ಹಿಂದೂಗಳಿಗೆ ಬುದ್ಧಿ ಜೀವಿಗಳೇ ಅತೀ ಅಪಾಯಕಾರಿಗಳು: ಚಕ್ರವರ್ತಿ ಸೂಲಿಬೆಲೆ
Team Udayavani, Jan 29, 2023, 11:56 AM IST
ಬೆಂಗಳೂರು: ಹಿಂದೂಗಳಿಗೆ ಮುಸಲ್ಮಾನರು, ಕ್ರಿಶ್ಚಿಯನ್ನರು ಮತ್ತು ಬುದ್ಧಿಜೀವಿಗಳಿಂದ ಅಪಾಯವಿದೆ ಎಂದು ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲವ್ ಜಿಹಾದ್, ಭೂ ಜಿಹಾದ್, ಡ್ರಗ್ಸ್ ಮಾರಾಟ ಮುಂತಾದ ಚಟುವಟಿಕೆ ಮೂಲಕ ಮುಸಲ್ಮಾನರು ಒಡ್ಡುತ್ತಿರುವ ಅಪಾಯದ ನೇರ ಅನುಭವ ನಮಗೆ ಆಗುತ್ತಿದೆ. ಆದರೆ ಕ್ರಿಶ್ಚಿಯನರು ಒಳಗಿಂದೊಳಗೆ ಭಾರತದ ಮೇಲೆ ಮಸಲತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮತಾಂತರ ನಿಷೇಧ ಮಾಡಲು ಹೊರಟರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ಮಸಿ ಬಳಿಯಲು ಕ್ರಿಶ್ನಿಯನ್ನರು ಯತ್ತಿಸುತ್ತಾರೆ. ಬುದ್ಧಿಜೀವಿಗಳು ಅತಿ ಅಪಾಯಕಾರಿಯಾಗಿದ್ದು ತರುಣರ ಮೆದುಳಿಗೆ ಕೈಹಾಕಿ ನಮ್ಮ ಪರಂಪರೆಯ ಮೇಲೆ ಕೀಳು ಅಭಿಪ್ರಾಯ ಉಂಟು ಮಾಡಲು ಯತ್ನಿಸು ತ್ತಿದ್ದಾರೆ. ಬೇರೆ ದೇಶಗಳಲ್ಲಿ ಪರಸ್ಪರ ಕಚ್ಚಾಡುವ ಈ ಮೂವರು ಭಾರತದಲ್ಲಿ ಒಂದಾಗಿ ಪರಂಪರೆಯೊಂದಿಗಿನ ಹಿಂದೂಗಳ ಸಂಬಂಧವನ್ನು ತುಂಡರಿಸಲು ಪ್ರಯತ್ನಿಸುತ್ತಿದ್ದಾರೆಂದು ಕಿಡಿಕಾರಿದರು.
ನನ್ನಲ್ಲಿ ಇರುವ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 2011ರಲ್ಲಿ ಮುಸಲ್ಮಾನರ ಜನಸಂಖ್ಯೆ 18 ಲಕ್ಷ ಇದ್ದದ್ದು 2021ರ ಹೊತ್ತಿಗೆ 45 ಲಕ್ಷಕ್ಕೆ ಜಿಗಿದಿದೆ. ಮುಸಲ್ಮಾನರು ತಮ್ಮ ಮತ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರು ಬೆಂಗಳೂರಿನಲ್ಲೂ ಉತ್ತರ ಕನ್ನಡದಲ್ಲೂ ಮತದಾರರಾಗಿದ್ದುಕೊಂಡು ಚುನಾವಣೆಯ ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ, ಎರಡನೇ ಹಂತದಲ್ಲಿ ಉತ್ತರ ಕನ್ನಡಕ್ಕೆ ಹೋಗಿ ಮತ ಚಲಾಯಿಸಿ ರಾಜಕೀಯ ಸಾಮರ್ಥ್ಯ ತೋರ್ತುದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹಲಾಲ್ ನಿಗ್ರಹ ಮಸೂದೆ ಕರ್ನಾಟಕದಲ್ಲಿ ವಿಧಾನ ಮಂಡಲದಲ್ಲಿ ಮಂಡನೆ ಆಗುವಂತೆ ಸಂಘಟಿತವಾಗಿ ಹೋರಾಟ ನಡೆಸಬೇಕು. ಹಿಂದೂಗಳಿಗೆ ಹಿಂದೂ ದೇವರು ಮತ್ತು ದೇವರ ಅವತಾರಗಳು ಮಾತ್ರ ಆದರ್ಶ ವಾಗಬೇಕೇ ಹೊರತು ಸಿನಿಮಾ ನಟರಲ್ಲ ಎಂದು ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂದೆ ಹೇಳಿದರು.
ಲೇಖಕಿ ಎಸ್.ಆರ್.ಲೀಲಾ ಮಾತನಾಡಿ, ಹಿಂದೂಗಳಲ್ಲಿ ಪರಸ್ಪರ ದ್ವೇಷ ನಿರ್ಮಾಣ ಮಾಡಲು ಜಾತಿಯ ಹೆಸರಿನಲ್ಲಿ ಬೇರ್ಪಡಿಸಲಾಗುತ್ತಿದೆ. ಹಿಂದೂಗಳು ಇದರ ವಾಸ್ತವಿಕತೆಯನ್ನರಿತು ಜಾತಿ ಬೇಧವನ್ನು ಮರೆತು ಒಗ್ಗೂಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಪ್ರಿಲ್ ಮೊದಲ ವಾರ ಬಿಜೆಪಿ ಪಟ್ಟಿ: ಬಿಡುಗಡೆ ಭಾಗ್ಯ ಕಾಣದ ಕಾಂಗ್ರೆಸ್ ಪಟ್ಟಿ
ಅಂತಿಮವಾಗದ ಸಿದ್ದರಾಮಯ್ಯ ಕ್ಷೇತ್ರ: ಇಂದು ಬಾದಾಮಿಯಲ್ಲಿ 2. ಕಿ. ಮೀ. ರೋಡ್ ಶೋ
ರಾಜಧಾನಿಯಲ್ಲಿ ಇಂದು ಶಾ, ನಾಳೆ ಪ್ರಧಾನಿ ಮೋದಿ
ಪಂಚಮಸಾಲಿಗೆ ಸಿಗುವುದೇ ಮೀಸಲಾತಿ? ಇಂದು ಬೊಮ್ಮಾಯಿ ಸರಕಾರದ ಕೊನೇ ಸಂಪುಟ ಸಭೆ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
MUST WATCH
ಹೊಸ ಸೇರ್ಪಡೆ
ಹೆಚ್ಚಿನ ಮಾದಕ ದ್ರವ್ಯಗಳು ಪಾಕ್ ನಿಂದ ರವಾನೆ; ಸಾಗರದಲ್ಲಿ ಭದ್ರತೆ ಬಲಪಡಿಸಬೇಕು: ಶಾ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ