ಪಾಸ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಿ
ಸಂಚಾರ ಅವಧಿ ಪೂರ್ಣಗೊಂಡ ಕೊನೆಯಲ್ಲಿ ಪಾಸ್ಗಳನ್ನು ಉತ್ತಮ ಸ್ಥಿತಿಯಲ್ಲಿ ಮರಳಿಸಿದಲ್ಲಿ 50 ರೂ. ಹಿಂತಿರುಗಿಸಲಾಗುತ್ತದೆ
Team Udayavani, Mar 31, 2022, 4:23 PM IST
ಬೆಂಗಳೂರು: “ನಮ್ಮ ಮೆಟ್ರೋ’ದಲ್ಲೂ ಇನ್ಮುಂದೆ ಬಿಎಂಟಿಸಿ ಬಸ್ಗಳಲ್ಲಿರುವಂತೆ ಪಾಸು ತೋರಿಸಿ ಪ್ರಯಾಣಿಸಬಹುದು! ಬರುವ ಏಪ್ರಿಲ್ 2ರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್)ವು ಒಂದು ಮತ್ತು ಮೂರು ದಿನಗಳ ಪಾಸುಗಳನ್ನು ಪರಿಚಯಿಸುತ್ತಿದೆ. ಇದರಿಂದ ಟಿಕೆಟ್ಗಾಗಿ ಕ್ಯುನಲ್ಲಿ ಕಾಯುವಿಕೆ ಕಡಿಮೆ ಆಗಲಿದೆ. ವಿಶೇಷವಾಗಿ ಪ್ರವಾಸಿಗರು ಹಾಗೂ ನಾಲ್ಕಾರು ದಿನಗಳ ಮಟ್ಟಿಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸುವವರಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ.
ಪ್ರಯಾಕರು 200 ರೂ. ಕೊಟ್ಟು ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸ್ ಖರೀದಿಸಿದರೆ ಒಂದು ದಿನ ಅನಿಯಮಿತವಾಗಿ ಸಂಚಾರ ಮಾಡಬಹುದು. ಅಥವಾ 400 ರೂ. ಕೊಟ್ಟು ಪಾಸ್ ಖರೀದಿಸಿದಲ್ಲಿ 3 ದಿನ ಅನಿಯಮಿತವಾಗಿ ಮೆಟ್ರೋದಲ್ಲಿ ಪ್ರಯಾಸಬಹುದು. ಎರಡೂ ಮಾದರಿಯ ಪಾಸ್ ಗಳನ್ನು ಪಡೆಯಲು 50 ರೂ. ಮರು ಪಾವತಿಸಬಹುದಾದ ಭದ್ರತಾ ಠೇವಣಿ ಇರಲಿದ್ದು, ಸಂಚಾರ ಅವಧಿ ಪೂರ್ಣಗೊಂಡ ಕೊನೆಯಲ್ಲಿ ಪಾಸ್ಗಳನ್ನು ಉತ್ತಮ ಸ್ಥಿತಿಯಲ್ಲಿ ಮರಳಿಸಿದಲ್ಲಿ 50 ರೂ. ಹಿಂತಿರುಗಿಸಲಾಗುತ್ತದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಇನ್ನು ಸ್ಮಾರ್ಟ್ಕಾರ್ಡ್ ಹೊಂದಿರುವ ಪ್ರಯಾಣಿಕರು ವೆಬ್ಸೈಟ್ ಅಥವಾ ನಮ್ಮ ಮೆಟ್ರೋ ಆ್ಯಪ್ ಮೂಲಕ ರೀಚಾರ್ಜ್ ಮಾಡಿಕೊಂಡ ಒಂದು ಗಂಟೆ ನಂತರದಿಂದ 7 ದಿನಗಳಲ್ಲಿ ಒಮ್ಮೆಯಾದರೂ ಸ್ವಯಂಚಾಲಿತ ಟಿಕೆಟ್ ಗೇಟ್ (ಆಟೋಮೆಟಿಕ್ ಫೇರ್ ಕಲೆಕ್ಷನ್-ಎಎಫ್ಸಿ)ಗಳಲ್ಲಿ ಟ್ಯಾಪ್ ಮಾಡಬೇಕು.
ಕಾರ್ಡ್ ಟಾಪ್ಅಪ್ ಟರ್ಮಿನಲ್ ಗಳಲ್ಲಿ ರೀಚಾರ್ಜ್ ಮಾಡಿದ ಸ್ಮಾರ್ಟ್ಕಾರ್ಡ್ಗಳನ್ನು 15 ದಿನಗಳಲ್ಲಿ ನವೀಕರಿಸಬೇಕು. ಒಂದು ವೇಳೆ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ನಲ್ಲಿರುವ ಬಾಕಿ ಹಣವನ್ನು ನವೀಕರಿಸದಿದ್ದರೆ, ಬಳಸದ ಹಣವನ್ನು 30 ದಿನಗಳ ಒಳಗೆ ರಿಚಾರ್ಜ್ ಮಾಡಿಸಿಕೊಂಡ ಮಾರ್ಗದಲ್ಲಿಯೇ ಪ್ರಯಾಣಿಕರಿಗೆ ಮರಳಿಸಲಾಗುತ್ತದೆ. ಈ ವೇಳೆ ಶೇ. 2.5ರಷ್ಟು ಹಣವನ್ನು ರದ್ದತಿ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ ಎಂದೂ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಅಂದಹಾಗೆ, ಬಿಎಂಟಿಸಿ ಬಸ್ಗಳಲ್ಲಿ ಹಲವು ವರ್ಷಗಳ ಹಿಂದೆಯೇ ಒಂದು ದಿನದ ಪಾಸ್ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ವಾರದ ಮತ್ತು ಮಾಸಿಕ ಪಾಸು ಕೂಡ ಬಿಎಂಟಿಸಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ