ಕ್ಷಣದಲ್ಲಿ ಮೆಟ್ರೋ ಕಾರ್ಡ್‌ ರಿಚಾರ್ಜ್‌


Team Udayavani, Dec 16, 2021, 10:32 AM IST

namma metro

Representative Image used

ಬೆಂಗಳೂರು: “ನಮ್ಮ ಮೆಟ್ರೋ’ ಪ್ರಯಾಣಿಕರು ಈಗ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡಷ್ಟೇ ಅವಧಿಯಲ್ಲಿ ಮೆಟ್ರೋ ಕಾರ್ಡ್‌ ರೀಚಾರ್ಜ್‌ ಮಾಡಿಕೊಳ್ಳಬಹುದು. ಮೆಟ್ರೋಪ್ರಯಾಣಕ್ಕಾಗಿಟಾಪ್‌ಅಪ್‌ಕಾರ್ಡ್‌ ರೀಚಾರ್ಜ್‌ಗೆ ಮತ್ತು ಹೀಗೆ ರೀಚಾರ್ಜ್‌ ಮಾಡಿದ ಮೊತ್ತ ಜಮೆ ಆಗಲು ಗಂಟೆಗಟ್ಟಲೆ ಕಾಯಬೇಕಿಲ್ಲ.

ಈ ಆನ್‌ಲೈನ್‌ ಸೇವೆ ಇನ್ಮುಂದೆ ನಿಲ್ದಾಣಗಳಲ್ಲೇ ಲಭ್ಯವಾಗಲಿದೆ. ಪ್ರತಿ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್‌ ಕೌಂಟರ್‌ ಜತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ವು ಕಾರ್ಡ್‌ ಟಾಪ್‌ಅಪ್‌ ಟರ್ಮಿನಲ್‌ (ಸಿಟಿಟಿ) ಎಂಬ ಆನ್‌ಲೈನ್‌ ರೀಚಾರ್ಜ್‌ ಸೇವೆಯನ್ನು ಆರಂಭಿಸಿದೆ.

ಈ ಯಂತ್ರದಲ್ಲೇ ಪ್ರಯಾಣಿಕರು ಮೆಟ್ರೋ ಮೊಬೈಲ್‌ ಆ್ಯಪ್‌, ನಿಗಮದ ವೆಬ್‌ಸೈಟ್‌, ಫೋನ್‌ಪೇಅಥವಾ ಪೇಟಿಯಂ ಇದರಲ್ಲಿ ಯಾವುದಾದರೂ ಮಾದರಿಯಿಂದ ಕಾರ್ಡ್‌ ರೀಚಾರ್ಜ್‌ ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚು ಸಮಯವೂ ಹಿಡಿಯುವುದಿಲ್ಲ. ಜತೆಗೆ ಕೆಲವೇ ಕ್ಷಣಗಳಲ್ಲಿ ಕಾರ್ಡ್‌ಗೆ ಹಣಕೂಡ ಜಮೆ ಆಗುತ್ತದೆ.

ಇದಕ್ಕಾಗಿ ಪ್ರಯಾಣಿಕರು ಮಾಡಬೇಕಾದ್ದಿಷ್ಟೇ- ಸಿಟಿಟಿ ಮುಂದೆನಿಂತು, ಯಾವ ಮಾದರಿಯಲ್ಲಿ ರೀಚಾರ್ಜ್‌ ಮಾಡಲಿದ್ದೀರಿ ಎಂಬುದನ್ನು ನಿಗದಿತ ಮೊತ್ತದೊಂದಿಗೆ ನಮೂದಿಸಬೇಕು. ನಂತರ ನಿಮ್ಮ ಪ್ರಯಾಣದ ಕಾರ್ಡ್‌ ಅನ್ನು ಸಿಟಿಟಿ ಯಂತ್ರದಲ್ಲಿ ಪ್ರಸ್ತುತಪಡಿಸಬೇಕು. “ಕ್ಲೇಮ್‌ ಆನ್‌ಲೈನ್‌ ಟಾಪ್‌ ಅಪ್‌’ ಗುಂಡಿಯನ್ನು ಒದಗಿಸಬೇಕು.

“ಹೌದು’ ಎಂದು ದೃಢೀಕರಿಸಿದ ನಂತರ ರೀಚಾರ್ಜ್‌ ಮಾಡಿದ ಮೊತ್ತವನ್ನು ಕಾರ್ಡ್‌ಗೆ ಜಮೆ ಆಗುತ್ತದೆ ಹಾಗೂ ಕಾರ್ಡ್‌ನಲ್ಲಿರುವ ಬಾಕಿ ಮೊತ್ತವನ್ನು ನವೀಕರಿಸಲಾಗುತ್ತದೆ. ಪ್ರಯಾಣಿಕರು ತಮ್ಮ ಟ್ರಾವೆಲ್‌ ಕಾರ್ಡ್‌ನಲ್ಲಿರುವ ಮೊತ್ತವನ್ನು ತಿಳಿಯಲೂ ಈ ಸಿಟಿಟಿ ಬಳಸಬಹುದು. ಆದರೆ, ಹೀಗೆ ರೀಚಾರ್ಜ್‌ ಮಾಡಿಸಿದ ಕಾರ್ಡ್‌ ಅನ್ನು ಆರು ತಿಂಗಳಲ್ಲಿ ಒಮ್ಮೆಯಾದರೂ ಬಳಕೆ ಮಾಡುವ ನಿಯಮ ಇದಕ್ಕೂ ಅನ್ವಯ ಆಗಲಿದೆ.

6 ಸಾವಿರ ವಹಿವಾಟು; 10 ಲಕ್ಷ ರೂ. ಸಂಗ್ರಹ

ಅಂದಹಾಗೆ ನಿತ್ಯ “ನಮ್ಮ ಮೆಟ್ರೋ’ದಲ್ಲಿ ಸುಮಾರು ಆರು ಸಾವಿರ ಆನ್‌ಲೈನ್‌ ರೀಚಾರ್ಜ್‌ ಮಾಡಲಾಗುತ್ತಿದ್ದು, ಇದರ ಮೊತ್ತ ಅಂದಾಜು8-10 ಲಕ್ಷ ರೂ. ಆಗಿದೆ. ಆದರೆ, ಈಗಿರುವ ವ್ಯವಸ್ಥೆಯಲ್ಲಿ ರೀಚಾರ್ಜ್‌ ಮಾಡಿಸಿದ ತಕ್ಷಣ ಆ ಹಣವುಕಾರ್ಡ್‌ಗೆ ಜಮೆ ಆಗುವುದಿಲ್ಲ.ಕೆಲ ಸಲ ದಿನಗಟ್ಟಲೆ ಕಾಯಬೇಕು ಎಂಬ ಆರೋಪ ಕೇಳಿಬರುತ್ತಿತ್ತು. ಇನ್ನು ನಿಲ್ದಾಣಗಳಕೌಂಟರ್‌ ಗಳಲ್ಲಿ ಚಿಲ್ಲರೆ ಸಮಸ್ಯೆ ಆಗುತ್ತಿತ್ತು. ಜತೆಗೆ ಕೋವಿಡ್‌ ಹಿನ್ನೆಲೆಯಲ್ಲಿ ಈ ಯಂತ್ರವು ಮತ್ತಷ್ಟು ಸುರಕ್ಷಿತ ಸೇವೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.