ಸಚಿವರು, ಅಧಿಕಾರಿಗಳ ಗೈರು: ಸಭಾಪತಿ ಎಚ್ಚರಿಕೆ
Team Udayavani, Jul 10, 2018, 6:50 AM IST
ವಿಧಾನ ಪರಿಷತ್: ಸದನದಲ್ಲಿ ಕಡ್ಡಾಯವಾಗಿ ಹಾಜರಿರ ಬೇಕಿರುವ ಸಚಿವರು ಮತ್ತು ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ನೋಡಿಕೊಳ್ಳಿ ಎಂದು ಸಭಾನಾಯಕಿ ಡಾ.ಜಯಮಾಲಾ ಅವರಿಗೆ ತಾಕೀತು ಮಾಡಿದ್ದಾರೆ.
ಸದನಕ್ಕೆ ಬಾರದೆ ಅಧಿಕಾರಿಗಳು ತಪ್ಪಿಸಿಕೊಂಡರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಶೀಘ್ರವೇ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆದು ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸೋಮವಾರ ವಿಧಾನ ಪರಿಷತ್ನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಿ.ಟಿ.ದೇವೇಗೌಡ, ಪ್ರಿಯಾಂಕ್ ಖರ್ಗೆ, ಸಾ.ರಾ.ಮಹೇಶ್, ಪುಟ್ಟರಂಗ ಶೆಟ್ಟಿ ಹಾಗೂ ಶಿವಶಂಕರ ರೆಡ್ಡಿ ಕಡ್ಡಾಯವಾಗಿ ಹಾಜರಿರಬೇಕಿತ್ತು.ಆದರೆ, ಪುಟ್ಟರಂಗ ಶೆಟ್ಟಿ ಮತ್ತು ಶಿವಶಂಕರ ರೆಡ್ಡಿ ಮಾತ್ರ ಹಾಜರಿದ್ದರು. ಅದೇ ರೀತಿ ಅಧಿಕಾರಿಗಳಾದ ಅಜಯ್ ಸೇs…, ನಾರಾಯಣಸ್ವಾಮಿ, ಎಸ್.ಸಿ.ಶ್ರೀನಿವಾಸ್, ಎ.ಬಸವರಾಜ್ ಕಡ್ಡಾಯವಾಗಿ ಹಾಜರಿರಬೇಕಿತ್ತು. ಆ ಸಂದರ್ಭದಲ್ಲಿ ಕೆಲವರು ಹಾಜರಿಲ್ಲದಿದ್ದನ್ನು ಗಮನಿಸಿದ
ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ ಸೂಚನೆ ನೀಡಿದ ತಕ್ಷಣ ಅಧಿಕಾರಿಗಳು ಸದನಕ್ಕೆ ಹಾಜರಾದರು.