ಹೆಲ್ಮೆಟ್ ಹಾಕದಿದ್ದರೆ ಕಾಲೇಜಿಗಿಲ್ಲ ಪ್ರವೇಶ.!

ಜಿಲ್ಲೆಯ ಪದವಿ ಕಾಲೇಜುಗಳ ಮುಖ್ಯಸ್ಥರು-ಜಿಲ್ಲಾ ಪೊಲೀಸ್‌ ಇಲಾಖೆ ನಿರ್ಧಾರ, ಸೆ.27ರಿಂದ ಕಟ್ಟುನಿಟ್ಟಿನ ಅನುಷ್ಠಾನ

Team Udayavani, Sep 25, 2019, 9:59 AM IST

bk-tdy-1

ಬಾಗಲಕೋಟೆ: ಹೆಲ್ಮೆಟ್‌ ಇಲ್ಲದಿದ್ರೆ ಪೆಟ್ರೋಲ್‌ ಬಂಕ್‌ ನಲ್ಲಿ ಪೆಟ್ರೋಲ್‌ ಹಾಕಲ್ಲ ಈಗ ಇದು ಹಳೆಯ ಸುದ್ದಿ. ಹೆಲ್ಮೆಟ್‌ ಇಲ್ಲದೇ ವಿದ್ಯಾರ್ಥಿಗಳು ಇನ್ಮುಂದೆ ಕಾಲೇಜಿಗೆ ಬಂದರೆ ಕಾಲೇಜು ತರಗತಿಗೆ ಪ್ರವೇಶ ಇಲ್ಲ ಇದು ಹೊಸ ಸುದ್ದಿ.

ಹೌದು. ಇನ್ನು ಮುಂದೆ ವಿದ್ಯಾರ್ಥಿಗಳು ಹೆಲ್ಮೆಟ್‌ ಹಾಕದಿದ್ರೆ,ಸಂಚಾರಿ ನಿಯಮ ಪಾಲಿಸದಿದ್ರೆ, ಬೈಕ್‌ಗಳ ದಾಖಲೆಸರಿಯಾಗಿ ಇಟ್ಟುಕೊಳ್ಳದಿದ್ರೆ ಕಾಲೇಜಿಗೆ ಪ್ರವೇಶ ಕೊಡುವುದಿಲ್ಲ. ಜಿಲ್ಲೆಯ ಪದವಿ ಕಾಲೇಜುಗಳ ಮುಖ್ಯಸ್ಥರು ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಇಂತಹ ನಿರ್ಧಾರ ಕೈಗೊಂಡಿದ್ದು, ಇದು ಸೆ.27ರಿಂದ ಜಾರಿಗೊಳ್ಳಲಿದೆ.

ಹೊಸ ಮೋಟಾರು ವಾಹನ ಕಾಯ್ದೆಯನ್ನು ತಳ ಮಟ್ಟದಲ್ಲೇ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ವಿವಿಧ ಹಂತದ ಪ್ರಕ್ರಿಯೆಗೆ ಚಾಲನೆ ನೀಡಿದೆ. ಬೈಕ್‌ ಮತ್ತು ಕಾರು ಸವಾರರು ಹೆಲ್ಮೆಟ್‌, ಸೀಟ್‌ ಬೆಲ್ಟ್, ದಾಖಲೆ ಮತ್ತು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕು. ಹೆಲ್ಮೆಟ್‌ ಇಲ್ಲದಿದ್ರೆ ಪೆಟ್ರೋಲ್‌ ಬಂಕ್‌ ನಲ್ಲಿ ಪೆಟ್ರೋಲ್‌ ಕೊಡಲ್ಲ. ಇದನ್ನು ಎಲ್ಲ ಪೆಟ್ರೋಲ್‌ ಬಂಕ್‌ ಮಾಲಿಕರೊಂದಿಗೆ ಸಭೆ ನಡೆಸಿ ಅವರ ಒಪ್ಪಿಗೆ ಪಡೆಯಲಾಗಿದೆ. ಅಲ್ಲದೇ ಪ್ರತಿ ಪೆಟ್ರೋಲ್‌ ಬಂಕ್‌ನಲ್ಲೂ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ, ಅಲ್ಲಿಯೇ ದಂಡ ವಿಧಿಸುವ ಪ್ರಕ್ರಿಯೆ ಕೂಡ ಜಾರಿಗೊಳ್ಳಲಿದೆ. ಅದರೊಂದಿಗೆ ಕಾಲೇಜು ವಿದ್ಯಾರ್ಥಿಗಳು ಹೊಸ ಕಾನೂನು ಪಾಲಿಸುವನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.

ದಾಖಲೆ ಸಮೇತ ಬರಬೇಕು: ಕಾಲೇಜು ವಿದ್ಯಾರ್ಥಿಗಳು ಇನ್ಮುಂದೆ ಹೆಲ್ಮೆಟ್‌ ಹಾಕಿಕೊಳ್ಳುವ ಜತೆಗೆ ಬೈಕ್‌ಗಳ ದಾಖಲೆ ಸಮೇತ ಕಾಲೇಜಿಗೆ ಬರಬೇಕು. ಬೈಕ್‌ ಜತೆಗೆ ಕಾಲೇಜಿಗೆ ಬರುವಾಗ ಹೆಲ್ಮೆಟ್‌ ಹಾಕಿರದಿದ್ದರೆ ಅವರಿಗೆ ತರಗತಿಯಲ್ಲಿ ಪ್ರವೇಶ ಕೊಡಲ್ಲ. ಈ ಕುರಿತು ಎಲ್ಲ ಸರ್ಕಾರಿ, ಖಾಸಗಿ ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಎಸ್ಪಿ ಲೋಕೇಶ ಜಗಲಾಸರ ತಿಳಿಸಿದ್ದಾರೆ. ಇದಕ್ಕೆ ಜಿಲ್ಲೆಯ ಕಾಲೇಜುಗಳ ಮುಖ್ಯಸ್ಥರು ಒಪ್ಪಿಗೆ ನೀಡಿದ್ದಾರೆ.

ಎಷ್ಟಿವೆ ಕಾಲೇಜು: ಪದವಿ ಪೂರ್ವ ಶಿಕ್ಷಣ ಇಲಾಖೆಯಡಿ ಬರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು 44 ಇವೆ. 38 ಅನುದಾನಿತ, 61 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ಸೇರಿ ಸುಮಾರು 60 ಸಾವಿರವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಪದವಿ ಪೂರ್ವ ವಿದ್ಯಾರ್ಥಿಗಳು 18 ವಯೋಮಿತಿ ಒಳಗಿದ್ದು, ಅವರಿಗೆ ವಾಹನ ಚಾಲನಾ ಪರವಾನಗಿ ಇರಲ್ಲ. ಹೀಗಾಗಿ ಅವರು ಬೈಕ್‌ ಅಥವಾ ಕಾರು ಸಮೇತ ಕಾಲೇಜಿಗೆ ಬರುವಂತಿಲ್ಲ. ಇನ್ನು ಉನ್ನತ ಶಿಕ್ಷಣದಡಿ ಬರುವ ಸರ್ಕಾರಿ ಪದವಿ ಕಾಲೇಜುಗಳು 18 ಇದ್ದು, 45 ಖಾಸಗಿ ಪದವಿ ಕಾಲೇಜುಗಳಿವೆ. ಇಲ್ಲಿ ಅಂದಾಜು 26ರಿಂದ 28 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲ 18 ವರ್ಷ ಮೇಲ್ಪಟ್ಟವರಿದ್ದು, ವಾಹನ ಚಾಲನೆ ಪರವಾನಗಿ ಜತೆಗೆ ಹೊಸ ಮೋಟಾರು ಕಾಯ್ದೆಯಡಿ ಎಲ್ಲ ದಾಖಲೆ, ಹೆಲ್ಮೆಟ್‌ ಸಮೇತಕಾಲೇಜಿಗೆಬರಬೇಕು. ಒಂದು ವೇಳೆ, ನಿಯಮ ಉಲ್ಲಂಘಿಸಿದರೆ, ಯಾವುದೇ ಮುಲಾಜಿಲ್ಲದೇ ಅವರನ್ನು ತರಗತಿಯಿಂದ ಹೊರ ಹಾಕಬೇಕು ಎಂಬುದು ಪೊಲೀಸ್‌ ಇಲಾಖೆ ಮನವಿ.

ಈ ನೀತಿ ಅನುಸರಿಸುವುದರಿಂದ 18 ವರ್ಷದೊಳಗಿನ ಮಕ್ಕಳು ಬೈಕ್‌ ಓಡಿಸುವುದು ನಿಲ್ಲಿಸುತ್ತಾರೆ. ಅಲ್ಲದೇ ಹೆಲ್ಮೆಟ್‌ ಇಲ್ಲದೇ ಬೈಕ್‌ ರೈಡಿಂಗ್‌ ಮಾಡುವುದೂ ನಿಲ್ಲುತ್ತದೆ ಎಂಬುದು ಇಲಾಖೆಯ ಆಶಯ. ಇದನ್ನು ಕಾಲೇಜುಗಳ ಮುಖ್ಯಸ್ಥರಿಗೆ ಎಸ್ಪಿ ಲೋಕೇಶ ಮನವರಿಕೆ ಮಾಡಿದ್ದು, ಎಲ್ಲ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಪ್ರಾಚಾರ್ಯರು, ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ.

ಶಿಕ್ಷಕ-ಉಪನ್ಯಾಸಕರಿಗೂ ಕಡ್ಡಾಯ: ವಿದ್ಯಾರ್ಥಿಗಳು ಮಾತ್ರವಲ್ಲ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾರಹಿತ ಹಾಗೂ ಖಾಸಗಿ ಶಾಲೆ-ಕಾಲೇಜುಗಳ ಶಿಕ್ಷಕರು, ಬೈಕ್‌ ಹೊಂದಿದ್ದರೆ ಹೆಲ್ಮೆಟ್‌ ಕಡ್ಡಾಯವಾಗಿ ಹಾಕಿರಬೇಕು. ಕಾರು ಬಳಸುತ್ತಿದ್ದರೆ ಎಲ್ಲ ದಾಖಲೆಗಳ ಜತೆಗೆ ಸೀಟ್‌ ಬೆಲ್ಟ ಹಾಕಿಕೊಂಡೇ ಕಾಲೇಜಿಗೆ ಬರಬೇಕು. ಅವರೂ ನಿಯಮ ಉಲ್ಲಂಘಿಸಿದರೆ ದಂಡ ಬೀಳಲಿದೆ.

ಜಿಲ್ಲೆಯಲ್ಲಿ 40 ಸರ್ಕಾರಿ, 3 ಮೊರಾರ್ಜಿ ದೇಸಾಯಿ, 1 ಅಟಲ್‌ಬಿಹಾರಿ ವಾಜಪೇಯಿ ಪಪೂ ಕಾಲೇಜು ಸೇರಿ ಒಟ್ಟು 44 ಸರ್ಕಾರಿ ಪಪೂ ಕಾಲೇಜುಗಳಿವೆ. 38 ಅನುದಾನಿತ, 61 ಅನುದಾನ ರಹಿತ ಕಾಲೇಜುಗಳಿದ್ದು, ಎಲ್ಲಾ ಕಾಲೇಜುಗಳ ಉಪನ್ಯಾಸಕರು ಹೊಸ ನಿಯಮ ಪಾಲಿಸಲು ತಿಳಿಸಲಾಗಿದೆ. ಪಪೂ ಕಾಲೇಜು ವಿದ್ಯಾರ್ಥಿಗಳು ವಾಹನ ಚಾಲನಾ ಪರವಾನಗಿ ಇಲ್ಲದಿದ್ದರೂ ಬೈಕ್‌ ಸಮೇತ ಕಾಲೇಜಿಗೆ ಬರುತ್ತಿದ್ದು, ಇನ್ಮುಂದೆ ಉಪನ್ಯಾಸಕರು ನಿಗಾ ವಹಿಸಬೇಕು. ವಿದ್ಯಾರ್ಥಿಗಳ ಸುರಕ್ಷತೆ, ಕಾನೂನು ಪಾಲನೆ ದೃಷ್ಟಿಯಿಂದ ಎಲ್ಲರೂಸಹಕರಿಸಬೇಕು. –ಶಶಿಧರ ಪೂಜಾರಿ, ಉಪ ನಿರ್ದೇಶಕ, ಪಪೂ ಶಿಕ್ಷಣ ಇಲಾಖೆ

ಕಾಲೇಜು ವಿದ್ಯಾರ್ಥಿಗಳು, ದಾಖಲೆ ಮತ್ತು ಹೆಲ್ಮೆಟ್‌ ಇಲ್ಲದೇ ಬೈಕ್‌ ಚಲಾಯಿಸುತ್ತಿದ್ದು, ಅದನ್ನು ತಡೆಗಟ್ಟುವ ಜತೆಗೆ ಪ್ರತಿಯೊಂದು ಹಂತದಲ್ಲೂ ಕಾನೂನು ಅನುಷ್ಠಾನ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಕಾಲೇಜುಗಳ ಮುಖ್ಯಸ್ಥರು, ಪ್ರಾಚಾರ್ಯರು ಒಪ್ಪಿದ್ದಾರೆ. ಇದು ಸೆ.27ರಿಂದ ಜಿಲ್ಲೆಯಾದ್ಯಂತ ಜಾರಿಗೊಳ್ಳಲಿದೆ.-ಲೋಕೇಶ ಜಗಲಾಸರ, ಎಸ್ಪಿ

18 ಸರ್ಕಾರಿ, 45 ಖಾಸಗಿ ಪದವಿ ಕಾಲೇಜುಗಳಿದ್ದು, ಸುಮಾರು 28 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಬೈಕ್‌, ಕಾರು ಸಮೇತ ಕಾಲೇಜಿಗೆ ಬರುವುದು ರೂಢಿ. ಅವರೆಲ್ಲ ಇನ್ಮುಂದೆ ಕಡ್ಡಾಯವಾಗಿ ವಾಹನ ದಾಖಲೆ ಸಮೇತ ಹೆಲ್ಮೆಟ್‌, ಸೀಟ್‌ ಬೆಲ್ಟ್ ಧರಿಸಿ ಕಾಲೇಜಿಗೆ ಬರಬೇಕು. ಈ ನಿಯಮ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದಲೂ ಉತ್ತಮ. ಎಲ್ಲ ಕಾಲೇಜುಗಳಲ್ಲಿ ಪಾಲನೆ ಮಾಡಲಾಗುವುದು. -ಡಾ| ಅರುಣಕುಮಾರ ಗಾಳಿ, ಜಿಲ್ಲಾ ನೋಡಲ್‌ ಅಧಿಕಾರಿ, ಉನ್ನತ ಶಿಕ್ಷಣ ಇಲಾಖೆ

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.