ರಾಜಧಾನಿಯಲ್ಲಿ ಸಂಭ್ರಮದ ದೀಪಾವಳಿ
Team Udayavani, Oct 29, 2019, 3:05 AM IST
ಬೆಂಗಳೂರು: ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಮೊದಲೆರಡು ದಿನ ಮನೆಗಳ ಹೊಸ್ತಿಲಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ, ಬಾಳೆಕಂಬ, ತೋರಣ ಅಲಂಕರಿಸಿ, ಸಂಜೆಯಾಗುತ್ತಲೇ ಬೆಳಕಿನ ಸಂಕೇತವಾದ ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಸಂಭ್ರಮಿಸಿದರು. ಈ ಬಾರಿ ದೀಪಾವಳಿ ಅಮವಾಸ್ಯೆ ಎರಡು ದಿನ ಬಂದಿದ್ದು, ಅನುಕೂಲಕ್ಕೆ ತಕ್ಕಂತೆ ಎರಡೂ ದಿನಗಳು ಮನೆಗಳಲ್ಲಿ, ವ್ಯಾಪಾರ ವಹಿವಾಟು ಮಾಡುವ ಸ್ಥಳಗಳಲ್ಲಿ ಲಕ್ಷ್ಮೀ ಪೂಜೆ ನಡೆದವು. ಪೂಜೆ ಬಳಿಕ ಪಟಾಕಿ ಹೆಚ್ಚಿ ಖುಷಿಪಟ್ಟರು.
ಭಾನುವಾರ ಸಂಜೆ ಹೆಚ್ಚು ಸಮಯ ನಗರದೆಲ್ಲೆಡೆ ಮಳೆಯಾಗಿದ್ದರಿಂದ ಪಟಾಕಿ ಹೊಡೆಯಲು ಕಾದಿದ್ದವರಿಗೆ ನಿರಾಸೆಯಾಯಿತು. ಹೀಗಾಗಿಯೇ, ಸೋಮವಾರ ಸಂಜೆಯಾಗುತ್ತಲೇ ಪಟಾಕಿ ಸದ್ದು ಜೋರಿತ್ತು. ಇನ್ನು ಹಬ್ಬದ ಕೊನೆಯ ದಿನ ಮಂಗಳವಾರ ಬಲಿಪಾಡ್ಯಮಿ ಇರುವುದರಿಂದ ಹೆಚ್ಚಿನ ಮಂದಿ ಪಟಾಕಿ ಸದ್ದು ಕೇಳುವ ಸಾಧ್ಯತೆಗಳಿವೆ.
ಮಾರುಕಟ್ಟೆ ವಹಿವಾಟು ಜೋರು: ಹಬ್ಬ ಹಾಗೂ ಲಕ್ಷ್ಮೀ ಪೂಜೆ ಹಿನ್ನೆಲೆ ಸೋಮವಾರವೂ ಕೂಡಾ ಬೆಳಗ್ಗೆಯಿಂದಲೇ ನಗರದ ಬಹುತೇಕ ಮಾರುಕಟ್ಟೆಗಳು ವ್ಯಾಪಾರ ವಹಿವಾಟು ಜೋರಿತ್ತು. ಭಾನುವಾರ ಜೋರು ಮಳೆಯಾದ ಪರಿಣಾಮ ಹೂವಿನ ದರ ತುಸು ಕಡಿಮೆಯಾಗಿತ್ತು. ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಗಾಂಧಿ ಬಜಾರ್ನಲ್ಲಿ ಜನದಟ್ಟಣೆ ಹೆಚ್ಚಿತ್ತು. ಜತೆಗೆ ಸೋಮವಾರವೂ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ, ಮೆಲ್ಸೇತುವೆ ಕೆಳಗೆ ಬಾಳೆಕಂಬ, ಮಾವಿನಸೊಪ್ಪು, ಹೂವಿನ ವ್ಯಾಪಾರ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ