40 ದಿನಗಳಲ್ಲಿ ದಾಖಲೆಯ 4 ಅಡಿ ಎತ್ತರದ ಅರಿಶಿನ : ಎಕರೆಗೆ 50 ಕ್ವಿಂಟಲ್ ಬೆಳೆ ನಿರೀಕ್ಷೆ
Team Udayavani, Jul 23, 2022, 8:42 PM IST
ರಬಕವಿ-ಬನಹಟ್ಟಿ : ಸಕ್ಕರೆ ಪ್ರದೇಶದಲ್ಲಿ ಕಬ್ಬು ಬೆಳೆಗಾರರು ಕ್ರಮೇಣ ಇತರೆ ಬೆಳೆಗಳಿಗೂ ಒತ್ತು ನೀಡುತ್ತಿದ್ದು, ಇದೀಗ ಅರಿಶಿನ ಬೆಳೆಯಲ್ಲಿ ರೈತನೋರ್ವ ದಾಖಲೆ ಬರೆಯುವಲ್ಲಿ ಹೊರಟಿರುವುದು ವಿಶೇಷ..!
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ 70 ವರ್ಷದ ರೈತ ಶ್ರೀಕಾಂತ ಘೂಳನ್ನವರ ಮೂಲತಃ ಕೃಷಿಯಿಂದಲೇ ಬದುಕು ಸಾಗಿಸಿದವರು. ಇದೀಗ ತಮ್ಮ ಮೂರುವರೆಷ್ಟು ಎಕರೆ ಪ್ರದೇಶದಲ್ಲಿ ಅರಿಶಿನ ಬೀಜ ಹಾಕಿದ 40 ದಿನಗಳಲ್ಲಿ 4 ಅಡಿ ಎತ್ತರ ಬೆಳೆದು ರೈತರನ್ನೇ ದಿಗ್ಬ್ರಮೆ ಮೂಡಿಸುವಲ್ಲಿ ಕಾರಣರಗಿದ್ದಾರೆ. ಇದಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಹೊಸ ಬೀಜ: ನೆರೆಯ ಮಹಾರಾಷ್ಟ್ರದ ಸಾಂಗಲಿ ಮಾರುಕಟ್ಟೆಯಲ್ಲಿ ಈ ಬಾರಿ ಸೇಲಂ ಕಂಪನಿಯ ಹೊಸ ಬೀಜವನ್ನು ಪ್ರಯೋಗ ಮಾಡುವಲ್ಲಿ ಜಿಲ್ಲೆಯಲ್ಲಿಯೇ ಪ್ರಪ್ರಥಮ ರೈತರಾಗಿದ್ದು, ಪ್ರಾಯೋಗಿಕವಾಗಿ ಬೆಳೆದ ಅರಿಷಿಣ 9 ತಿಂಗಳ ಬೆಳೆಯಾಗಿದ್ದು, ಬಹುತೇಕ ಏಳು ತಿಂಗಳಲ್ಲಿ ಫಸಲು ನೀಡಿ ಇಷ್ಟೊಂದು ಬೆಳೆಯಬಹುದೇ ಅಂತ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.
ಬೆಳೆದದ್ದು ಹೇಗೆ? : ಮೂರುವರೆ ಎಕರೆಯಷ್ಟು ಜಮೀನಿನಲ್ಲಿ ಹೆಚ್ಚು ತಿಪ್ಪೆ ಗೊಬ್ಬರ ಹಾಕಿದ್ದು ಡಿಎನ್ಪಿ, ಎಂಓಪಿ ಗೊಬ್ಬರವನ್ನು ಮಣ್ಣಲ್ಲಿ ಮಿಶ್ರಣ ಮಾಡಿದ್ದಾರೆ. 3 ಅಡಿಗೆ ಒಂದರಂತೆ ಸಾಲುಗಳನ್ನು ಬಿಟ್ಟು ಅರಿಷಿಣ ಬೀಜ ನಾಟಿ ಮಾಡಲಾಗಿದೆ. ಬಳಿಕ ಹನಿ ನೀರಾವರಿ ಮೂಲಕವೇ ಗೊಬ್ಬರ ಸಿಂಪರಣೆ, ಇತರೆ ಗೊಬ್ಬರಗಳ ತಾಲೀಮು ಇನ್ನೂ ಇದ್ದು, ಇಷ್ಟೊಂದು ವಿಪುಲ ಬೆಳೆಗೆ ರೈತ ಸಂತಸದಲ್ಲಿದ್ದಾರೆ.
ಇದನ್ನೂ ಓದಿ : ರೇಷ್ಮೆ ಕೃಷಿಯನ್ನು ಮರ ಕಡ್ಡಿ ಪದ್ಧತಿಯಲ್ಲಿ ಬೆಳೆಯುವುದು ಹೇಗೆ ?
ಒಟ್ಟಾರೆ ವೈಜ್ಞಾನಿಕ ತಳಹದಿಯಲ್ಲಿ ಬೆಳೆ ಬೆಳೆಯುತ್ತಿರುವದರಿಂದ ಬಲು ಸಹಕಾರಿಯಾಗಿದೆ. ಎಕರೆಗೆ ಸಾಮಾನ್ಯವಾಗಿ 30 ಕ್ವಿಂಟಲ್ನಷ್ಟು ಅರಿಶಿನ ಉತ್ಪಾದನೆಯಾಗುವದು. ಈ ಬೆಳೆಯು 50 ಕ್ವಿಂಟಲ್ ನಷ್ಟು ಉತ್ಪಾದನೆ ನೀಡುವ ನಿರೀಕ್ಷೆಯಿದೆ ಎನ್ನುತ್ತಾರೆ ರೈತ ಘೂಳನ್ನವರ.
ಮಾಹಿತಿಗೆ : 81233-21606
ಅರಿಷಿಣದ ಹೊಸ ತಳಿಯ ಬೀಜ ಪ್ರಾಯೋಗಿಕವಾಗಿ ಬೆಳೆದಿದ್ದು, 40 ದಿನಗಳಲ್ಲಿ ಇಷ್ಟೊಂದು ಉತ್ತಮ ಬೆಳೆ ಬಂದಿರುವದು ಸಂತಸವೆನಿಸುತ್ತಿದೆ. ಕಡಿಮೆ ಅವಧಿಯಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇನೆ.’
-ಶ್ರೀಕಾಂತ ಘೂಳನ್ನವರ, ಅಧ್ಯಕ್ಷ, ರೈತ ಸಂಘ, ರಬಕವಿ-ಬನಹಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ