ವೀಳ್ಯದೆಲೆಯೊಂದಿಗೆ ಅಂಕಗಳನ್ನು ಕಟ್ಟಿದ ದೀಪಾ
Team Udayavani, May 20, 2022, 12:14 PM IST
ರಬಕವಿ-ಬನಹಟ್ಟಿ: ದಿನಂಪ್ರತಿ ತೋಟದ ಕೆಲಸದಲ್ಲಿ ಭಾಗಿಯಾಗಿ ವೀಳ್ಯದೆಲೆಯನ್ನು ಗಿಡದಿಂದ ಹರಿದು ಅವುಗಳನ್ನು ಕಟ್ಟಿ ಶಾಲೆಗೆ ಬರುವ ವಿದ್ಯಾರ್ಥಿನಿಯೋರ್ವಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ.
ಬನಹಟ್ಟಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ದೀಪಾ ಅಣ್ಣಪ್ಪ ತಳವಾರ ಚಿಮ್ಮಡದ ಕೆರೆ ರಸ್ತೆಯಲ್ಲಿನ ತೋಟದ ಮನೆಯಲ್ಲಿ ವಾಸವಾಗಿದ್ದು, ಪ್ರತಿ ದಿನ ತೋಟದಲ್ಲಿ ವೀಳ್ಯದೆಲೆ ಕಟ್ಟಿಯೇ ಶಾಲೆಗೆ ಬರಬೇಕಾದ ಅನಿವಾರ್ಯತೆಯಲ್ಲೂ ಸಾಧನೆ ಅಮೋಘ ಆಗಿದೆ.
ಪ್ರತಿ ದಿನ ನಡೆಯುವ ತರಗತಿಗಳನ್ನು ಆಲಿಸುತ್ತ ದಿನಕ್ಕೆ ಮೂರ್ನಾಲ್ಕು ಗಂಟೆ ಓದಿನೊಂದಿಗೆ ತನ್ನ ಕಾಯಕದಲ್ಲಿ ತೊಡಗಿ ಪ್ರಸಕ್ತ ಎಸ್ ಎಸ್ಎಲ್ಸಿ ಫಲಿತಾಂಶದಲ್ಲಿ 625 ಕ್ಕೆ 586 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ಗಳಿಸಿದ್ದಾರೆ. ಕನ್ನಡ-124, ಇಂಗ್ಲಿಷ್-99, ಹಿಂದಿ-94, ಸಮಾಜ ವಿಜ್ಞಾನ-98, ವಿಜ್ಞಾನ-90, ಗಣಿತ-81 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ.
ಶಾಲೆಯಲ್ಲಿ ನಡೆಯುವ ಪಾಠಗಳಲ್ಲಿ ಹೆಚ್ಚು ಗಮನದಲ್ಲಿಟ್ಟು ಕೇಳುತ್ತಿದ್ದೆ. ಆಟದ ಸಮಯದಲ್ಲಿ ಆಟವಾಡಿ ಮತ್ತೆ ಚೈತನ್ಯದೊಂದಿಗೆ ಓದಿನತ್ತ ಗಮನಹರಿಸುತ್ತಿದ್ದೆ. ಪರೀಕ್ಷೆ ಸಂದರ್ಭ ಮಾತ್ರ ಓದದೆ ದಿನಾಲೂ ಮೂರ್ನಾಲ್ಕು ಗಂಟೆ ಓದಿನತ್ತ ಗಮನ ಸದಾವಿರುತ್ತಿತ್ತು. ಎಷ್ಟು ಓದಿದೆ ಎಂಬುದರ ಬದಲಾಗಿ ಏನನ್ನು ಓದಿದ್ದೇನೆ ಎಂಬುದು ಮುಖ್ಯ. ಇದರಿಂದ ಮನನ ಶಕ್ತಿ ಹೆಚ್ಚಾಗುವಲ್ಲಿ ನನಗೆ ಕಾರಣವಾಗಿದೆ ಎನ್ನುತ್ತಾರೆ ದೀಪಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಹೊಸ ಸೇರ್ಪಡೆ
ಕೇಂದ್ರ ಸರ್ಕಾರದಿಂದ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ದಮನ ನೀತಿ: ಸಿದ್ಧರಾಮಯ್ಯ
ನಾವೂರು: ಇನ್ನಷ್ಟು ಅನುದಾನ ಹರಿದು ಬಂದರೆ ಅಭಿವೃದ್ಧಿ ಮಲ್ಲಿಗೆ ಅರಳೀತು
ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್
ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ ಸ್ವಾಮೀಜಿ
ಕಲರ್ಫುಲ್ ಇವೆಂಟ್ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್