ಪಾರಿವಾಳ ಹಿಡಿಯಲು ಹೋಗಿ ವಿದ್ಯುತ್ ತಗುಲಿದ್ದ ಬಾಲಕ ಸಾವು
Team Udayavani, Dec 8, 2022, 4:18 PM IST
ಬೆಂಗಳೂರು: ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯ ವಿಜಯಾನಂದನಗರದಲ್ಲಿ ಮನೆ ಮೇಲಿನ ಟೆರೆಸ್ನಲ್ಲಿ ಪಾರಿವಾಳಕ್ಕೆ ರಾಡ್ನಿಂದ ಬೆದರಿಸುವ ವೇಳೆ ವಿದ್ಯುತ್ ಪ್ರವಹಿಸಿ ತೀವ್ರ ಗಾಯಗೊಂಡಿದ್ದ ಮತ್ತೂಬ್ಬ ಬಾಲಕ ಚಂದ್ರು (13) ಕೂಡ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾನೆ.
ಡಿ.1ರಂದು ವಿಜಯಾನಂದನಗರದಲ್ಲಿ ಚಂದ್ರು ಹಾಗೂ ಸುಪ್ರೀತ್ (11) ಮನೆಯ ಟೆರೆಸ್ ಮೇಲೆ ಬಂದಿದ್ದ ಪಾರಿವಾಳ ಹಿಡಿಯುವ ವೇಳೆ ವಿದ್ಯುತ್ ಪ್ರವಹಿಸಿತ್ತು. ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸುಪ್ರೀತ್ ಮೂರು ದಿನಗಳ ಹಿಂದೆಯಷ್ಟೇ ಅಸುನೀಗಿದ್ದ. ಚಂದ್ರು ಬುಧವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಕಾಲಿಗೆ ದಾರ ಕಟ್ಟಿದ್ದ ಪಾರಿವಾಳದ ಜೊತೆ ಬಾಲಕರು ಆಟವಾಡುತ್ತಿದ್ದರು. ಮನೆಯೊಂದರ ಟೆರೆಸ್ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಮೇಲೆ ಹೋಗಿ ಪಾರಿವಾಳ ಕುಳಿತಿತ್ತು. ಅದನ್ನು ನೋಡಿದ್ದ ಬಾಲಕರು, ಪಾರಿವಾಳವನ್ನು ತಂತಿಯಿಂದ ಹಾರಿಸುವುದಕ್ಕಾಗಿ ಅಲ್ಲೆ ಇದ್ದ ಕಬ್ಬಿಣದ ರಾಡ್ನಿಂದ ಬೆದರಿಸುವಾಗ ಕರೆಂಟ್ ಹೊಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ