Home burglary: ಸಾಲ ತೀರಿಸಲು ಗುಜರಿ ವ್ಯಾಪಾರಿ ಮನೆ ಕಳವು


Team Udayavani, Oct 4, 2023, 9:29 AM IST

Home burglary: ಸಾಲ ತೀರಿಸಲು ಗುಜರಿ ವ್ಯಾಪಾರಿ ಮನೆ ಕಳವು

ಬೆಂಗಳೂರು: ನಕಲಿ ಕೀ ಬಳಸಿ ಗುಜರಿ ವ್ಯಾಪಾರಿ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರೂ. ನಗದು ದೋಚಿ, ಲೋನ್‌ ಆ್ಯಪ್‌ಗಳ ಸಾಲ ತೀರಿಸಿದ್ದ “ಸಂಬಂಧಿ’ ತಿಲಕನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಜಯನಗರ ನಿವಾಸಿ ಮೊಹಮ್ಮದ್‌ ರಫೀಕ್‌ (35) ಬಂಧಿತ.

ಆರೋಪಿಯಿಂದ 1,10 ಕೋಟಿ ರೂ. ಮೌಲ್ಯದ 1.8 ಕೆ.ಜಿ. ಚಿನ್ನಾಭರಣ, 74,000 ರೂ. ನಗದು, ಕೃತ್ಯಕ್ಕೆ ಬಳಸಿದ ಬೈಕ್‌, ಮೊಬೈಲ್‌ ವಶಕ್ಕೆ ಪಡೆಯಲಾಗಿದೆ. ಎಸ್‌ಆರ್‌ಕೆ ಗಾರ್ಡನ್‌ ನಲ್ಲಿ ವಾಸವಿರುವ, ಗುಜರಿ ವ್ಯಾಪಾರಿ ಷಹನವಾಜ್‌ ಮನೆಯಲ್ಲಿ ಕಳ್ಳತನ ನಡೆ ದಿದ್ದು, ಇವರು ತಮ್ಮ ಮೊಮ್ಮಗಳ ಮದುವೆ ಗಾಗಿ ಚಿನ್ನಾಭರಣ, 8 ರಿಂದ 10 ಲಕ್ಷ ರೂ. ನಗದು ಇಟ್ಟಿದ್ದರು. ಈ ವಿಚಾರ ತಿಳಿದ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿ ಮಕ್ಕಳಿಗೆ ಬಳಸುವ ಪ್ಯಾಂಪರ್ಸ್‌, ಇತರೆ ವಸ್ತುಗಳ ಮಾರಾಟ ಮಳಿಗೆ ನಡೆಸುತ್ತಿದ್ದ. ಲೋನ್‌ ಆ್ಯಪ್‌ ಗಳಿಂದ, ಪರಿಚಯಸ್ಥರಿಂದ ಪಡೆದಿದ್ದ ಲಕ್ಷಾಂತರ ರೂ. ಸಾಲ ತೀರಿಸಲು ಕಳ್ಳತನ ಮಾಡಿದ್ದ.

ನಕಲಿ ಕೀ ಬಳಸಿ ಕೃತ್ಯ: ದೂರುದಾರ ಷಹನಾವಾಜ್‌ಗೆ ಸಂಬಂಧಿ ಆಗಿದ್ದ ಆರೋಪಿ, ಆಗಾಗ ಮನೆಗೆ ಬರುತ್ತಿದ್ದು, ಅವರ ಹಣಕಾಸಿನ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ. ಈ ಮಧ್ಯೆ ಷಹನಾ ವಾಜ್‌ 3 ತಿಂಗಳ ಹಿಂದೆ ತಮ್ಮ ಬೈಕ್‌ ಆರೋಪಿಗೆ ಕೊಟ್ಟಿದ್ದು, ಬೈಕ್‌ ಕೀ ಜತೆಗೆ ಇದ್ದ ಮನೆಯ ಕೀಗಳನ್ನು ಜಯನಗರದಲ್ಲಿ 700 ರೂ. ಕೊಟ್ಟು ನಕಲಿ ಮಾಡಿಸಿ ಕೊಂಡಿದ್ದ. ಸೆ.23ರಂದು ಷಹನಾವಾಜ್‌ ಕುಟುಂಬ ಸಂಬಂಧಿಕರ ಮದುವೆಗಾಗಿ ರಾಮನಗರಕ್ಕೆ ತೆರಳಿತ್ತು. ಆಗ ಆರೋಪಿ ಕಳ್ಳತನ ಕೃತ್ಯ ವೆಸಗಿದ್ದಾನೆ.

ಕಳ್ಳತನಕ್ಕೂ ಮುನ್ನ ಆನ್‌ಲೈನ್‌ ಶೋಧ: ಮೂರು ತಿಂಗಳ ಹಿಂದೆಯೇ ಆರೋಪಿ ನಕಲಿ ಕೀ ಮಾಡಿಸಿಕೊಂಡು ಕೃತ್ಯಕ್ಕೆ ಸಂಚು ರೂಪಿಸಿದ್ದ. ಅದಕ್ಕಾಗಿ ಯುಟ್ಯೂಬ್‌ಗಳಲ್ಲಿ ಸಿಸಿ ಕ್ಯಾಮೆರಾಕ್ಕೆ ಮರೆ ಮಾಚುವುದು ಹೇಗೆ? ಬೈಕ್‌ ನಂಬರ್‌ ಪ್ಲೇಟ್‌ ಬದಲಾ ವಣೆ ಸೇರಿ ಪ್ರಕರಣದಿಂದ ಪಾರಾಗುವುದು ಹೇಗೆಂದು ಶೋಧಿಸಿ ದ್ದಾನೆ. ಅದರಂತೆ ಓಎಲ್‌ಎಕ್ಸ್‌ನಲ್ಲಿ ತಮಿಳುನಾಡು ನೋಂದ ಣಿಯ ಬೈಕ್‌ ಖರೀದಿಸಿದ್ದ. ಆದರೆ, ಆ ನಂಬರ್‌ ಪ್ಲೇಟ್‌ಅನ್ನು ಬದಲಿಸಿದ್ದ. ಕೃತ್ಯದ ದಿನ ಈ ಬೈಕ್‌ ಬಳಸಿ, ಸಿಸಿ ಕ್ಯಾಮೆರಾದಿಂದ ಮರೆ ಮಾಚಲು ಆರೇಳು ಕಿ.ಮೀ. ದೂರು ಪ್ರಯಾಣಿಸಿದ್ದಾನೆ. ಆದರೆ, ಸೆ.29ಕ್ಕೆ ಜಯನಗರದಲ್ಲಿ ಚಿನ್ನಾಭರಣ ಅಂಗಡಿ ಯಲ್ಲಿ ಅಡಮಾನ ಇಡಲು ಹೋದಾಗ ಆರೋಪಿ ಬಂಧಿಸಲಾಗಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.