ಕುಳಗೇರಿ ಕ್ರಾಸ್ : ಯಲ್ಲಮ್ಮನ ಗುಡ್ಡಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಭಕ್ತರು
Team Udayavani, Jan 26, 2022, 7:45 PM IST
ಕುಳಗೇರಿ ಕ್ರಾಸ್: ಉತ್ತರ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ರೇಣುಕಾದೇವಿಯ ಶಕ್ತಿಪೀಠ ಯಲ್ಲಮ್ಮನ ಗುಡ್ಡಕ್ಕೆ ಕೊರ್ತಿ ಕೊಲ್ಲಾರದ ಭಕ್ತರು ಭಾರತ ಹುಣ್ಣಿಮೆಯನ್ನು ಆಚರಿಸಲು ಮುಂಚಿತವಾಗಿ ಮಂಗಳವಾರ, ಶುಕ್ರವಾರ ಮುಂದಿಟ್ಟುಕಂಡು ಗುಡ್ಡಕ್ಕೆ ತೆರಳುತ್ತಿದ್ದಾರೆ.
ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ಭಕ್ತರು ಒಂದು ವಾರದಿಂದ ಯಲ್ಲಮ್ಮನ ಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿ 218ರ ಮೂಲಕ ವಿವಿಧ ವಾಹನಗಳಲ್ಲಿ, ಚಕ್ಕಡಿ ಹಾಗೂ ಕಾಲ್ನಡಿಗೆಯಲ್ಲಿ ಯಲ್ಲಮ್ಮನ ಪದಗಳನ್ನು ಹಾಡುತ್ತ ಕುಣಿಯುತ್ತ ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದಾರೆ.
ದಾರಿಮದ್ಯ ಹರಿಯುವ ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಅಡುಗೆ ಮಾಡಿ ಮಲಪ್ರಭೆಗೆ ವಿಶೇಷವಾದ ಪೂಜೆ ಪುರಸ್ಕಾರಗಳನ್ನು ಸಲ್ಲಿಸುವ ಮೂಲಕ ಧಾರ್ಮಿಕ ಆಚರಣೆಗಳನ್ನ ಆಚರಿಸುತ್ತಾರೆ.
ಹೆದ್ದಾರಿಯಲ್ಲಿ ಹೊರಟ ಭಕ್ತರು:
ಉಧೋ…! ಉಧೋ…! ಯಲ್ಲಮ್ಮ ನಿನ್ನಾಲ್ಕ ಉಧೋ…!
ಉಧೋ…! ಉಧೋ…! ಪರಶುರಾಮ ನಿನ್ನಾಲ್ಕ ಉಧೋ…!
ಉಧೋ…! ಉಧೋ…! ಜಮದಗ್ನಿ ನಿನ್ನಾಲ್ಕ ಉಧೋ…!
ಎಂಬ ಹರ್ಷೋಧ್ಘಾರ ಗ್ರಾಮದ ಜನರನ್ನು ಬಡಿದೆಬ್ಬಿಸುತ್ತಿತ್ತು.
ಯಲ್ಲಮ್ಮನ ಕೊಡ ಹೊತ್ತು ಕುಣಿಯುತ್ತ ಸಾಗುತ್ತಿದ್ದ ಬಿಂದಿಗೆಯ ಮೂರ್ತಿಗೆ ಗ್ರಾಮದ ಭಕ್ತರು ಕಾಯಿ ಕರ್ಪೂರ ತಂದು ಪೂಜೆ ಸಲ್ಲಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ