ಕ್ಯಾಬ್‌ ಬುಕಿಂಗ್‌ನಂತೆ ಡ್ರೋನ್‌ ಬುಕ್‌ ಮಾಡಿ!


Team Udayavani, Feb 14, 2023, 12:12 PM IST

ಕ್ಯಾಬ್‌ ಬುಕಿಂಗ್‌ನಂತೆ ಡ್ರೋನ್‌ ಬುಕ್‌ ಮಾಡಿ!

ಬೆಂಗಳೂರು: ಆ್ಯಪ್‌ ಆಧಾರಿತ ಕ್ಯಾಬ್‌ ಓಲಾ- ಉಬರ್‌ಗಳನ್ನು ಬುಕಿಂಗ್‌ ಮಾಡುವ ಮಾದರಿಯಲ್ಲೇ ಈಗ ರೈತರು ಮೊಬೈಲ್‌ನಲ್ಲೇ ಡ್ರೋನ್‌ ಬುಕಿಂಗ್‌ ಮಾಡಬಹುದು. ಹೀಗೆ ಬುಕಿಂಗ್‌ ಆದ ಡ್ರೋನ್‌ ತಾನಾಗಿಯೇ ಜಮೀನಿನಲ್ಲಿ ರಾಸಾಯನಿಕ ಸಿಂಪಡಣೆ ಮಾಡಿಕೊಂಡು ಬರುತ್ತದೆ!

ಫ್ಲೈಯಿಂಗ್‌ ವೆಡ್ಜ್ ಕಂಪನಿಯು ಪ್ರತಿಷ್ಠಿತ ಎಲ್‌ ಆ್ಯಂಡ್‌ ಟಿ ಸಹಭಾಗಿತ್ವದಲ್ಲಿ ಮೊದಲ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್‌ ಇದಾಗಿದ್ದು, ಮೊಬೈಲ್‌ ಅಪ್ಲಿಕೇಷನ್‌ ನಿಂದ ಇದು ಕಾರ್ಯಾಚರಣೆ ಮಾಡುತ್ತದೆ. ಅದರಂತೆ ರೈತರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾದ ಅಪ್ಲಿಕೇಷನ್‌ ಕ್ಲಿಕ್‌ ಮಾಡಿದರೆ ಸಾಕು, ಆಟೋಮೆಟಿಕ್‌ ಆಗಿ ಡ್ರೋನ್‌ಗೆ ಕನೆಕ್ಟ್ ಆಗುತ್ತದೆ. ಅಲ್ಲಿ ಗೂಗಲ್‌ ಮ್ಯಾಪ್‌ ಸಹಾಯ ದಿಂದ ಜಮೀನು ಆಯ್ಕೆ ಮಾಡಿಕೊಳ್ಳಬೇಕು. ಆಗ ಡ್ರೋನ್‌ ಸ್ವತಃ ತಾನೇ ಹೋಗಿ ರಾಸಾಯನಿಕ ಸಿಂಪಡಣೆ ಮಾಡಿ ಬರುತ್ತದೆ. ಇದನ್ನು ಏರೋ ಇಂಡಿಯಾ ಶೋನಲ್ಲಿ ಕರ್ನಾಟಕದ ಪೆವಿಲಿಯನ್‌ ನಲ್ಲಿ ಕಾಣಬಹುದು.

“ಸಾಮಾನ್ಯವಾಗಿ ಡ್ರೋನ್‌ ಚಾಲಕರಹಿತವಾಗಿ ದ್ದರೂ, ಅದರ ಆಪರೇಷನ್‌ಗೆ ಒಬ್ಬರು ಬೇಕಾಗುತ್ತಾರೆ. ಆದರೆ, ಇಲ್ಲಿ ಅದರ ಅವಶ್ಯಕತೆ ಇರುವುದಿಲ್ಲ (ಡಿಜಿಸಿಎ ನಿಯಮಗಳ ಪ್ರಕಾರ ಸುರಕ್ಷತೆ ದೃಷ್ಟಿಯಿಂದ ಒಬ್ಬರು ಇರಲೇಬೇಕು). ಚಂದಾದಾರರಾದ ರೈತರು ಬುಕಿಂಗ್‌ ಮಾಡುತ್ತಿದ್ದಂತೆ ಡ್ರೋನ್‌ ಲಭ್ಯವಾಗುತ್ತದೆ. ಅದಕ್ಕೆ ಅಳವಡಿಸಿರುವ ಟ್ಯಾಂಕ್‌ಗೆ ರಸಗೊಬ್ಬರ-ಔಷಧ ಹಾಕಿ ಮೊಬೈಲ್‌ನಲ್ಲಿ ಮ್ಯಾಪ್‌ ಸಹಾಯದಿಂದ ಜಮೀನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಡ್ರೋನ್‌ ಮತ್ತು ಮೊಬೈಲ್‌ ಅಪ್ಲಿಕೇಷನ್‌ಗೆ ಲಿಂಕ್‌ ಆಗಿರುತ್ತದೆ. ಅಲ್ಲಿ ಸಿಂಪಡಣೆ ಮಾದರಿಯನ್ನೂ ನಿಗದಿಪಡಿಸಲಾಗಿರುತ್ತದೆ. ಅದರಂತೆ ಕಾರ್ಯಾಚರಣೆ ಪೂರ್ಣಗೊಳಿಸಿ ಬರುತ್ತದೆ’ ಎಂದು ಫ್ಲೈಯಿಂಗ್‌ ವೆಡ್ಜ್ ಕಂಪನಿ ಸಿಇಒ ಟಿ.ಎನ್‌. ಸುಹಾಸ್‌ ತೇಜಸ್ಕಂದ ವಿವರಿಸುತ್ತಾರೆ.

25 ಎಫ್ಪಿಒ; 20 ಸಾವಿರ ರೈತರು: “ಪ್ರಸ್ತುತ ಪರೀಕ್ಷೆಗಳೆಲ್ಲವೂ ಪೂರ್ಣಗೊಂಡಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಪ್ರಮಾಣೀಕರಿಸುವುದು ಬಾಕಿ ಇದೆ. ಸುಮಾರು 25 ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, 20 ಸಾವಿರ ರೈತರು ಹಾಗೂ ಅಂದಾಜು 20 ಸಾವಿರ ಎಕರೆ ಜಮೀನು ಸಂಸ್ಥೆಗಳ ವ್ಯಾಪ್ತಿಗೆ ಬರುತ್ತಾರೆ. ಆರು ನಿಮಿಷದಲ್ಲಿ ಒಂದು ಎಕರೆಯಲ್ಲಿ ಸಿಂಪಡಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ಇದರ ಮೊತ್ತ 3.5- 4 ಲಕ್ಷ ರೂ. ಆಗಿದೆ. ಸರ್ಕಾರದಿಂದ ಇದಕ್ಕೆ ಶೇ. 70ರಷ್ಟು ರಿಯಾಯ್ತಿ ಕೂಡ ದೊರೆಯುತ್ತದೆ. ರೈತರು ಖರೀದಿಸಲಾಗದಿದ್ದರೆ, ವಿತರಕರ ಮೂಲಕ ಬಾಡಿಗೆ ರೂಪದಲ್ಲೂ ಇದನ್ನು ಪಡೆಯಬಹುದು’ ಎಂದು ಅವರು ಮಾಹಿತಿ ನೀಡಿದರು.

“ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಕಾರ್ಯಾಚರಣೆ ಆಗುವುದರಿಂದ ರೈತರು ರಾಸಾಯನಿ ಕದೊಂದಿಗೆ ನೇರ ಸಂಪರ್ಕ ಹೊಂದುವುದಿಲ್ಲ. ಸಿಂಪಡಣೆ ಮಾಡುವಾಗ ಅವರ ಮೈಮೇಲೆ ಬೀಳುವ ಸಾಧ್ಯತೆ ಇರುತ್ತದೆ. ಇಲ್ಲಿ ಆ ಸಮಸ್ಯೆ ಇರುವುದಿಲ್ಲ. ಜಮೀನಿನ ನಿರ್ದಿಷ್ಟ ಜಾಗಕ್ಕೇ ತೆರಳಿ ಸಿಂಪಡಣೆ ಮಾಡುವಂತೆಯೂ ಇದರಲ್ಲಿ ಅಡ್ಜಸ್ಟ್‌ ಮಾಡಬಹುದು. ಸದ್ಯಕ್ಕೆ ಪೇಲೋಡ್‌ ಸಾಮರ್ಥ್ಯ 16 ಲೀ.ವರೆಗಿದೆ’ ಎಂದರು.

ಇದಕ್ಕೆ ಆಪರೇಟರ್‌ಗಳ ಅವಶ್ಯಕತೆ ಇಲ್ಲ. ಆದರೆ, ಡಿಜಿಸಿಎ ನಿಯಮಗಳ ಪ್ರಕಾರ ಡ್ರೋನ್‌ ಆಪರೇಷನ್‌ ವೇಳೆ ಒಬ್ಬರು ಇರಲೇಬೇಕು. ಆ ಕಾರಣಕ್ಕೆ ನಾವು ಸ್ಥಳೀಯವಾಗಿ ಪಿಯುಸಿ ಅಥವಾ ಪದವಿ ಪೂರೈಸಿದ ಯುವಕರನ್ನು ನೇಮಿಸಿಕೊಂಡು, ಅವರಿಗೆ ತರಬೇತಿ ಕೊಡಿಸಲಾಗುತ್ತದೆ. ಅವರು ಆರ್ಡರ್‌ಗಳು ಬಂದಂತೆ ಸೇವೆಯನ್ನು ನೀಡುತ್ತಾರೆ. ಬಂದ ಆದಾಯದಲ್ಲಿ ಶೇ. 50ರಷ್ಟು ಅವರಿಗೆ ನೀಡಲಾಗುತ್ತದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಕೂಡ ಸೃಷ್ಟಿ ಆಗುತ್ತದೆ’ ಎಂದು ಹೇಳಿದರು.

ಡ್ರೋನ್‌ಗಳ ಸೆರೆಗೆ ಬಲೆ! : ಸಾಮಾನ್ಯವಾಗಿ ಮೀನುಗಳಿಗೆ ಬಲೆ ಹಾಕುವುದು ನಿಮಗೆ ಗೊತ್ತು. ಡ್ರೋನ್‌ಗಳಿಗೆ ಬಲೆ ಹಾಕಿ ಸೆರೆಹಿಡಿಯುವುದು ನಿಮಗೆ ಗೊತ್ತಾ? ಹೌದು, ಎದುರಾಳಿ ಡ್ರೋನ್‌ಗಳನ್ನು ಬಲೆ ಹಾಕಿ ಸೆರೆಹಿಡಿಯುವ ಡ್ರೋನ್‌ ಅನ್ನು ಫ್ಲೈಯಿಂಗ್‌ ವೆಡ್ಜ್ ಅಭಿವೃದ್ಧಿಪಡಿಸಿದೆ. “ಸುಮಾರು 15 ಮೀಟರ್‌ ದೂರದಲ್ಲಿರುವ ಶತ್ರುಗಳ ಡ್ರೋನ್‌ ಅನ್ನು ಗುರುತಿಸಿ, ಬಲೆ ಹಾಕಿ ಸೆರೆಹಿಡಿಯುವ “ಕ್ಯಾಪcರ್‌ ಡ್ರೋನ್‌’ ಅಭಿವೃದ್ಧಿಪಡಿಸಲಾಗಿದೆ. ಸ್ಫೋಟಕ ವಸ್ತುಗಳನ್ನು ಹೊತ್ತುತರುವ ಡ್ರೋನ್‌ಗಳನ್ನು ಇದು ತನ್ನ ರಡಾರ್‌ ಮತ್ತಿತರ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಿ ಬಲೆ ಬೀಸುತ್ತದೆ. ಸುರಕ್ಷಿತವಾಗಿ ಎದುರಾಳಿ ಡ್ರೋನ್‌ ಅನ್ನು ಒಂದೆಡೆ ಬಂಧಿಸಿಡುವ ಸಾಮರ್ಥ್ಯ ಹೊಂದಿದೆ’ ಎಂದು ಟಿ.ಎನ್‌. ಸುಹಾಸ್‌ ತಿಳಿಸಿದರು.

ಪ್ರಸ್ತುತ ಇಸ್ರೇಲ್‌ ಮೂಲದ ಡೆಲ್ಫ್ ಡೈನಾಮಿಕ್‌ ಎಂಬ ಕಂಪೆನಿ ಇಂತಹ ಡ್ರೋನ್‌ ಅಭಿವೃದ್ಧಿಪಡಿಸಿದ್ದು, ಅದು ಸುಮಾರು 8 ಮೀಟರ್‌ ದೂರದ ಡ್ರೋನ್‌ಗೆ ಬಲೆಹಾಕುತ್ತದೆ. ಅದರ ಬೆಲೆ 50-60 ಲಕ್ಷ ರೂ. ಆಗಿದೆ. ದೇಶೀಯವಾಗಿ ನಿರ್ಮಿಸಿದ “ಕ್ಯಾಪcರ್‌ ಡ್ರೋನ್‌’ 25 ಲಕ್ಷ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!

Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!

CCB Raid: ಲೋಕ ಚುನಾವಣೆ ಹಿನ್ನೆಲೆ; ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ

CCB Raid: ಲೋಕ ಚುನಾವಣೆ ಹಿನ್ನೆಲೆ; ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ

Motivational: ಪಿಯುನಲ್ಲಿ 2 ಬಾರಿ ಫೇಲ್‌, ಯುಪಿಎಸ್ಸಿ ಪಾಸ್‌

Motivational: ಪಿಯುನಲ್ಲಿ 2 ಬಾರಿ ಫೇಲ್‌, ಯುಪಿಎಸ್ಸಿ ಪಾಸ್‌

Bike Theft: ಹಗಲಲ್ಲಿ ಫುಡ್‌ಡೆಲಿವರಿ ಕೆಲಸ, ರಾತ್ರಿ ಬೈಕ್‌ಗಳ ಕಳವು: ಆರೋಪಿ ಬಂಧನ

Bike Theft: ಹಗಲಲ್ಲಿ ಫುಡ್‌ಡೆಲಿವರಿ ಕೆಲಸ, ರಾತ್ರಿ ಬೈಕ್‌ಗಳ ಕಳವು: ಆರೋಪಿ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.