ಡಬ್ಲ್ಯೂಎಚ್‌ಒ ಹೆಸರಲ್ಲಿ ನಕಲಿ ಸಂದೇಶ: ಎಚ್ಚರ


Team Udayavani, Feb 6, 2023, 12:01 PM IST

tdy-7

ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಹೆಸರಲ್ಲಿ ಕೊರೊನಾನಿಯಂತ್ರಣಕ್ಕೆ ಅನುದಾನ ನೀಡುವಂತೆ ನಿಮ್ಮ ಮೊಬೈಲ್‌, ಇ-ಮೇಲ್‌ಗೆ ಸಂದೇಶ ಬಂದರೆ ಎಚ್ಚರ! ಇದನ್ನು ನಂಬಿ ಹಣ ಜಮೆ ಮಾಡಿದರೆ ನಿಮ್ಮ ಹಣ ಸೈಬರ್‌ ಕಳ್ಳರ ಪಾಲಾಗಬಹುದು.

ಕೊರೊನಾ ವೈರಸ್‌ನಿಂದ ಸೃಷ್ಟಿಯಾಗಿರುವ ಆತಂಕದ ವಾತಾವರಣವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ಚೋರರು ಡಬ್ಲ್ಯೂಎಚ್‌ಒ ಹೆಸರಲ್ಲಿ ಅಮಾಯಕರಿಗೆ ನಕಲಿ ಸಂದೇಶ ಕಳುಹಿಸಿ ಹೊಸ ವಂಚನೆಯ ಮಾರ್ಗ ಕಂಡುಕೊಂಡಿದ್ದಾರೆ.ವಿಶ್ವ ಸಂಸ್ಥೆ ಹೆಸರಿನಲ್ಲಿ ಇ-ಮೇಲ್‌, ವಾಟ್ಸ್‌ ಆ್ಯಪ್‌ಗಳಿಗೆ ನಕಲಿ ಸಂದೇಶ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೈಬರ್‌ ವಂಚನೆ ಜಾಲದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಡಬ್ಲ್ಯೂಎಚ್‌ಒ ಸೂಚಿಸಿದೆ.  ಕೊರೊನಾ ವಿರುದ್ಧ ಹೋರಾಡಲು ಡಬ್ಲ್ಯೂಎಚ್‌ಒ ಯಾವುದೇ ಅನುದಾನ ಸಂಗ್ರಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ವಂಚನೆ ಹೇಗೆ?: ವಿಶ್ವದೆಲ್ಲೆಡೆ ಕೊರೊನಾ ಉಲ್ಬಣವಾಗಿದ್ದು, ಇದರ ನಿಯಂತ್ರಣಕ್ಕಾಗಿ ಡಬ್ಲ್ಯೂಎಚ್‌ಒ ದೇಣಿಗೆ ಸಂಗ್ರಹಿಸುತ್ತಿದೆ. ನಾವು ಹೇಳುವ ಬ್ಯಾಂಕ್‌ ಖಾತೆಗೆ ನಿಮಗಿಚ್ಛೆ ಬಂದಷ್ಟು ದೇಣಿಗೆ ನೀಡಿ ಎಂದು ನಂಬಿಸಿ ಇದುವರೆಗೆ ಕೋಟ್ಯಂತರ ರೂ. ಅನ್ನು ಸೈಬರ್‌ ವಂಚಕರು ಲಪಟಾಯಿಸಿದ್ದಾರೆ. ಸಾರ್ವಜನಿಕರ ಮೊಬೈಲ್‌ಗ‌ಳಿಗೆ ಡಬ್ಲ್ಯೂಎಚ್‌ಒ ಹೆಸರಲ್ಲಿ ಲಿಂಕ್‌ ಕಳುಹಿಸಿ ಅದನ್ನು ಕ್ಲಿಕ್‌ ಮಾಡಿ ವೈಯಕ್ತಿಕ ಮಾಹಿತಿ ತುಂಬುವಂತೆ ಹೇಳಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುತ್ತಾರೆ. ಯೂಸರ್‌ನೇಮ್‌, ಪಾಸ್‌ವರ್ಡ್‌ ಮಾಹಿತಿ ಪಡೆದು ಬ್ಯಾಂಕ್‌ಗೆ ಕನ್ನ ಹಾಕಿದ ಸಾಕಷ್ಟು ಪ್ರಕರಣಗಳು ದೇಶಾದ್ಯಂತ ದಾಖಲಾಗಿದೆ. ಸೈಬರ್‌ ಕಳ್ಳರು ಸಂಸ್ಥೆಯ ಹೆಸರಲ್ಲಿ ಈ ಮಾದರಿಯಲ್ಲಿ ಕೈ ಚಳಕ ತೋರಿಸಿರುವ ಸಂಗತಿ ಡಬ್ಲ್ಯೂಎಚ್‌ಒ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಟ್ಟಿದೆ.

ವಂಚನೆಗೊಳಗಾಗದಿರಲು ಸೂಚನೆ:

ಡಬ್ಲ್ಯೂಎಚ್‌ಒ ಹೆಸರಿನಲ್ಲಿ ಆನ್‌ಲೈನ್‌ ಮೂಲಕ ಯಾರಾದರೂ ನಿಮ್ಮನ್ನು ಸಂಪರ್ಕಿಸಿದರೆ ಅವರ ದೃಢೀಕರಣ ಪರಿಶೀಲಿಸಿ ಪ್ರತಿಕ್ರಿಯಿಸಿ. ಈ ಸಂಸ್ಥೆ ಯಾವುದೇ ವ್ಯಕ್ತಿಯ ಯೂಸರ್‌ ನೇಮ್‌, ಪಾಸ್‌ವರ್ಡ್‌ ಸೇರಿದಂತೆ ಗೌಪ್ಯ ಮಾಹಿತಿ ಕೇಳುವುದಿಲ್ಲ. ನೀವು ಸಂಸ್ಥೆಯೊಂದಿಗೆ ವ್ಯವಹರಿಸದಿದ್ದರೆ ಯಾವುದೇ ಇ-ಮೇಲ್‌ ಸಂದೇಶ ಕಳುಹಿಸುವುದಿಲ್ಲ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು, ಸಮ್ಮೇಳನಕ್ಕಾಗಿ ನೋಂದಾಯಿಸಿಕೊಳ್ಳಲು ಅಥವಾ ಹೋಟೆಲ್‌ ಕಾಯ್ದಿರಿಸಲು ಸಾರ್ವಜನಿಕರಿಂದ ಶುಲ್ಕ ಸಂಗ್ರಹಿಸುವುದಿಲ್ಲ. ಲಾಟರಿ, ಆಫ‌ರ್‌ ಪ್ರೈಜ್‌ಗಳು,ಸಂಸ್ಥೆಯ ಪ್ರಮಾಣ ಪತ್ರ, ಅನುದಾನವನ್ನು ಇ-ಮೇಲ್‌ನಲ್ಲಿ ಕಳುಹಿಸಲು ಹಣ ಕೇಳಿವುದಿಲ್ಲ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆ: 

  • ಬ್ಯಾಂಕ್‌ ಖಾತೆ ಅಥವಾ ಇ-ಮೇಲ್‌ಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ.
  • ಸಂಪರ್ಕಿಸುವ ನೆಟ್‌ವರ್ಕ್‌ ಕಾನೂನು ಬದ್ಧವಾಗಿದ್ದರೆ ಮಾತ್ರ ಸಾರ್ವಜನಿಕ ಪ್ರದೇಶಗಳಲ್ಲಿ ವೈ-ಫೈ ಬಳಸಿ.
  • ಅನುಮಾನಾಸ್ಪದವಾಗಿ ಬರುವ ಇ-ಮೇಲ್‌ ಬಗ್ಗೆ ಎಚ್ಚರ
  • ಸೈಬರ್‌ ವಂಚನೆಯಾದರೆ ಕೂಡಲೇ ಪೊಲೀಸರಿಗೆ ತಿಳಿಸಿ
  • ಕೊರೊನಾ ದೇಣಿಗೆ, ಔಷಧ, ಟೆಸ್ಟಿಂಗ್‌ ಕಿಟ್‌ ಹೆಸರಲ್ಲಿ ಲಿಂಕ್‌ ಕಳುಹಿಸಿ ಹ್ಯಾಕ್‌ ಮಾಡಬಹುದು ಎಚ್ಚರ

ಡಬ್ಲ್ಯೂಎಚ್‌ಒ ಅಧಿಕೃತ ಇ-ಮೇಲ್‌ ಪತ್ತೆ ಹೇಗೆ? :

 ಡಬ್ಲ್ಯೂಎಚ್‌ಒ ಹೆಸರಲ್ಲಿರುವ ನಕಲಿ ವೆಬ್‌ಸೈಟ್‌ ಗಳಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆವಹಿಸಬೇಕಿದೆ.

 ಲಿಂಕ್‌ ಮೂಲಕ ಇ ಮೇಲ್‌ ಸ್ವೀಕರಿಸಿದರೆ, https://www.who.int  ನೊಂದಿಗೆ ಪ್ರಾರಂಭವಾಗುವುದನ್ನು ನೀವು ಖಚಿತಪಡಿಸಿಕೊಳ್ಳಿ. ನಿಮ್ಮ ಬ್ರೌಸರ್‌ನಲ್ಲಿ https://www.who.int  ಎಂದು ಟೈಪ್‌ ಮಾಡಿ ಡಬ್ಲೂéಎಚ್‌ಒ ಸಂಸ್ಥೆಯ ವೆಬ್‌ ಸೈಟ್‌ಗೆ ಹೋಗಿ ಹೆಚ್ಚಿನ ಮಾಹಿತಿ ಪಡೆಯಬಹುದು.

 ಡಬ್ಲೂಎಚ್‌ಒ ವೆಬ್‌ಸೈಟ್‌ ಪ್ರಕಾರ ಚಿಹ್ನೆ ನಂತರ https://www.who.int  ಬಿಟ್ಟು ಬೇರೆ ಯಾವುದಾದರೂ ಇದ್ದರೆ ಡಬ್ಲೂಎಚ್‌ಒ ಸಂಸ್ಥೆಯ ಅಧಿಕೃತ ಇ-ಮೇಲ್‌ ಅಲ್ಲ ಎಂಬುದನು ತಿಳಿದುಕೊಳ್ಳಬಹುದು.

 ಡಬ್ಲ್ಯೂಎಚ್‌ಒ ಸಂಸ್ಥೆಯಿಂದ ಬಂದ ಇ-ಮೇಲ್‌ ಆದರೆ ಇ-ಮೇಲ್‌ ಮಾಡುವ ವ್ಯಕ್ತಿ ಹೆಸರಿನ ಮುಂದೆ https://www.who.int  ಎಂದಿರುತ್ತದೆ.

-ಅವಿನಾಶ್‌ ಮೂಡಂಬಿಕಾನ

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.