ಮುಧೋಳ: ಯುಪಿಐ ಪೇಮೆಂಟ್‌ನಲ್ಲಿ ಮುಧೋಳ ಮಹತ್ತರ ಸಾಧನೆ


Team Udayavani, Mar 16, 2024, 6:18 PM IST

ಮುಧೋಳ: ಯುಪಿಐ ಪೇಮೆಂಟ್‌ನಲ್ಲಿ ಮುಧೋಳ ಮಹತ್ತರ ಸಾಧನೆ

ಉದಯವಾಣಿ ಸಮಾಚಾರ
ಮುಧೋಳ: ಕಳೆದ ತಿಂಗಳು ವಾಯವ್ಯ ರಸ್ತೆ ಸಾರಿಗೆ ನಿಮಗದಲ್ಲಿ ಕಾರ್ಯಾರಂಭ ಮಾಡಿದ್ದ ಯುಪಿಐ ವಹಿವಾಟಿನಲ್ಲಿ ಮುಧೋಳ ಘಟಕದ ಸಿಬ್ಬಂದಿ ಅದ್ವಿತೀಯ ಸಾಧನೆಗೈಯುವ ಮೂಲಕ ಸಾರ್ವಜನಿಕರಲ್ಲಿ ಯುಪಿಐ ವಹಿವಾಟಿಗೆ ಪ್ರೇರೇಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿನ ಒಟ್ಟು 50 ಘಟಕಗಳಲ್ಲಿ ಯುಪಿಐ ವಹಿವಾಟು ಕಾರ್ಯಾರಂಭ ಮಾಡಿದ್ದು, ಇದೀಗ ಎಲ್ಲ ಘಟಕಗಳ ವಹಿವಾಟಿನ ಮೊದಲ 10 ಸ್ಥಾನದಲ್ಲಿ ಮುಧೋಳ ಘಟಕವು ನಾಲ್ಕನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆಗೈದಿದೆ.

ಫೆ.13ರಂದು ಯುಪಿಐಯನ್ನು ಆಯ್ದ ಘಟಕಗಳಲ್ಲಿ ಕಾರ್ಯಗತಗೊಳಿಸಲಾಗಿತ್ತು. ಡಿಜಿಟಲ್‌ ಇಂಡಿಯಾ ಯೋಜನೆ ಹಾಗೂ
ನಿರ್ವಾಹಕ ಮತ್ತು ಪ್ರಯಾಣಿಕರ ಮಧ್ಯದಲ್ಲಿ ಚಿಲ್ಲರೆ ವ್ಯವಹಾರದ ಕಿರಿಕಿರಿ ತಪ್ಪಿಸುವುದು, ಕ್ಯಾಶ್‌ಲೆಸ್‌ ವ್ಯವಹಾರ ವೃದ್ಧಿಯ ಉದ್ದೇಶದಿಂದ ಆರಂಭಗೊಂಡ ಯುಪಿಐ ವಹಿವಾಟಿಗೆ ಸಾರ್ವಜನಿಕರಿಂದ ಆರಂಭದಲ್ಲಿಯೇ ಉತ್ತಮ ಸ್ಪಂದನೆ ದೊರೆಯಿತು. ಇದೀಗ ಸಾರಿಗೆ ಬಸ್‌ ಗಳಲ್ಲಿ ಒಂದು ತಿಂಗಳಿನ ಅಂತರದಲ್ಲಿ ಲಕ್ಷಾಂತರ ರೂ. ಯುಪಿಐ ವಹಿವಾಟು ನಡೆಯುತ್ತಿದೆ. ಹೀಗೆ ಆರಂಭಗೊಂಡಿರುವ ಯುಪಿಐನಿಂದ ಇದೀಗ ಮುಧೋಳ ಘಟಕ ಮಹತ್ತರ ಸಾಧನೆ ಮಾಡಿದೆ.

ಟಾಪ್‌ ಹತ್ತರಲ್ಲಿ ಜಿಲ್ಲೆಯ ಮೂರು ಘಟಕಗಳು:
ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ  ಮಾ. 3ರಿಂದ ಮಾ.13ರವರೆಗಿನ ಯುಪಿಐ ವಹಿವಾಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ
ಸಾರಿಗೆ ನಿಗಮದಲ್ಲಿ ಗುರುತಿಸಿರುವ ಟಾಪ್‌ 10ರಲ್ಲಿ ಜಿಲ್ಲೆಯ ಮುಧೋಳ, ಬಾಗಲಕೋಟೆ ಹಾಗೂ ಗುಳೇದಗುಡ್ಡ ಘಟಕಗಳು ಸ್ಥಾನ ಪಡೆದುಕೊಂಡಿವೆ. ಮೊದಲ ಹತ್ತರ ಸ್ಥಾನದಲ್ಲಿ ಕ್ರಮವಾಗಿ ಗೋಕಾಕ, ಹುಬ್ಬಳ್ಳಿ-1, ಬೆಳಗಾವಿ, ಮುಧೋಳ, ಹುಬ್ಬಳ್ಳಿ-2, ಬಾಗಲಕೋಟೆ, ಬೆಟಗೇರಿ, ಗುಳೇದಗುಡ್ಡ, ಅಥಣಿ, ಸಂಕೇಶ್ವರ ಘಟಕಗಳು ಸ್ಥಾನ ಪಡೆದುಕೊಂಡಿವೆ.

ಮುಧೋಳ 4, ಬಾಗಲಕೋಟೆ 6 ಹಾಗೂ ಗುಳೇದಗುಡ್ಡ ಘಟಕ 8ನೇ ಸ್ಥಾನ ಪಡೆದುಕೊಂಡಿವೆ. ನಾಲ್ಕನೇ ಸ್ಥಾನದಲ್ಲಿರುವ
ಮುಧೋಳ ಘಟಕದ ವತಿಯಿಂದ ಒಟ್ಟು 11534 ಯುಪಿಐ ವಹಿವಾಟು ನಡೆದಿದೆ. ಒಟ್ಟು 7,67,431 ರೂ. ಸಂಗ್ರಹವಾಗಿದೆ.

ನಿರ್ವಾಹಕನ ಸಾಧನೆ: ಇನ್ನು ಯುಪಿಐ ವಹಿವಾಟಿನಲ್ಲಿ ವಾಯವ್ಯ ರಸ್ತೆ ಸಾರಿಗೆ ನಿಗಮದಲ್ಲಿಯೇ ಅತಿ ಹೆಚ್ಚು ವಹಿವಾಟು
ನಡೆಸುವ ಮೂಲಕ ಮುಧೋಳ ಘಟಕದ ಡಿ.ಆರ್‌. ಬಾಗೇವಾಡಿ ವಿಶೇಷ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಬಾಗೇವಾಡಿ ಮಾ. 6ರಂದು ಒಟ್ಟು 157 ಪ್ರಯಾಣಿಕರಿಂದ ಯುಪಿಐ ವಹಿವಾಟು ನಡೆಸುವ ಮೂಲಕ ಉತ್ತಮ ಕಾರ್ಯನಿರ್ವಹಿಸಿದ್ದಾರೆ.

ನಿರ್ವಾಹಕನ ಕಾರ್ಯವೈಖರಿ ಮೆಚ್ಚಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌.
ಪ್ರಶಂಸನಾ ಪತ್ರ ನೀಡುವ ಮೂಲಕ ನಿರ್ವಾಹಕನ ಬೆನ್ನುತಟ್ಟುವ ಕೆಲಸ ಮಾಡಿದ್ದಾರೆ.

ಚಿಲ್ಲರೆ ಸಮಸ್ಯೆ ಹಾಗೂ ಕ್ಯಾಶ್‌ಲೆಸ್‌ ವ್ಯವಹಾರದ ಉದ್ದೇಶದಿಂದ ಜಾರಿಗೆ ತಂದಿರುವ ಯುಪಿಐ ವ್ಯವಸ್ಥೆ ಇಂದು ಹೆಚ್ಚು ಜನಪ್ರಿಯವಾಗಿದೆ. ಈ ವಿಭಾಗದಲ್ಲಿ ಮುಧೋಳ ಘಟಕ ಸಲ್ಲಿಸುತ್ತಿರುವ ಸೇವೆ ನಮಗೆ ತೃಪ್ತಿ ತಂದಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರು ಯುಪಿಐ ವಹಿವಾಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳುವ ಮೂಲಕ ವ್ಯವಹಾರ ಸರಳೀಕರಣ
ಮಾಡಿಕೊಳ್ಳಬೇಕು.
ಸಂಗಮೇಶ ಮಾಟೊಳ್ಳಿ, ಮುಧೋಳ ಘಟಕ ವ್ಯವಸ್ಥಾಪಕ 

ಯುಪಿಐನಿಂದ ಚಿಲ್ಲರೆ ಸಮಸ್ಯೆಗೆ ಮುಕ್ತಿ ದೊರೆತಿದೆ. ಸಾರಿಗೆ ಬಸ್‌ನಲ್ಲಿ ಆನ್‌ಲೈನ್‌ ಪೇಮೆಂಟ್‌ ಮಾಡುವ ಮೂಲಕ ಕ್ಯಾಶ್‌ಲೆಸ್‌
ವ್ಯವಹಾರವೂ ಸರಳವಾಗಿದೆ. ಬಸ್‌ನಲ್ಲಿ ಮೊದಲಿಗಿಂತ ಈಗಿನ ಪ್ರಯಾಣ ಹೆಚ್ಚು ಅನುಕೂಲವಾಗಿದೆ.
ಬಸವರಾಜ ಕೋಲೂರ,ಪ್ರಯಾಣಿಕ

*ಗೋವಿಂದಪ್ಪ ತಳವಾರ

Ad

ಟಾಪ್ ನ್ಯೂಸ್

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Tragedy: ಶಾಲಾ ಬಸ್ಸಿಗೆ ರೈಲು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Mudhol: ಅರಣ್ಯದಂಚಿನಲ್ಲಿ ಶಮನವಾಗದ ಸಂಘರ್ಷ

10

kulageri cross: ‘ಆಧಾರ್‌’ಗೆ ವಿಕಲಚೇತನ ಯುವತಿ ಅಲೆದಾಟ

4-umashree

Mahalingpur:ಕುಂದಾನಗರಿಯಲ್ಲಿ ಗಮನ ಸೆಳೆದ ಹಿರಿಯ ನಟಿ ಉಮಾಶ್ರೀ ಅಭಿನಯ‌ದ ʼಶರ್ಮಿಷ್ಠೆʼ ನಾಟಕ

1-aa-aa-aa-kal

Yakshagana;ಬನಹಟ್ಟಿಯಲ್ಲಿ ಗಮನ ಸೆಳೆದ ‘ಪಾಪಣ್ಣ ವಿಜಯ ಗುಣಸುಂದರಿ’

11-rabkavi

Rabakavi-Banahatti: ಎನ್‌ಎಂಎಂಎಸ್‌ ಪರೀಕ್ಷೆ : ಜಮಖಂಡಿ ಮೇಲುಗೈ

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.