ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ


Team Udayavani, Jun 1, 2023, 1:07 PM IST

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

ಬೆಂಗಳೂರು: ಹೊಟ್ಟೆಪಾಡಿಗಾಗಿ ಬೇಡುತ್ತಿದ್ದ ಭಿಕ್ಷಾಟನೆ ಇದೀಗ ಒಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಜನರ ಅನುಕಂಪ, ಮುಗ್ಧತೆಯ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಭಿಕ್ಷುಕರ ಕಾಟ ಹೆಚ್ಚಾಗುತ್ತಿದೆ.

ಮೊದಲೆಲ್ಲಾ ಬಸ್ಸು, ರೈಲು ನಿಲ್ದಾಣ ಸೇರಿದಂತೆ ಧಾರ್ಮಿಕ ಕೇಂದ್ರಗಳ ಮುಂದೆ ಭಿಕ್ಷೆ ಬೇಡುತ್ತಿ ದ್ದರು. ಇದೀಗ ಸಿಗ್ನಲ್‌, ರಸ್ತೆ ಬದಿಗಳು ಮಾತ್ರವಲ್ಲ, ಉದ್ಯಾನವನಗಳಿಗೂ ಭಿಕ್ಷುಕರು ಲಗ್ಗೆ ಇಟ್ಟಿದ್ದಾರೆ. ವಾರಾಂತ್ಯ ಹಾಗೂ ಸಾರ್ವಜನಿಕ ರಜೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಿಕ್ಷುಕರು ಕಾಣಿಸಿಕೊಳ್ಳುತ್ತಾರೆ. ಉದ್ಯಾನ ನಗರಿ ಬೆಂಗಳೂರಿನ ಪ್ರವಾಸಿ ತಾಣಗಳಲ್ಲಿ ಒಂದಾದ ಹಾಗೂ ನಗರದ ಅತೀ ದೊಡ್ಡ ಉದ್ಯಾನವನ ಕಬ್ಬನ್‌ಪಾರ್ಕ್‌ ಎಲ್ಲೆಡೆಯಿಂದ ಆಗಮಿಸುವ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಅಲ್ಲದೆ, ನಗರ ವಾಸಿಗಳಲ್ಲಿ ತಣ್ಣನೆಯ ಶುದ್ಧ ಗಾಳಿ ಸೇವನೆಗಾಗಿ ಆಗಮಿಸುವ ವಾಯುವಿಹಾರಿಗಳು, ತಮ್ಮ ಮಕ್ಕಳೊಂದಿಗೆ ಕುಟುಂಬ ಸಮೇತ ಹಚ್ಚಹಸಿರಿನ ಗಿಡ-ಮರಗಳ ನಡುವೆ ಸಮಯ ಕಳೆಯಲೆಂದು ಮತ್ತು ಕಾಲೇಜು ವಿದ್ಯಾರ್ಥಿಗಳು, ಪ್ರೇಮಿಗಳು ಸೇರಿದಂತೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಈ ಕಬ್ಬನ್‌ ಪಾರ್ಕಿಗೆ ಸುಮಾರು 8 ಗೇಟ್‌ಗಳು ಇದ್ದು, ಪ್ರತಿ ಗೇಟ್‌ನಲ್ಲೂ ಸೆಕ್ಯೂರಿಟಿ ಗಾರ್ಡ್‌ ನೇಮಿಸಲಾಗಿದೆ. ಇವರಲ್ಲದೆ, ಇನ್ನೂ 8-10 ಜನ ಸೆಕ್ಯುರಿಟಿ ಗಾರ್ಡ್‌ಗಳು ಉದ್ಯಾನದ ಒಳಗಡೆ ಜನರಿಗೆ ಮತ್ತು ಗಿಡ-ಮರಗಳಿಗೆ ಯಾವುದೇ ತೊಂದರೆಗಳಾಗದಂತೆ ಎಚ್ಚರ ವಹಿಸಲು ನಿಯೋಜಿಸಲಾಗಿದೆ.

ಒಟ್ಟು 15 ರಿಂದ 20 ಸೆಕ್ಯೂರಿಟಿ ಗಾರ್ಡ್‌ಗಳಿದ್ದರೂ ಚಿಕ್ಕದೊಂದು ದೇವರ ಮೂರ್ತಿಯನ್ನು ಹಿಡಿದು ನಿತ್ಯ 10 ರಿಂದ 15 ಮಹಿಳಾ ಭಿಕ್ಷುಕಿಯರು ಹಾಗೂ ಮಂಗಳಮುಖಿಯರು ಉದ್ಯಾನದ ಒಳಗೆ ಬರುತ್ತಾರೆ. ಕುಟುಂಬದವರು ಅಥವಾ ಸ್ನೇಹಿತರೊಂದಿಗೆ ಸ್ವಾತಂತ್ರ್ಯವಾಗಿ ಕಾಲಕಳೆಯುವ ಸಂದರ್ಭಗಳಲ್ಲಿ ಭಿಕ್ಷುಕಿಯರು(ಕಣಿ ಹೇಳುವವರು) ಹಾಗೂ ಮಂಗಳಮುಖೀಯರು ಮಧ್ಯೆ ಪ್ರವೇಶಿಸಿ, ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುತ್ತಾರೆ. ಕೆಲವು ಮಕ್ಕಳು ಅವರನ್ನು ನೋಡಿ ಭಯ ಪಡುತ್ತಾರೆ ಎಂದು ಪ್ರವಾಸಿಗರು ದೂರಿದ್ದಾರೆ.

ನಿರ್ವಹಣೆಯಲ್ಲಿ ವೈಫ‌ಲ್ಯ: ಕಬ್ಬನ್‌ ಪಾರ್ಕ್‌ ನಿರ್ವಹಣೆಗೆಂದು 10-15 ಜನ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಿಸಿದ್ದರೂ, ಭಿಕ್ಷುಕರ ಕಾಟ ತಪ್ಪಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಸೆಕ್ಯುರಿಟಿಗಳ ಕಣ್ಣು ಮುಂದೆಯೇ ಪ್ರವಾಸಿಗರಿಗೆ ಕಣಿ ಹೇಳುವವರು, ಮಂಗಳಮುಖೀಯರು ಕಿರಿಕಿರಿ ಮಾಡುತ್ತಿದ್ದರೂ ಅವರ ನೆರವಿಗೆ ಧಾವಿಸುವುದಿಲ್ಲ. ಕೆಲವೊಮ್ಮೆ ಪ್ರವಾಸಿಗರಿಗೂ ಭಿಕ್ಷುಕ ಅಥವಾ ಮಂಗಳಮುಖೀಯರ ನಡುವೆ ಜಗಳವಾದರು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.

ಜಗಳಕ್ಕೆ ಬರುವ ಮಂಗಳಮುಖಿಯರು: ಪಾರ್ಕಿನ ಎಲ್ಲಾ ಗೇಟ್‌ಗಳಲ್ಲಿಯೂ ಸೆಕ್ಯುರಿಟಿ ಗಾರ್ಡ್‌ಗಳು ಇರುತ್ತಾರೆ. ಆದರೂ, ಕಣ್ಣು ತಪ್ಪಿಸಿ ಪಾರ್ಕ್‌ ಒಳಗೆ ಬರುತ್ತಾರೆ. ಪ್ರವಾಸಿಗರಿಗೆ ತೊಂದರೆ ಕೊಡುತ್ತಿರುವುದು ಕಂಡುಬಂದಲ್ಲಿ, ಭಿಕ್ಷುಕರನ್ನು ಪಾರ್ಕಿನಿಂದ ಆಚೆ ಕಳುಹಿಸಲಾಗುತ್ತದೆ. ಕೆಲವೊಮ್ಮೆ ಮಂಗಳಮುಖಿಯರು ನಮ್ಮ ಮೇಲೆ ಜಗಳಕ್ಕೆ ಬರುತ್ತಾರೆ. ಏನಾದರೂ ಹೇಳಿದರೆ ಪೊಲೀಸ್‌ ಕಂಪ್ಲೆಂಟ್‌ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ ಎಂದು ಕಬ್ಬನ್‌ ಪಾರ್ಕಿನ ಸೆಕ್ಯುರಿಟಿ ಗಾರ್ಡ್‌ ಅಳಲು ತೋಡಿಕೊಂಡಿದ್ದಾರೆ.

ಹಣಕ್ಕೆ ಒತ್ತಾಯಿಸುವ ಮಹಿಳೆಯರ ಗ್ಯಾಂಗ್‌: ಯಾವುದೇ ದೈಹಿಕ ಊನ, ಅಂಗವಿಕಲತೆಗೆ ಒಳಗಾಗದ ಐದಾರು ಮಹಿಳೆಯರ ಗ್ಯಾಂಗ್‌ವೊಂದು ಇಲ್ಲಿ ಭಿಕ್ಷೆಗೆ ಇಳಿದಿದ್ದು, ಹಣಕ್ಕಾಗಿ ಪೀಡಿಸುತ್ತಾರೆ. ಹಣ ನೀಡದಿದ್ದರೆ ಒತ್ತಾಯಿಸಿಯಾದರೂ ಹಣವನ್ನು ಪಡೆಯುತ್ತಾರೆ. ಇದರಿಂದ ವಾಯುವಿಹಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಭಿಕ್ಷೆ ಕೇಳುತ್ತಿದ್ದಾರೆ ಎಂದು ನಾವು ತಂದ ತಿಂಡಿಯನ್ನು ನೀಡಲು ಹೋದರೆ ನಿರಾಕರಿಸುವ ಈ ಮಹಿಳೆಯರ ಗ್ಯಾಂಗ್‌ ಹಣವನ್ನೇ ನೀಡಬೇಕೆಂದು ಒತ್ತಾಯಿಸುತ್ತಾರೆ. ಈ ವಿಚಾರವಾಗಿ ಕಬ್ಬನ್‌ ಪಾರ್ಕ್‌ ನಿರ್ವಹಣಾ ಘಟಕ ಸಂಪೂರ್ಣ ವಿಫಲವಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದರೆ ವಾಯುವಿಹಾರಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ವಾಯುವಿಹಾರಿ ಲೋಕೇಶ್‌ ತಿಳಿಸುತ್ತಾರೆ.

ಪ್ರೇಮಿಗಳೇ ಟಾರ್ಗೆಟ್‌: ಕಬ್ಬನ್‌ ಪಾರ್ಕ್‌ ಪ್ರೇಮಿಗಳ ನೆಚ್ಚಿನ ಸ್ಥಳವೆಂದೂ ಕರೆಯುತ್ತಾರೆ. ಪ್ರತಿದಿನ ನೂರಾರು ಯುವಕ-ಯುವತಿಯರು ಭೇಟಿ ನೀಡುತ್ತಾರೆ. ಸಾರ್ವಜನಿಕ ಸ್ಥಳವೆಂದು ತಿಳಿಯದೇ, ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಭಿಕ್ಷುಕರು ಹಾಗೂ ಮಂಗಳಮುಖಿಯರು ಅವರ ಬಳಿ ಹೋಗಿ ಹಣ ಕೇಳುತ್ತಾರೆ. ಹಣ ಇಲ್ಲವೆಂದರೆ, ಭಾವನಾತ್ಮಕ ಮಾತುಗಳನ್ನಾಡಿ ಹಣ ದೋಚುತ್ತಾರೆ. ಕೆಲವರಂತೂ ಹಣ ಕೊಡುವವರೆಗೂ ಎದ್ದು ಹೋಗೋದೆ ಇಲ್ಲ.

ಕಬ್ಬನ್‌ಪಾರ್ಕ್‌ನಲ್ಲಿ ಮೊದಲು ಮಹಿಳಾ ಭಿಕ್ಷುಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಪ್ರವಾಸಿ ಗರಿಗೆ ಹಾಗೂ ವಾಯುವಿಹಾರಿಗಳಿಗೆ ತೊಂದರೆಯುಂಟು ಮಾಡುತ್ತಿದ್ದರಿಂದ “ಹೊಯ್ಸಳ’ ಪೊಲೀಸ್‌ ಅವರಿಗೆ ಕಂಪ್ಲೇಟ್‌ ಮಾಡಲಾಗಿದ್ದು, ಅವರ ವಿರುದ್ಧ ಎಫ್ ಐಆರ್‌ ಹಾಕಲು ತಿಳಿಸಲಾಗಿದೆ. ಆದ್ದರಿಂದ ಇತ್ತೀಚೆಗೆ ಭಿಕ್ಷುಕಿಯರ ಕಾಟ ಕಡಿಮೆಯಾಗಿದೆ. -ಎಸ್‌.ಟಿ. ಬಾಲಕೃಷ್ಣ, ತೋಟಗಾರಿಕೆ ಇಲಾಖೆ (ಕಬ್ಬನ್‌ ಪಾರ್ಕ್‌) ಉಪನಿರ್ದೇಶಕರು

-ಭಾರತಿ ಸಜ್ಜನ್‌

ಟಾಪ್ ನ್ಯೂಸ್

Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ

Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ

1-dasdas

CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ

3-bangalore

Couples: ಲಿವಿಂಗ್‌ ಟುಗೆದರ್‌ನಲ್ಲಿದ್ದ ಮುಸ್ಲಿಂ ಯುವಕನಿಂದ ಯುವತಿಗೆ ವಂಚನೆ

Pakistan: ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ; 34 ಮಂದಿ ಮೃತ್ಯು, 100ಕ್ಕೂ ಹೆಚ್ಚು ಗಾಯ

Pakistan: ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ; 34 ಮಂದಿ ಮೃತ್ಯು, 100ಕ್ಕೂ ಹೆಚ್ಚು ಗಾಯ

Cauvery issue; Vatal Nagaraj calls for KRS siege

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ‌ ಜಿಲ್ಲೆಗೆ ಯೆಲ್ಲೊ ಅಲರ್ಟ್; ‌ಭಾರಿ ಮಳೆ ಸಾಧ್ಯತೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ‌ ಜಿಲ್ಲೆಗೆ ಯೆಲ್ಲೊ ಅಲರ್ಟ್; ‌ಭಾರಿ ಮಳೆ ಸಾಧ್ಯತೆ

ನಮ್ಮ ಕೆಲಸಗಳಿಂದ ಮತ್ತೊಬ್ಬರ ಕೆಡುಕಿಗೆ ಕಾರಣವಾಗದಂತೆ ನೋಡಿಕೊಳ್ಳಬೇಕು: ಪೇಜಾವರ ಶ್ರೀ

Chaturmasya: ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನ: ಪೇಜಾವರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-bangalore

Crime: ಹಣಕಾಸಿನ ವಿಚಾರಕ್ಕೆ ಸಹೋದ್ಯೋಗಿ ಕೊಲೆ ಮಾಡಿದ್ದ ಆರೋಪಿ ಬಂಧನ

7-bangalore

Bangalore: ಹೋಟೆಲ್‌ ಧ್ವಂಸ ಮಾಡಿದವರ ಸೆರೆ

6-bangalore

Bangalore: ಟ್ರಾಫಿಕ್‌ ಜಾಮ್‌ಗೆ ಸಿಲಿಕಾನ್‌ ಸಿಟಿ ಹೈರಾಣ!

3-bangalore

Couples: ಲಿವಿಂಗ್‌ ಟುಗೆದರ್‌ನಲ್ಲಿದ್ದ ಮುಸ್ಲಿಂ ಯುವಕನಿಂದ ಯುವತಿಗೆ ವಂಚನೆ

Karnataka Bandh: ವಿಮಾನಗಳಿಗೂ ತಟ್ಟಿದ ಕರ್ನಾಟಕ ಬಂದ್ ಬಿಸಿ… 44 ವಿಮಾನಗಳ ಹಾರಾಟ ರದ್ದು

Karnataka Bandh: ವಿಮಾನಗಳಿಗೂ ತಟ್ಟಿದ ಕರ್ನಾಟಕ ಬಂದ್ ಬಿಸಿ… 44 ವಿಮಾನಗಳ ಹಾರಾಟ ರದ್ದು

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ

Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ

8-bangalore

Crime: ಹಣಕಾಸಿನ ವಿಚಾರಕ್ಕೆ ಸಹೋದ್ಯೋಗಿ ಕೊಲೆ ಮಾಡಿದ್ದ ಆರೋಪಿ ಬಂಧನ

7-bangalore

Bangalore: ಹೋಟೆಲ್‌ ಧ್ವಂಸ ಮಾಡಿದವರ ಸೆರೆ

1-dasdas

CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ

6-bangalore

Bangalore: ಟ್ರಾಫಿಕ್‌ ಜಾಮ್‌ಗೆ ಸಿಲಿಕಾನ್‌ ಸಿಟಿ ಹೈರಾಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.