47 ಲಕ್ಷ ರೂ. ತೆರಿಗೆ ಬಾಕಿ ತೆರಿಗೆ ಬಾಕಿ; ರಬಕವಿ-ಬನಹಟ್ಟಿ ನಗರಸಭೆಯಿಂದ ಕಾರ್ಖಾನೆಗಳ ಜಪ್ತಿ
Team Udayavani, Nov 25, 2022, 4:54 PM IST
ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ನಗರಸಭೆ ವತಿಯಿಂದ 47 ಲಕ್ಷ ತೆರಿಗೆ ಬಾಕಿ ಹಿನ್ನಲೆಯಲ್ಲಿ ಬನಹಟ್ಟಿಯ ವೆಂಕಟೇಶ್ವರ ಸೈಜಿಂಗ್ ಹಾಗೂ ಸಾಯಿಬಾಬಾ (ಧಬಾಡಿ) ಸೈಜಿಂಗ್ನ್ನು ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ ಕಾರ್ಖಾನೆಗಳ ಜಪ್ತಿ ಮಾಡಿದ ಘಟನೆ ನಡೆದಿದೆ.
ಬನಹಟ್ಟಿಯ ಚಿಂಡಕ ಒಡೆತನದ ಮಾಲ್ಕಿ ಜಾಗೆಯಲ್ಲಿ ಇದ್ದಂತಹ ಅನುಭೋಗದಾರರಾದ ವೆಂಕಟೇಶ್ವರ ಸೈಜಿಂಗ ಮತ್ತು ಸಾಯಿಬಾಬಾ (ಧಬಾಡಿ) ಸೈಜಿಂಗ್ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ನಗರಸಭೆಗೆ ಇಲ್ಲಿಯವರೆಗೆ ಸುಮಾರು 47 ಲಕ್ಷದವರೆಗೆ ತೆರಿಗೆ ಬಾಕಿ ತುಂಬದೇ ಇರುವುದರಿಂದ ಇಂದು ಶುಕ್ರವಾರ ದಿಡೀರ ಆಗಿ ಬಂದು ನಗರಸಭೆಯ ಅಧಿಕಾರಿಗಳ ತಂಡ ಎರಡು ಕಾರ್ಖಾನೆಗಳನ್ನು ಜಪ್ತಿ ಮಾಡಿದರು.
ಈ ಸಂರ್ದದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅನುಭೋಗದಾರರ ಮಾಲೀಕರಾದ ಸಂಜಯ ಕರಲಟ್ಟಿ ಹಾಗೂ ರಾಜು ಬಾಣಕಾರ ನಾವು ಹಲವಾರು ವರ್ಷಗಳಿಂದ ಇಲ್ಲಿ ಕಾರ್ಖಾನೆ ನಡೆಸುತ್ತಿದ್ದು, ನಮಗೆ ಯಾವುದೇ ನೋಟೀಸ್ ನೀಡದೆ ಏಕಾ ಏಕಿ ಸೈಜಿಂಗನ್ನು ಸೀಜ್ ಮಾಡಿದ್ದು ಸರಿಯಲ್ಲ. ಯಾವುದೋ ಒಬ್ಬರ ಮಾತು ಕೇಳಿ ಹೈಕೋರ್ಟ ಮತ್ತು ಸಿವಿಲ್ ಕೋರ್ಟನಲ್ಲಿ ದಾವೆ ಇದ್ದು ಆದರೂ ಅನುಭೋಗದಾರರಾದಂತಹ ನಮಗೆ ಈ ರೀತಿ ಯಾವುದೇ ನೋಟೀಸ್ ಇಲ್ಲದೇ ಸೀಜ್ ಮಾಡಿದ್ದಾರೆ. ಇದೊಂದು ಸಮಯೋಚಿ ಸಂಚಾಗಿದ್ದು, ಈ ಕುರಿತು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಅಶೋಕ ಗುಡಿಮನಿ ಮಾತನಾಡಿ, ಚಿಂಡಕ ಒಡೆತನದ ಜಾಗೆಯ ತೆರಿಗೆ ಒಟ್ಟು 47 ಲಕ್ಷ ತೆರಿಗೆ ಬಾಕಿ ಇದ್ದು, ನಾವು ಕಾನೂನು ಬದ್ಧವಾಗಿ ಜಾಗೆಯ ಮಾಲೀಕರಿಗೆ ನೋಟೀಸ್ ನೀಡಿದ್ದು ಅವರು ಅದಕ್ಕೆ ಸ್ಪಂದಿಸದ ಕಾರಣ ಕಾನೂನಿನ ಅಡಿಯಲ್ಲಿ ಜಾಗೆಯಲ್ಲಿದ್ದ ಕಾರ್ಖಾನೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಭಿಯಂತರರಾದ ರಾಘವೇಂದ್ರ ಕುಲಕರ್ಣಿ, ವ್ಯವಸ್ಥಾಪಕರಾದ ಸುಬಾಸ ಖುದಾನಪುರ, ಎಸ್. ಬಿ. ಮಠದ, ಮುತ್ತಪ್ಪ ಚೌಡಕಿ, ಮುಕೇಶ ಬನಹಟ್ಟಿ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ : 2002ರಲ್ಲಿ ಸಮಾಜಘಾತುಕರಿಗೆ ತಕ್ಕ ಪಾಠ ಕಲಿಸಿ, ಗುಜರಾತ್ ನಲ್ಲಿ ಶಾಂತಿ ನೆಲೆಗೊಳಿಸಿದ್ದೇವೆ: ಶಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ