ಸಿಎಂ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ಸೂಕ್ತ ಅಭ್ಯರ್ಥಿ: ವೀರಪ್ಪ ಮೊಯ್ಲಿ
Team Udayavani, Jul 31, 2022, 11:47 PM IST
ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಅಭ್ಯರ್ಥಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆನ್ನಲ್ಲೇ ಅವರಿಬ್ಬರ ಮಧ್ಯೆ ಎಸ್.ಆರ್. ಪಾಟೀಲ್ ಹೆಸರು ಮುನ್ನೆಲೆಗೆ ಬಂದಿದೆ.
ವಿಧಾನಪರಿಷತ್ ವಿಪಕ್ಷ ಮಾಜಿ ನಾಯಕ ಎಸ್.ಆರ್. ಪಾಟೀಲ್ರ ಹೆಸರನ್ನು ಸ್ವತಃ ಮಾಜಿ ಸಿಎಂ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ರವಿವಾರ ಎಸ್.ಆರ್. ಪಾಟೀಲರ 74ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಮೊಲಿ, ಎಸ್.ಆರ್. ಪಾಟೀಲ ಮುಂದಿನ ಸಿಎಂ ಆಗಲು ಯೋಗ್ಯ ಹಾಗೂ ಆದರ್ಶ ನಾಯಕ. ಸಜ್ಜನ, ಹಿರಿಯ ಮುತ್ಸದ್ಧಿ ರಾಜಕಾರಣಿ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಅವರ ಹೆಸರನ್ನು ನಾನು ಶಿಫಾರಸು ಮಾಡಿದ್ದೆ. ಮುಖ್ಯಮಂತ್ರಿಯಾಗಲು ಅವರು ಯೋಗ್ಯ ಹಾಗೂ ಆದರ್ಶ ನಾಯಕ ಎಂದರು.