ಕುರಿ-ಟಗರು ಸಂತೆಯಲ್ಲಿ ವಹಿವಾಟು ಜೋರು
ಜವಾರಿ ತಳಿಗಳಿಗೆ ಭಾರೀ ಬೇಡಿಕೆ
Team Udayavani, May 3, 2022, 12:33 PM IST
ಕೆರೂರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನೆರವೇರಿದ ಕುರಿ, ಟಗರು ಹಾಗೂ ಹೋತಗಳ ಸಂತೆಯಲ್ಲಿ ವ್ಯಾಪಾರ, ವಹಿವಾಟು ಜೋರಾಗಿದ್ದು ಕಂಡು ಬಂದಿತು. ಈದ ಉಲ್ ಫೀತ್ರ ಹಬ್ಬದ ಆಚರಣೆ ನಿಮಿತ್ತ ಕೆರೂರ ಸಂತೆಯಲ್ಲಿ ಮುಖ್ಯವಾಗಿ ಜವಾರಿ ತಳಿಗಳಾದ ಟಗರು, ಹೋತಗಳಿಗೆ ಭಾರೀ ಬೇಡಿಕೆ ಕಂಡು ಬಂದಿತು.
ಜವಾರಿ ಹಾಗೂ ಅಷ್ಟೇ ರುಚಿಕರ ಮಾಂಸಕ್ಕೆ ಹೆಸರಾದ ಉತ್ತರ ಕರ್ನಾಟಕ ಭಾಗದ ದಷ್ಟಪುಷ್ಟ ಟಗರು, ಗಂಡು ಮೇಕೆ ಗಾತ್ರ ಮತ್ತು ತೂಕಕ್ಕೆ ತಕ್ಕಂತೆ ಬೆಲೆಗಳಿಗೆ ಮಾರಾಟವಾದವು. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಮುಂತಾದ ಭಾಗಗಳಿಂದ ಕುರಿ ಸಂತೆಯಲ್ಲಿ ಮಾರಾಟಕ್ಕೆ ಬಂದಿದ್ದ ಟಗರು, ಹೋತಗಳು ಸುಮಾರು 30 ಸಾವಿರದಿಂದ ಹಿಡಿದು 45 ಸಾವಿರ ರೂ. ವರೆಗೆ ಪೈಪೋಟಿ ದರದಲ್ಲಿ ಮಾರಾಟವಾದವು ಎಂದು ಯುವ ವರ್ತಕ ಸಂಜು ಹಳಕಟ್ಟಿ ಸಂತೆಯ ವಹಿವಾಟು ವಿವರಿಸಿದರು.
ಇಲ್ಲಿನ ಜವಾರಿ ತಳಿಗಳನ್ನು ಕೊಂಡೊಯ್ಯಲು ಮಹಾರಾಷ್ಟ್ರದ ಪುಣೆ, ಸತಾರಾ, ಮುಂಬೈ ಮತ್ತು ಕೇರಳದ ಪಾಲಕ್ಕಾಡ, ತಮಿಳುನಾಡು, ಆಂಧ್ರಗಳಿಂದ ನೂರಾರು ಸಗಟು ವ್ಯಾಪಾರಸ್ಥರು, ದೊಡ್ಡ ದೊಡ್ಡ ವಾಹನಗಳೊಂದಿಗೆ ಖರೀದಿಗೆ ಆಗಮಿಸಿದ್ದು ಕಂಡು ಬಂದಿತು.
ಮುಖ್ಯವಾಗಿ ಇಲ್ಲಿನ ಕುರಿ, ಮೇಕೆ ಸಂತೆಯಲ್ಲಿ ಮುಸ್ಲಿಂರ ಪ್ರಮುಖ ಹಬ್ಬಗಳಾದ ಬಕ್ರೀದ್ ಹಾಗೂ ರಂಜಾನ ಹಬ್ಬಗಳಿಗೆ ಮುನ್ನ ಇಲ್ಲಿ ಸಿಗುವ ಜವಾರಿ ತಳಿಯ ರುಚಿಕರ ಟಗರು, ಗಂಡು ಮೇಕೆಗಳನ್ನು ಕೊಂಡೊಯ್ಯಲು ಕಾರು, ಮಿನಿ ಲಾರಿ, ಕ್ರೂಷರ್ ವಾಹನಗಳಲ್ಲಿ ಪರ ರಾಜ್ಯಗಳ ವರ್ತಕರು ತಂಡೋಪ ತಂಡವಾಗಿ ಆಗಮಿಸುವುದು ಸಾಮಾನ್ಯ ಸಂಗತಿಯಾಗಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ರಹಿಮಾನ ಸಾಬ್ ಧಾರವಾಡ.
-ಜೆ.ವಿ. ಕೆರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?