Mahalingpur; ಬೀದಿನಾಯಿಗಳ ದಾಳಿಗೆ ಗೋಶಾಲೆಯ ಗೋವು ಬಲಿ
Team Udayavani, Dec 13, 2023, 10:43 PM IST
ಮಹಾಲಿಂಗಪುರ: ಬೀದಿನಾಯಿಗಳು ಕಡಿದು ಬುಧವಾರ ಮಹಾಲಿಂಗೇಶ್ವರ ಗೋಶಾಲೆಯ ಗೋವು ಒಂದು ಮೃತಪಟ್ಟಿದೆ.
ಪಟ್ಟಣದಲ್ಲಿ ಕೆಲವು ದಿನಗಳಿಂದ ಮಹಾಲಿಂಗೇಶ್ವರ ದೇವಸ್ಥಾನ ಹಿಂಭಾಗ ಮತ್ತು ಡಬಲ್ ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಹಲವು ಬಾರಿ ಪುರಸಭೆ ಮನವಿ ಸಲ್ಲಿಸಿದರು ಸಹ ಪುರಸಭೆ ಅಧಿಕಾರಿಗಳು ಬೀದಿನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ವಿಫಲರಾದ ಕಾರಣ, ಮಹಾಲಿಂಗೇಶ್ವರ ಗೋಶಾಲೆಯ ಸೇವಕರು ಮತ್ತು ಮಠದ ಭಕ್ತರು ಮೃತ ಗೋವುನ್ನು ತಳ್ಳುಗಾಡಿಯಲ್ಲಿ ಹಾಕಿಕೊಂಡು ಪಟ್ಟಣದಲ್ಲಿ ಮೆರವಣಿಗೆ ನಡೆಸಿಕೊಂಡು ಪುರಸಭೆಗೆ ಬಂದು ಬೀದಿನಾಯಿಗಳ ಹಾವಳಿ ನಿಯಂತ್ರಿಸಿ ಗೋಶಾಲೆಯಲ್ಲಿನ ಗೋವಿಗಳನ್ನು ಉಳಿಸಲು ಆಗ್ರಹಿಸಿ ಪುರಸಭೆ ವ್ಯವಸ್ಥಾಪಕ ಎಸ್.ಎನ್. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ವ್ಯವಸ್ಥಾಪಕ ಎಸ್.ಎನ್.ಪಾಟೀಲ್ ಮಾತನಾಡಿ ಪುರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೂಚಿಸಿ ಸರ್ಕಾರದ ನಿಯಮಾವಳಿಯಂತೆ ಬೀದಿನಾಯಿಗಳನ್ನು ನಿಯಂತ್ರಿಸುವ ಭರವಸೆ ನೀಡಿದರು.
ಮಹಾಲಿಂಗೇಶ್ವರ ಮಠದ ಸೇವಕರಾದ ಈಶ್ವರ ಮಠದ, ಮಂಜುನಾಥ ವಿಭೂತಿಮಠ, ಸಿದ್ದಯ್ಯ ಮಠದ, ಶ್ರೀಶೈಲ ಮಠದ, ಗಿರಿಮಲ್ಲ ಕೈಪಾಳಿ, ಶ್ರೀಧರ ಗಿಂಡೆ, ಸಂತೋಷ ಶಿರೋಳ, ಅರುಣ ಪುರಾಣಿಕ, ಭರತ ಕದ್ದಿಮನಿ, ಅಭಿ ಲಮಾಣಿ, ಶಿವಾ ಟಿರ್ಕಿ, ಅಕ್ಷಯ ಜಳ್ಳಿ, ಸಚಿನ ಖೋತ, ಸುರೇಶ್ ಕೊಣ್ಣೂರ, ಪ್ರಮೋದ ಬಾಳಿಕಾಯಿ, ಅನೀಲ ಕಿರಿಕಿರಿ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ