ದರೋಡೆಕೋರರ ಬಂಧನ
Team Udayavani, Aug 22, 2018, 12:22 PM IST
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಹೆದ್ದಾರಿಗಳಲ್ಲಿ ದರೋಡೆ ಮಾಡುತ್ತಿದ್ದ ಮಾಜಿ ಕಾರ್ಪೊರೇಟರ್, ರೌಡಿಶೀಟರ್ ದಿವಾನ್ ಅಲಿ ಸಹೋದರರ ಸಹಚರ ಅಫ್ರೋಜ್ ಪಾಷಾನನ್ನು ವಿವೇಕನಗರ ಪೊಲೀಸರು ಈಜಿಪುರ ರಿಂಗ್ ರಸ್ತೆಯ ಏರ್ ವ್ಯೂ ಪಾಯಿಂಟ್ ಬಳಿ ಬಂಧಿಸಿದ್ದಾರೆ.
ದಿವಾನ್ ಅಲಿ ಸಹೋದರರಾದ ಮೊಹಮ್ಮದ್ ಅಕºರ್, ಮೊಹಮ್ಮದ್ ಅಸ್ಗರ್ ಮತ್ತು ಮೊಹಮ್ಮದ್ ಖದಿರ್ ತಮ್ಮ ಸಹಚರರಾದ ಸೈತಾನ್ ಆಸೀಫ್, ಅಫ್ರೋಜ್, ಏಜಾಜ್ ಮತ್ತು ಅಪ್ಸರ್ ಹಾಗೂ ಅಸ್ಗರ್ ಖಾನ್ ಆ.19ರಂದು ಈಜಿಪುರ ರಿಂಗ್ ರಸ್ತೆಯ ಏರ್ ವ್ಯೂ ಪಾಯಿಂಟ್ ಬಳಿ ಇನೋವಾ ಕಾರಿನಲ್ಲಿ ದರೋಡೆಗೆ ಸಂಚು ರೂಪಿಸಿದ್ದರು.
ಈ ಮಾಹಿತಿ ಪಡೆದು ದಾಳಿ ನಡೆಸಲಾಗಿತ್ತು. ಈ ವೇಳೆ ಅಫ್ರೋಜ್ ಪಾಷಾನನ್ನು ಬಂಧಿಸಲಾಗಿದ್ದು, ಇತರೆ ಆರೋಪಿಗಳು ಪಾರಾರಿಯಾಗಿದ್ದಾರೆ. ಈತನಿಂದ ಒಂದು ಪಿಸ್ತೂಲ್ ಮತ್ತು 8 ಸಜೀವ ಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ