
ಕಾರು ಬಿಟ್ಟು ಮೆಟ್ರೋ ಹತ್ತಿ ಕಲ್ಯಾಣ ಮಂಟಪ ತಲುಪಿದ ಮದುಮಗಳು! ವಿಡಿಯೋ ವೈರಲ್
Team Udayavani, Jan 19, 2023, 12:45 PM IST

ಬೆಂಗಳೂರು: ಯಾವ್ಯಾವ ಕಾಲಕ್ಕೆ ಏನೇನು ಆಗ ಬೇಕೋ ಅದು ಆಗಲೇಬೇಕು ಎಂಬ ಮಾತಿದೆ. ಆದರೆ, ನಮ್ಮ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯು “ಆಗಬೇಕಾದ್ದನ್ನು ಸೂಕ್ತ ಕಾಲಕ್ಕೆ ಆಗದಂತೆ ಮಾಡಿದ’ ಎಷ್ಟೋ ಉದಾಹರಣೆಗಳಿವೆ. ತನ್ನ ಮದುವೆಗೆ ಈ ಸಮಸ್ಯೆ ಅಂಟಿಕೊಳ್ಳಬಾರದು ಎಂದು ನಿರ್ಧರಿಸಿದ ಯುವತಿಯೊಬ್ಬಳು, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪ ತಲುಪಲು ಕಾರು ಬಿಟ್ಟು “ಮೆಟ್ರೋ’ ಹತ್ತಿದ್ದಾಳೆ!
ಹೌದು, ಬೆಂಗಳೂರಿನ ವಧು ರೇಷ್ಮೆ ಸೀರೆ, ಚಿನ್ನಾಭರಣ ತೊಟ್ಟು, ಮೇಕಪ್ ಮಾಡಿಕೊಂಡು ಮನೆ ಮಂದಿಯೊಂದಿಗೆ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದಳು. ಆದರೆ, ಆಕೆಯಿದ್ದ ಕಾರು ನಗರದ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿತು. ಈ ದಟ್ಟಣೆಯಲ್ಲಿ ಕಾದು ಕುಳಿತರೆ, ಮುಹೂರ್ತ ಮೀರಿ ಹೋಗುವುದು ಖಚಿತ ಎಂದು ಯೋಚಿಸಿದ ಆಕೆ, ಕಾರಿನಲ್ಲಿ ಇಳಿದು ನೇರವಾಗಿ ಮೆಟ್ರೋ ಹತ್ತಿಯೇ ಬಿಟ್ಟಳು. ಕುಟುಂಬ ಸದಸ್ಯರೂ ಆಕೆ ಯನ್ನು ಹಿಂಬಾಲಿಸಿದರು.
ಇದನ್ನೂ ಓದಿ:ಬ್ಯಾಂಕ್ ದರೋಡೆ ತಡೆದ ಇಬ್ಬರು ಮಹಿಳಾ ಪೊಲೀಸರು: ಇಲ್ಲಿದೆ ವಿಡಿಯೋ
ಮೆಟ್ರೋ ದಲ್ಲಿ ವಧು ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದೆ. ಆಕೆಯನ್ನು ಎಲ್ಲರೂ “ಸ್ಮಾರ್ಟ್ ಮದುಮಗಳು’ ಎಂದು ಕರೆದಿದ್ದಾರೆ. ಈ ವಿಡಿಯೋ ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ 3 ಸಾವಿರ ವೀಕ್ಷಣೆ ಗಳಿಸಿದೆ.
Whatte STAR!! Stuck in Heavy Traffic, Smart Bengaluru Bride ditches her Car, & takes Metro to reach Wedding Hall just before her marriage muhoortha time!! @peakbengaluru moment 🔥🔥🔥 pic.twitter.com/LsZ3ROV86H
— Forever Bengaluru 💛❤️ (@ForeverBLRU) January 16, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Snake: ಆಟ ಆಡುತ್ತಿದ್ದಾಗ ಹಾವನ್ನೇ ಜಗಿದು ತಿಂದ 3 ವರ್ಷದ ಮಗು; ಸತ್ತು ಹೋದದ್ದು ಹಾವು.!

Video: ಸಿಗರೇಟ್ ವಿಚಾರ; ಕ್ಯಾಂಪಸ್ನಲ್ಲೇ ವಿದ್ಯಾರ್ಥಿಗಳು– ಭದ್ರತಾ ಸಿಬ್ಬಂದಿಗಳ ಮಾರಾಮಾರಿ

LOVE: ಮದುವೆಯಾದ 20 ದಿನದಲ್ಲೇ ಓಡಿಹೋದ ಪತ್ನಿ; ಹಳೆ ಪ್ರೇಮ್ ಕಹಾನಿಗೆ ಸಾಥ್ ಕೊಟ್ಟ ಪತಿ.!

Dog’s Birthday: ನಾಯಿಗಾಗಿ 16 ಲಕ್ಷ ರೂ.ವಿನ ದುಬಾರಿ ಮನೆ ನಿರ್ಮಿಸಿ ಗಿಫ್ಟ್ ಕೊಟ್ಟ ಯುವಕ

CSK Forever: ಮದುವೆ ಕಾರ್ಡ್ನಲ್ಲಿ ಧೋನಿ ಫೋಟೋ ಪ್ರಿಂಟ್ ಮಾಡಿಸಿದ ಅಭಿಮಾನಿ
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

ಮಹಿಳೆಯ ನಗ್ನ ದೇಹದ ಚಿತ್ರಣವು ಅಶ್ಲೀಲವೆಂದು ಪರಿಗಣಿಸಲಾಗದು: ಕೇರಳ ಹೈಕೋರ್ಟ್ ಹೇಳಿದ್ದೇನು?

Umesh Karajola ವಿನೂತನ ಪ್ರತಿಭಟನೆ: ಕೈಗೆ ಬೇಡಿ-ಕೊರಳಲ್ಲಿ ಸಾಲದ ಫಲಕ

ಮಹಿಳೆಯರ ಉಚಿತ ಪ್ರಯಾಣಕ್ಕೆ ‘Shakti Smart Card’ ಕಡ್ಡಾಯ: ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

K.Venakatesh;ನಿಮ್ಮ ಚಲನವಲನಕ್ಕಾಗಿ ಏಜೆಂಟ್ ಇಟ್ಟಿಲ್ಲ: ಅಧಿಕಾರಿಗಳಿಗೆ ಎಚ್ಚರಿಕೆ

Snake: ಆಟ ಆಡುತ್ತಿದ್ದಾಗ ಹಾವನ್ನೇ ಜಗಿದು ತಿಂದ 3 ವರ್ಷದ ಮಗು; ಸತ್ತು ಹೋದದ್ದು ಹಾವು.!