಅವರ ಮನೆಗೆ ಭೆಟ್ಟಿ ನೀಡಿ ಸಾಂತ್ವನ ಹೇಳಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಕೊರೊನಾ ಸಂದರ್ಭದ ೨ ಸಾವಿರ ಸಹಾಯ ಧನ ಬಹುತೇಕ ನೇಕಾರ ಕುಟುಂಬಕ್ಕೆ ದೊರಕಿಲ್ಲ. ಪ್ರಮುಖವಾಗಿ ನೇಕಾರ ಆತ್ಮಹತ್ಯೆ ಮಾಡಿಕೊಳ್ಳದಂತೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಳ್ಳದಿರುವದು ವಿಪರ್ಯಾಸವೆಂದು ಬೇಸರ ವ್ಯಕ್ತಪಡಿಸಿದರು.
ನೇಕಾರರ ಸಮಸ್ಯೆಗಳನ್ನು ಆಲಿಸಿದ್ದಲ್ಲದೆ ಮೃತ ಕುಟುಂಬಗಳಿಗೆ ಶೀಘ್ರ ಪರಿಹಾರಕ್ಕೆ ವಿಧಾನಸೌಧದಲ್ಲಿ ವಿಪಕ್ಷ ಒತ್ತಡ ಹೇರುತ್ತದೆ. ಅಲ್ಲದೆ ಕೂಲಿ-ನೇಕಾರರ ಸ್ಥಿತಿ ಕುರಿತು ಸಮಗ್ರ ಅವಲೋಕಿಸಿದ್ದು, ಈಗ ದೊರಕುವ ದಿನದ ವೇತನ ಬಗ್ಗೆಯೂ ಸರ್ಕಾರ ಗಮನಸೆಳೆದು ನೇಕಾರರ ಬದುಕಿನ ಭದ್ರತೆಗೆ ಹೋರಾಡುತ್ತೇವೆಂದು ಡಿ.ಕೆ. ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

Bhatkal: ಸ್ವಚ್ಛತಾ ಕಾರ್ಯಕ್ರಮಕ್ಕೆ ಭಟ್ಕಳ ಉಪವಿಭಾಗಾಧಿಕಾರಿ ಚಾಲನೆ