ದ್ವಿತೀಯ ಹಂತದಲ್ಲಿ ಹೈಕಮಾಂಡ್ ಸಚಿವ ಸ್ಥಾನ ನೀಡುವ ವಿಶ್ವಾಸ – ಸವದಿ
Team Udayavani, Aug 5, 2021, 9:50 PM IST
ಬನಹಟ್ಟಿ: ರಾಜ್ಯದ ನೇಕಾರ ಸಮುದಾಯದ ಅಭ್ಯುದಯಕ್ಕೆ ಹಾಗು ಪುನಶ್ಚೇತನಕ್ಕೆ ನೇಕಾರ ಕ್ಷೇತ್ರದ ಶಾಸಕರೋರ್ವರಿಗಾದರೂ ಸಚಿವ ಸ್ಥಾನ ನೀಡಬೇಕು. ಮೊದಲ ಹಂತದಲ್ಲಿಯೇ ನನಗೆ ಸ್ಥಾನ ದೊರಕುವ ನಿರೀಕ್ಷೆಯಿತ್ತು. ಹಲವಾರು ಕಾರಣಗಳಿಂದ ಉಳಿಯುವಂತಾಗಿದ್ದು, ದ್ವಿತೀಯ ಹಂತದಲ್ಲಿ ನಿಶ್ಚಿತವಾಗಿಯೂ ಸಚಿವ ಸ್ಥಾನ ನೀಡುವಲ್ಲಿ ಹೈಕಮಾಂಡ್ ಅನುಮತಿ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಅವರು ಗುರುವಾರ ರಬಕವಿ-ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿನ ನಾಯಕರ ಒತ್ತಡದಿಂದ ರಾಜಕೀಯ ಮುಳ್ಳಿನ ಹಾಸಿಗೆಯಾಗಿದೆ. ನೇಕಾರರ ಕಷ್ಟ-ಸುಖಗಳನ್ನು ಅರಿತಿದ್ದು, ರಾಜ್ಯದ ನೇಕಾರರ ಅನುಭವ ಗೊತ್ತಿದೆ. ನೇಕಾರ ಹಾಗೂ ನೇಕಾರಿಕೆಗೆ ನ್ಯಾಯ ಕೊಡಬೇಕಾದರೆ ನೇಕಾರ ಕ್ಷೇತ್ರದ ನನಗೆ ಸಚಿವ ಸ್ಥಾನ ಕೊಡಬೇಕು.
ರಾಜಕೀಯದಲ್ಲಿ ಲಾಭಿ ಸಹಜ. ನಿಷ್ಠಾವಂತರಿಗೆ, ಹಿರಿಯರನ್ನು ಬದಿಗಿಟ್ಟು ಹೊಸಬರಿಗೆ ನೀಡಿದ್ದಾರೆ. ಈ ಸಿದ್ಧಾಂತ ಬಿಜೆಪಿಯಲ್ಲಿ ಎಂದಿಗೂ ಇಲ್ಲ. ಯಾವ ಒತ್ತಡಕ್ಕೆ ಮಣಿದು ಮನೆ ಹಾಕಿದ್ದಾರೋ ತಿಳಿದಿಲ್ಲ. ಅಥವಾ ನಮ್ಮಲ್ಲಿಯೇನು ದೋಷವಿದೆ ಎಂಬುದು ಅರಿವಿಲ್ಲ. ಮುಂದೆ ಒಳ್ಳೆಯ ಕಾಲ ಬರುತ್ತದೆ ಕಾದು ನೋಡಿ ಎಂದು ಸಚಿವ ಸ್ಥಾನದ ವಿಶ್ವಾಸದಲ್ಲಿ ನಕ್ಕು ನಮಸ್ಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ