Mudhol; ನಮ್ಮ ಜಾಗದಲ್ಲಿ ಧ್ವಜ ಹಾರಿಸಬೇಡಿ..: ಜಾಗದ ವ್ಯಾಜ್ಯಕ್ಕೆ ಧ್ವಜಾರೋಹಣ ವಿಳಂಬ
Team Udayavani, Aug 15, 2023, 12:02 PM IST
ಮುಧೋಳ: ಜಾಗದ ವ್ಯಾಜ್ಯದ ಹಿನ್ನೆಲೆ ಕುಟುಂಬವೊಂದು ಧ್ವಜಾರೋಹಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಧ್ವಜಾರೋಹಣವನ್ನು ಕೆಲಹೊತ್ತು ವಿಳಂಬವಾಗಿ ನೆರವೇರಿಸಿದ ಘಟನೆ ಸಮೀಪದ ಸೋರಗಾಂವ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣ ಅಭಿವೃದ್ಧಿ ಸೇವಾ ಸಮಿತಿ ಕಚೇರಿಯ ನಾಮಫಲಕದೆದುರು ಪ್ರತಿವರ್ಷದಂತೆ ಈ ವರ್ಷವೂ ಧ್ವಜಾರೋಹಣ ನೇರವೇರಿಸಲು ಸಮಿತಿ ಸದಸ್ಯರು ಮುಂದಾಗಿದ್ದರು. ಆದರೆ ಸಮಿತಿ ಕಚೇರಿಗೆ ಹೊಂದಿಕೊಂಡಿದ್ದ ಮನೆಯಲ್ಲಿನ ಕುಟುಂಬವೊಂದು ಧ್ವಜಾರೋಹಣ ನೆರವೇರಿಸುವ ಜಾಗ ನಮಗೆ ಸೇರಿದ್ದು ಇಲ್ಲಿ ಧ್ವಜಾರೋಹಣ ನೆರವೇರಿಸಬೇಡಿ ಎಂದು ತಕರಾರು ತೆಗೆದಿದೆ.
ಇದನ್ನೂ ಓದಿ:1934ರಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ ಗಾಂಧೀಜಿ; ಸಾತಂತ್ರ್ಯ ಹೋರಾಟದ ಸ್ಥಳಗಳು: ಅಂದು ಇಂದು
ಈ ವೇಳೆ ಮಾತಿಗೆ ಮಾತು ಬೆಳೆದು ಕೊಂಚಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಗ್ರಾಮದ ಹಿರಿಯರ ಮಧ್ಯಸ್ಥಿಕೆಯಲ್ಲಿ ತಕರಾರು ತೆಗೆದ ಕುಟುಂಬಸ್ಥರಿಗೆ ಮೊದಲು ಧ್ವಜಾರೋಹಣಕ್ಕೆ ಅನುವು ಮಾಡಿಕೊಡಿ ಜಾಗದ ವ್ಯಾಜ್ಯದ ಬಗ್ಗೆ ನಾಳೆ ತೀರ್ಮಾಣ ಮಾಡೋಣ ಎಂದು ಮನವರಿಕೆ ಮಾಡುವ ಮೂಲಕ ಗ್ರಾಮಸ್ಥರೆಲ್ಲರೂ ಒಂದಾಗಿ 10 ಗಂಟೆ ಸುಮಾರಿಗೆ ಧ್ವಜಾರೋಹಣ ನೆರವೇರಿಸಿದರು.