Bagalkote ಸೆ. 28ರಂದು ಉತ್ತರ ಕರ್ನಾಟಕದ ಕಿಚಡಿ ಜಾತ್ರೆ

ಜಂಗಮಕ್ಷೇತ್ರ ಪ್ರಭುಲಿಂಗೇಶ್ವರ ಜಾತ್ರೆ

Team Udayavani, Sep 27, 2023, 6:13 PM IST

Bagalkote ಅ. 28ರಂದು ಉತ್ತರ ಕರ್ನಾಟಕದ ಕಿಚಡಿ ಜಾತ್ರೆ

ರಬಕವಿ-ಬನಹಟ್ಟಿ : ಉತ್ತರ ಕರ್ನಾಟಕದಲ್ಲಿ ಕಿಚಡಿ ಜಾತ್ರೆ ಎಂದೇ ಪ್ರಖ್ಯಾತಿ ಪಡೆದ ಚಿಮ್ಮಡದ ಪ್ರಭುಲಿಂಗೇಶ್ವರ ಜಾತ್ರೆ ಸೆ. 28 ರಂದು ಗುರುವಾರ ನಡೆಯಲಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಣ್ಣ ಗ್ರಾಮ ಚಿಮ್ಮಡ. ಈ ಗ್ರಾಮದಲ್ಲಿ ಶತಮಾನಗಳಿಂದ ನಡೆದುಕೊಂಡ ಬಂದ ಪ್ರಭುಲಿಂಗ (12ನೇಶತಮಾನದ ಅಲ್ಲಮ ಪ್ರಭುದೇವ) ದೇವರ ಜಾತ್ರೆ ಅನಂತನ ಹುಣ್ಣಿಮೆಯ ಮುನ್ನ ಜರುಗುತ್ತಾ ಬರುತ್ತಿದೆ. ಜಾತ್ರೆಯ ಅಂಗವಾಗಿ ನೂರಾರು ಒಲೆಗಳನ್ನು ನಿರ್ಮಿಸಿ, ನೂರಾರು ಕೊಳಗ, ಭಾರಿ ಗಾತ್ರದ ಪಾತ್ರೆಗಳಲ್ಲಿ ಅಡುಗೆ ತಯಾರಿಸುತ್ತಾರೆ. ಅನ್ನ ಹಾಗೂ ಬೇಳೆಯ ಸಾಂಬಾರ ಪ್ರತ್ಯೇಕವಾಗಿ ತಯಾರಿಸಿದ ನಂತರ, ಅನ್ನ ಮತ್ತು ಸಾಂಬಾರ ಬೆರೆಸಿ ಕಿಚಡಿ ಎಂಬ ಹೆಸರಿನ ವಿಶಿಷ್ಟ ಪ್ರಸಾದ ತಯಾರಿಸುತ್ತಾರೆ. ವಿಶಿಷ್ಟ ಸ್ವಾದದಿಂದ ಕೂಡಿರುವ ಕಾರಣಕ್ಕೆ ಹಾಗೂ ಈ ಪ್ರಸಾದ ಸೇವಿಸಿದರೆ ರೋಗ ಬರುವುದಿಲ್ಲ, ರೋಗ ಬಂದರೂ ಬೇಗ ವಾಸಿಯಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.

ಜಾತ್ರೆಗೆ ಸುತ್ತಮುತ್ತಲೀನ ಲಕ್ಷಾಂತರ ಜನ ಆಗಮಿಸಿ ಗದ್ದಲದ ನಡುವೆಯೂ ಪ್ರಭುದೇವರ ದರ್ಶನ ಪಡೆದು ಕಿಚಡಿ ಪ್ರಸಾದ ಸೇವಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಪ್ರಮಾಣ ಹೆಚ್ಚುತ್ತಲೆ ಬರುತ್ತಿದೆ. ಒಂದೇ ದಿನ ನಡೆಯುವ ಜಾತ್ರೆ ಈ ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದು.

ಹಿನ್ನೆಲೆ: 12ನೇ ಶತಮಾನದ ವಚನಕಾರರಲ್ಲಿ ಪ್ರಮುಖರಾದ ಅಲ್ಲಮಪ್ರಭು ಶರಣರು ಈ ಗ್ರಾಮಕ್ಕೆ ಬಂದಿದ್ದಾಗ ಮಾಯೆ ಅವರನ್ನು ಕಾಡಿದಳು. ಈ ಮಾಯೆಯ ಕಾಟದಿಂದ ತಪ್ಪಿಸಿಕೊಳ್ಳಲು ಪ್ರಭುದೇವರು ಗ್ರಾಮದ ಹೊರ ವಲಯದಲ್ಲಿರುವ ಬೆಟ್ಟಕ್ಕೆ ಹೋಗಿ ನೆಲೆಸಿದ್ದರು ಹಾಗೂ ಅವರು ಕಿಚಡಿ ಪ್ರಸಾದ ಸೇವಿಸಿದ್ದರು. ತಾವು ಸೇವಿಸಿದ ಪ್ರಸಾದವನ್ನೇ ಭಕ್ತರಿಗೆ ವಿತರಿಸಿದ್ದರು ಎಂಬುದು ಗ್ರಾಮಸ್ಥರ ನಂಬಿಕೆಯೇ ಕಿಚಡಿ ಜಾತ್ರೆಯ ಆಚರಣೆಗೆ ಕಾರಣ. ಈ ನಂಬಿಕೆಯೇ ಪ್ರತಿ ವರ್ಷ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಲು ಜಾತ್ರೆಗೆ ಆಗಮಿಸುವುದು ವಿಶೇಷ. ಹೀಗಾಗಿ ಗ್ರಾಮದಲ್ಲಿ ಹಾಗೂ ಬೆಟ್ಟದಲ್ಲಿ ಪ್ರಭುಲಿಂಗದೇವರ ಹೆಸರಿನಲ್ಲಿ ಎರಡು ದೇವಸ್ಥಾನಗಳಿವೆ. ಬೆಟ್ಟದ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತದೆ.  ಇಲ್ಲಿನ ಜಾತ್ರೆಯ ನುಚ್ಚಿನ ಪ್ರಸಾದದ ಕುರಿತು ಭಕ್ತರಲ್ಲಿ ವಿಚಿತ್ರ ನಂಬಿಕೆ ಇರುವ ಕಾರಣಕ್ಕೆ ಜಾತ್ರೆಗೆ ಬರಲಾಗದೆ ಮನೆಯಲ್ಲಿರುವ ಜನರಿಗೆ ಜಾತ್ರೆಗೆ ಬಂದವರು ಪ್ರಸಾದ ಕಟ್ಟಿಕೊಂಡು ಹೋಗುವುದು ವಾಡಿಕೆ.

ಇಂತಹ ವಿಶೇಷ ಹಾಗೂ ಅಪರೂಪದ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.

-ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆDemocracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

raRabkavi Banhatti 25 ಕೆಜಿ ಬೆಳ್ಳಿ ಅಂಬಾರಿ ಗೌರಿಮನಿ ಕುಟುಂಬದ ಕಲೆಗೆ ಸಾಕ್ಷಿ

Rabkavi Banhatti 25 ಕೆಜಿ ಬೆಳ್ಳಿ ಅಂಬಾರಿ ಗೌರಿಮನಿ ಕುಟುಂಬದ ಕಲೆಗೆ ಸಾಕ್ಷಿ

Bagalkote: ಬೀದಿ ಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ

Bagalkote: ಬೀದಿ ಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ

Hunagund: ನಿಯಮ ಪಾಲಿಸದೇ ರಸ್ತೆ ತಡೆ ನಿರ್ಮಾಣ

Hunagund: ನಿಯಮ ಪಾಲಿಸದೇ ರಸ್ತೆ ತಡೆ ನಿರ್ಮಾಣ

1-sadsadsa

Rabkavi Banhatti; ಶೂನ್ಯ ವಿದ್ಯುತ್ ಬಿಲ್: ಸಂತಸದಲ್ಲಿ ನೇಕಾರರು

Protest: ಮಹಾಲಿಂಗಪುರ ತಾಲೂಕಿಗಾಗಿ ಅಂತಿಮ ಹೋರಾಟ… ಇಂದಿನಿಂದ ಉಪವಾಸ ಸತ್ಯಾಗ್ರಹ

Protest: ಮಹಾಲಿಂಗಪುರ ತಾಲೂಕಿಗಾಗಿ ಅಂತಿಮ ಹೋರಾಟ… ಇಂದಿನಿಂದ ಉಪವಾಸ ಸತ್ಯಾಗ್ರಹ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

ELEPHANT HINDU

Elephant: ಆನೆಯ ದಾರಿಗೆ ನಮ್ಮದೇ ಅಡ್ಡಿ !

rat virtual

Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್‌ ರಿಯಾಲಿಟಿ ಕನ್ನಡಕ

beml

BEML: ಬೆಮೆಲ್‌ ಪರೀಕ್ಷೆಯಲ್ಲೂ ಕನ್ನಡಿಗರಿಗೆ ಅನ್ಯಾಯ

MONEY GONI

Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.