![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
42 ಗ್ರಾಪಂಗಳಿಂದ 13.99 ಕೋಟಿ ವಿದ್ಯುತ್ ಬಾಕಿ
ಅತಿ ಹೆಚ್ಚು ಬಾಕಿ ಉಳಿಸಿದ ನಂದಿಕೇಶ್ವರ ಗ್ರಾಪಂ ; 27 ಗ್ರಾಪಂನಿಂದ ತಲಾ 10 ಲಕ್ಷಕ್ಕೂ ಹೆಚ್ಚು ಬಾಕಿ
Team Udayavani, Nov 7, 2022, 3:14 PM IST
![10](https://www.udayavani.com/wp-content/uploads/2022/11/10-4-620x372.jpg)
ಬಾಗಲಕೋಟೆ : ಅವಿಭಜಿತ ಬಾದಾಮಿ ತಾಲೂಕಿನ 42 ಗ್ರಾಪಂಗಳಿಂದ ಹೆಸ್ಕಾಂಗೆ ಒಟ್ಟು 13.99 ಕೋಟಿ ವಿದ್ಯುತ್ ಬಾಕಿ ಇದೆ. ಅದರಲ್ಲೂ ಬೀದಿದೀಪಗಳಿಗಿಂತ ಕುಡಿಯುವ ನೀರು ಪೂರೈಕೆ ಯೋಜನೆಗಳಿಂದಲೇ ಅತಿ ಹೆಚ್ಚು ಬಾಕಿ ಇದೆ. ಹೀಗಾಗಿ ಈ ತಾಲೂಕಿನ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ನ.16ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆಯನ್ನು ಹೆಸ್ಕಾಂ ನೀಡಿದೆ.
ಬಾದಾಮಿ, ಗುಳೇದಗುಡ್ಡ ತಾಲೂಕಿನ 27 ಗ್ರಾಪಂಗಳು ತಲಾ 10 ಲಕ್ಷ ರೂ.ಗೂ. ಅಧಿಕ ಬಾಕಿ ಉಳಿಸಿಕೊಂಡಿವೆ. ಈ 27 ಗ್ರಾಪಂಗಳ ವಿದ್ಯುತ್ ಸಂಪರ್ಕ ಮಾತ್ರ ಸಂಪೂರ್ಣ ಕಡಿತಗೊಳ್ಳುವ ಸಾಧ್ಯತೆಯೇ ಹೆಚ್ಚು. ಅದರಲ್ಲೂ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಪಂ ಬರೋಬ್ಬರಿ 150.68 ಲಕ್ಷ ರೂ. ಬಾಕಿ ಉಳಿಸಿಕೊಂಡು ಅತಿ ಹೆಚ್ಚು ಬಾಕಿ ಉಳಿಸಿಕೊಂಡ ಗ್ರಾಪಂಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಆಡಗಲ್ ಗ್ರಾಪಂ 16.22 ಲಕ್ಷ ಬಾಕಿ ಉಳಿಸಿಕೊಂಡಿದ್ದು, ತಲಾ 10 ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂಗಳಲ್ಲಿ ಕೊನೆಯ ಸ್ಥಾನದಲ್ಲಿದೆ.
ನಂದಿಕೇಶ್ವರ ಗ್ರಾಪಂ ವ್ಯಾಪ್ತಿಯ ಕುಡಿಯುವ ನೀರು ಪೂರೈಕೆ ವಿಭಾಗದಲ್ಲಿ ಒಟ್ಟು 30 ಮೀಟರ್ಗಳಿದ್ದು, ಅದರಿಂದ ಸೆಪ್ಟಂಬರ್ ಅಂತ್ಯಕ್ಕೆ 115.41 ಲಕ್ಷ ಬಾಕಿ ಇದೆ. ಅಲ್ಲದೇ ಅತಿ ಹೆಚ್ಚು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ(30 ದಿನಗಳ ಬಳಿಕವೂ ಬಾಕಿ ಉಳಿಸಿಕೊಂಡರೆ ಹೆಸ್ಕಾಂನಿಂದ ಬಡ್ಡಿ ವಿಧಿಸಲಾಗುತ್ತದೆ)ಅಷ್ಟೂ ಮೊತ್ತಕ್ಕೆ ಬರೋಬ್ಬರಿ 10.59 ಲಕ್ಷ ಬಡ್ಡಿ ಆಗಿದೆ. ಇನ್ನು ಬೀದಿದೀಪ ವಿಭಾಗದಲ್ಲಿ 18 ಮೀಟರ್ ಗಳಿದ್ದು, ಅದರಿಂದ 17.61ಲಕ್ಷ ಬಾಕಿ ಬರಬೇಕಿದೆ. ಇದಕ್ಕೆ ಒಟ್ಟು 2.99 ಲಕ್ಷ ಬಡ್ಡಿ ಪಾವತಿಸಬೇಕಿದೆ.
ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕಿನ ಒಟ್ಟು 42 ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ಕುಡಿಯುವ ನೀರು ಪೂರೈಕೆ, ಕಿರು ನೀರಾವರಿ ಯೋಜನೆಗೆ ಒಟ್ಟು 843 ಮೀಟರ್ಗಳಿದ್ದು, ಇದರಿಂದ 1058.44 ಲಕ್ಷ ಬಾಕಿ, 129.30 ಲಕ್ಷ ಬಡ್ಡಿ ಸೇರಿ ಒಟ್ಟು 13.99 ಕೋಟಿ ಹೆಸ್ಕಾಂಗೆ ಬಾಕಿ ಉಳಿಸಿಕೊಳ್ಳಲಾಗಿದೆ. ಅಲ್ಲದೇ ಬೀದಿದೀಪಗಳ ವಿಭಾಗದಲ್ಲಿ 319 ಮೀಟರ್ಗಳಿದ್ದು, ಇದರಿಂದ 106.96 ಲಕ್ಷ , 41.63 ಲಕ್ಷ ಬಡ್ಡಿ ಸೇರಿದಂತೆ ಒಟ್ಟು 154.24 ಲಕ್ಷ ಬಾಕಿ ನೀಡಬೇಕಿದೆ.
ಬೇಕಾಬಿಟ್ಟಿ ಕೊಳವೆ ಬಾವಿಯೇ ಬಾಕಿಗೆ ಕಾರಣ : ಗ್ರಾಪಂ ಅಧಿಕಾರಿಗಳು ಹೇಳುವ ಪ್ರಕಾರ ಬೀದಿದೀಪಕ್ಕಾಗಿ ವ್ಯಯಿಸುವ ವಿದ್ಯುತ್ ಗಿಂತ ಕುಡಿಯುವ ನೀರಿಗಾಗಿ ತೋಡಿದ ಕೊಳವೆ ಬಾವಿಗಳು, ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಿಂದಲೇ ಹೆಚ್ಚು ವಿದ್ಯುತ್ ಹೊರೆಯಾಗುತ್ತಿದೆ. ಅದರಲ್ಲೂ ಶಾಸಕರು, ಸಚಿವರು ಹಾಗೂ ವಿವಿಧ ಹಂತದ ಜನಪ್ರತಿನಿಧಿಗಳು, ಗ್ರಾಮಗಳಲ್ಲಿ ಬೇಕಾಬಿಟ್ಟಿ ಕೊಳವೆ ಬಾವಿ ಕೊರೆಯಿಸುತ್ತಾರೆ. ಅವು ನಿರಂತರವಾಗಿ ಚಾಲೂ ಇರುತ್ತವೆ. ಹೀಗಾಗಿ ವಿದ್ಯುತ್ ಹೊರೆ ಹೆಚ್ಚು ಎಂದು ಪಿಡಿಒವೊಬ್ಬರು “ಉದಯವಾಣಿ’ಗೆ ತಿಳಿಸಿದರು.
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Rain: ಬಾಗಲಕೋಟೆಯ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ](https://www.udayavani.com/wp-content/uploads/2024/07/bagalakote-150x90.jpg)
Heavy Rain: ಬಾಗಲಕೋಟೆ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ
![ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ](https://www.udayavani.com/wp-content/uploads/2024/07/rabakavi-1-150x84.jpg)
ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ
![Fetoside](https://www.udayavani.com/wp-content/uploads/2024/07/Fetoside-150x90.jpg)
Bagalakote: ಸರಕಾರಿ ವೈದ್ಯೆಯಿಂದಲೇ ಭ್ರೂಣಹತ್ಯೆ!
![Mudhol ಸಾವಿರ ಶ್ರೀಗಂಧ ಸಸಿಗಳ ಸರದಾರ; ಅರಣ್ಯ ಕೃಷಿಯಲ್ಲಿ ಖುಷಿ ಜೀವನ ಕಂಡ ನಾಗಪ್ಪ](https://www.udayavani.com/wp-content/uploads/2024/07/sandalwood-150x77.jpg)
Mudhol ಸಾವಿರ ಶ್ರೀಗಂಧ ಸಸಿಗಳ ಸರದಾರ; ಅರಣ್ಯ ಕೃಷಿಯಲ್ಲಿ ಖುಷಿ ಜೀವನ ಕಂಡ ನಾಗಪ್ಪ
![4-](https://www.udayavani.com/wp-content/uploads/2024/07/4--150x90.jpg)
Mahalingpur: ಘಟಪ್ರಭಾ ನದಿಗೆ ಹೆಚ್ಚಿದ ನೀರು: ಮೂರು ಸೇತುವೆಗಳು ಜಲಾವೃತ
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.