ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ


Team Udayavani, Feb 27, 2021, 4:21 PM IST

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ

ಲೋಕಾಪುರ: ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಕಡಿಮೆ ಅವ ಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಜತೆಗೆ ಕೃಷಿ ಕಾರ್ಮಿಕರ ಕೊರತೆ ನೀಗಿಸಬಹುದು ಎಂದು ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಚೇರಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಗುಡಗುಂಟಿ ಹೇಳಿದರು.

ವರ್ಚಗಲ್‌ ಗ್ರಾಮದ ರೈತ ಸಿದ್ದು ಚೌಧರಿ ಅವರ ಜಮೀನಿನಲ್ಲಿ ನೂತನ ಕಬ್ಬು ಕಟಾವು ಮಿಷನ್‌ ಪ್ರಾಯೋಗಿಕ ಪ್ರದರ್ಶನ ನಡೆಸಿ, ಸೂಪರ್‌ 74ಮಾಡಲ್‌ ಕಬ್ಬು ಕಟಾವು ಮಾಡುವ ಯಂತ್ರಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಕೃಷಿ ಪದ್ಧತಿಗೆ ಅನುಗುಣವಾಗಿ ಆಧುನಿಕ ತಾಂತ್ರಿಕತೆಯಿಂದ ಕಬ್ಬು ಕಟಾವು ಮಿಷನ್‌ ತಯಾರಾಗಿದ್ದು, ಇದರಿಂದ ರೈತರಿಗೆ ಹೆಚ್ಚು ಸಹಕಾರಿ ಯಾಗಲಿದೆ. ಇಂದಿನ ದಿನಮಾನಗಳಲ್ಲಿ ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆ ಇದ್ದು, ಅಂತಹ ಕೊರತೆ ನೀಗಿಸಲು ಹಾಗೂ ರೈತರು ಬೆಳೆದ ಬೆಳೆ ಸಕಾಲದಲ್ಲಿ ಮಾರುಕಟ್ಟೆತಲುಪಲು ಅನುಕೂಲವಾಗಿ ರೈತರು ಹೆಚ್ಚಿನ ಲಾಭಾಂಶ ಪಡೆಯುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಪರ್‌ ಕೇನ್‌ ಇಂಜಿನಿಯರ್‌ ಮಹೇಶ ಜಂಗವಾಡ ಮಾತನಾಡಿ, ನೂತನವಾಗಿ ಸುಪರ್‌-75 ಮಾಡಲ್‌ ಕಂಪನಿ ತಯಾರಿಸಿರುವ ಸಿಎಚ್‌ -75 ಕೋಬ್ರಾ ಕಬ್ಬು ಕಟಾವು ಮಿಷನ್‌ ಪ್ರಾಯೋಗಿಕ ಪ್ರದರ್ಶನ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಿಷನ್‌ದಿಂದ ದಿನ ಒಂದಕ್ಕೆ 60ರಿಂದ 70 ಟನ್‌ಕಬ್ಬು ಕಟಾವು ಮಾಡಬಹುದು. ಸುಪರ್‌ ಕಂಪನಿ ಶತಮಾನಕ್ಕೂ ಹೆಚ್ಚು ವರ್ಷಗಳ ಕಾಲ ರೈತೋಪಯೋಗಿ ಉಪಕರಣ ತಯಾರಿಸುವುದರ ಮೂಲಕ ರೈತರ ಸೇವೆಯಲ್ಲಿ ತೊಡಗಿದ್ದು, ನೂತನ ಅವಿಷ್ಕಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರೈತ ಸಿದ್ದು ಚೌಧರಿ ಮಾತನಾಡಿ ಮಿಷನ್‌ದಿಂದಕಬ್ಬನ್ನು ಕಟಾವು ಮಾಡುವುದರಿಂದ ಹೆಚ್ಚು ನಷ್ಟ ಆಗುವುದಿಲ್ಲ, ಕಬ್ಬಿನ ಬೆಳೆಯಲ್ಲಿ ಹೆಚ್ಚಿನ ಪ್ರಮಾಣದಸಕ್ಕರೆ ಅಂಶ ಕಬ್ಬಿನ ಕೆಳಭಾಗದಲ್ಲಿ ಇರುವುದರಿಂದ ಮಿಷನ್‌ ಕಟಾವು ಕೆಳಭಾಗವನ್ನು ಕಟ್‌ಮಾಡುವುದರಿಂದ ರೈತರು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ, ನೂತನ ಕಬ್ಬು ಕಟಾವು ಮಿಷನ್‌ರೈತರು ಮತ್ತು ಕಾರ್ಖಾನೆಯವರಿಗೂ ಕೂಡಾ ಅನುಕೂಲವಾಗಲಿದ್ದು, ಕಟಾವಿನ ನಂತರ ಬರುವಎರಡನೇ ಬೆಳೆ ಫಲಕಾರಿಯಾಗಿರುತ್ತದೆ. ಕಟಾವಿನಿಂದ ಜಮೀನಿನಲ್ಲಿ ಬಿದ್ದ ರವದಿ ಗೊಬ್ಬರವಾಗಿ ಭೂಮಿ ಇನ್ನಷ್ಟು ಫಲವತ್ತಾಗಲು ಅನುಕೂಲವಾಗುತ್ತದೆ ಎಂದರು.

ನಿರಾಣಿ ಸಕ್ಕರೆ ಕಾರ್ಖಾನೆ ನರಸಿಂಗ್‌ ಪಡಿಯಾರ, ಬಾಗೇವಾಡಿ, ರೈತರಾದ ಸಿದ್ದು ಚೌಧರಿ, ಹಣಮಂತಗೌಡ ಪಾಟೀಲ, ಭೀಮನಗೌಡ ಪಾಟೀಲ, ತಿಮ್ಮಣ್ಣಗೌಡ ತುಳಸಿಗೇರಿ, ಕುಮಾರ ಕೌಲಗಿ, ಮುತ್ತು ಹನಗಲಿ, ರುದ್ರಗೌಡ ಪಾಟೀಲ, ಶಿವಣ್ಣ ಪೂಜಾರ, ನಿಂಗಪ್ಪ ಪೂಜಾರ, ಹಣಮಂತ ಹನಗಲಿ,ಸೊಲಬನಗೌಡ ಪಾಟೀಲ ಹಾಗೂ ಲೋಕಾಪುರವರ್ಚಗಲ್‌, ಕೊಲುರ, ಜಮ್ಮನಕಟ್ಟಿ ಗ್ರಾಮಗಳ ರೈತರು, ಗ್ರಾಮಸ್ಥರು ಇದ್ದರು.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.