ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು
Team Udayavani, Jul 7, 2022, 12:30 PM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ತುಷಾರ್ ಗಿರಿನಾಥ್ ಹೆಸರಿನಲ್ಲಿ ಹಲವರ ಬಳಿ ಹಣ ಪಡೆದು ವಂಚಿಸಲಾಗಿದೆ.
ತಾನು ತುಷಾರ್ ಗಿರಿನಾಥ್ ಎಂದು ಹಲವು ಜನರಿಗೆ ವಾಟ್ಸಪ್ ಮೂಲಕ ಮೆಸೇಜ್ ಮಾಡಿ ವಂಚಿಸಿದ್ದಾರೆ. ಬಿಲ್ಡರ್ ಗಳಿಗೆ, ಇತರೆ ಕಂಪೆನಿಗಳ ಮುಖ್ಯಸ್ಥರಿಗೆ ಹಾಗೂ ಹಲವು ಕೆಳ ಹಂತದ ಅಧಿಕಾರಿಗಳಿಗೆ ಮೆಸೇಜ್ ಮಾಡಿ, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. 7076522681 ನಂಬರ್ ನಲ್ಲಿ ಹಣಕ್ಕಾಗಿ ಬೇಡಿಕೆ ಇಡಲಾಗಿದೆ.
ಇದನ್ನೂ ಓದಿ:ಭಾರತದಲ್ಲಿ 24ಗಂಟೆಯಲ್ಲಿ 18,930 ಕೋವಿಡ್ ಪ್ರಕರಣ ದೃಢ; 35 ಮಂದಿ ಸಾವು
ಈ ಬಗ್ಗೆ ಸ್ವತಃ ಕಮಿಷನರ್ ತುಷಾರ್ ಗಿರಿನಾಥ್ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ನಂಬರ್ ಹಾಗೂ ಹೀಗೆ ಕರೆ ಮಾಡಿ ಬಾಕಿ ಹಣ ಕಟ್ಟಿ ಎಂದು ತಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸೈಬರ್ ಕ್ರೈಂ ನಲ್ಲಿ ದೂರು ಕೊಟ್ಟು ಖದೀಮರ ಬಂಧನಕ್ಕೆ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಆಗ್ರಹಿಸಿದ್ದಾರೆ.
Please note that 70765 22681 is not my number.
It has come to my notice that some fraudster has been misusing this as the number of the BBMP Chief Commissioner and misleading the public and officials. 1/2@CybercrimeCID @BlrCityPolice @CPBlr @BBMPAdmn
— Tushar Giri Nath IAS (@BBMPCOMM) July 7, 2022