ಸಂತ್ರಸ್ತರತ್ತ ಸಹಸ್ರ ನೆರವಿನ ಹಸ್ತ


Team Udayavani, Aug 19, 2018, 11:59 AM IST

santrastaratta.jpg

ಬೆಂಗಳೂರು: ಭಾರಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಹಾಗೂ ಕೇರಳ ಸಂತ್ರಸ್ತರಿಗೆ 3.28 ಕೋಟಿ ರೂ. ನೆರವು ನೀಡುವ ಜತೆಗೆ, ಸಾರ್ವಜನಿಕರಿಂದ ಪರಿಹಾರ ಸಾಮಗ್ರಿ ಸಂಗ್ರಹಿಸಲು ಪಾಲಿಕೆಯಿಂದ ಕೇಂದ್ರ ಒಂದನ್ನು ತೆರೆಯಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಮೇಯರ್‌ ಆರ್‌.ಸಂಪತ್‌ರಾಜ್‌, ನೆರೆ ಸಂತ್ರಸ್ತರ ನೆರವಿಗಾಗಿ 198 ಪಾಲಿಕೆ ಸದಸ್ಯರ ಒಂದು ತಿಂಗಳ ಹಾಗೂ ಅಧಿಕಾರಿ ಮತ್ತು ನೌಕರರ ಒಂದು ದಿನದ ವೇತನದ ಒಟ್ಟು 1.28 ಕೋಟಿ ರೂ.ಗಳನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡಲಾಗುವುದು. ಜತೆಗೆ ಕೊಡಗು ಹಾಗೂ ಕೇರಳಕ್ಕೆ ತಲಾ ಒಂದು ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 

ಕೊಡಗಿನ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಉದ್ದೇಶದಿಂದ ಪಾಲಿಕೆಯ ಕೇಂದ್ರ ಕಚೇರಿಯ ಡಾ.ರಾಜ್‌ಕುಮಾರ್‌ ಗಾಜಿನ ಭವನದಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರ ತೆರೆಯಲಾಗಿದೆ. ಜತೆಗೆ ಪಾಲಿಕೆಯ ಎಲ್ಲ 198 ವಾರ್ಡ್‌ಗಳ ಕಚೇರಿಗಳಿಗೂ ಸಾರ್ವಜನಿಕರು ಸಾಮಗ್ರಿಗಳನ್ನು ತಲುಪಿಸಬಹುದಾಗಿದ್ದು, ತಮ್ಮ ಹೆಸರು ನೋಂದಾಯಿಸಿ ದೇಣಿಗೆ ನೀಡಬಹುದಾಗಿದೆ ಎಂದು ಹೇಳಿದರು.

ವೇತನ ಕಡಿತಕ್ಕೆ ಆಕ್ಷೇಪ!:ಕೊಡಗಿನ ನೆರೆ ಸಂತ್ರಸ್ತರಿಗೆ ತಮ್ಮ ಒಂದು ದಿನ ವೇತನ ಕಡಿತಗೊಳಿಸುವ ಕುರಿತು ಬಿಬಿಎಂಪಿ ಅಧಿಕಾರಿ, ನೌಕರರ ಸಂಘದ ಒಂದು ಬಣ ಪತ್ರಿಕಾಗೋಷ್ಠಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.

ವೇತನ ಕಡಿತದ ಕುರಿತು ತಮ್ಮೊಂದಿಗೆ ಚರ್ಚಿಸದೆ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಮಾಯಣ್ಣ ನೇತೃತ್ವದ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ಅಮೃತ್‌ರಾಜ್‌ ನೇತೃತ್ವದ ಸಂಘದ ಸದಸ್ಯರು ಒಂದು ದಿನದ ವೇತನ ನೀಡಲು ಯಾರ ಅಭ್ಯಂತರವೂ ಇಲ್ಲವೆಂದರು. ಇದರಿಂದ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಮಧ್ಯ ಪ್ರವೇಶಿಸಿದ ಮೇಯರ್‌, ಅಧಿಕಾರಿ, ನೌಕರರಿಗೆ ಇಷ್ಟವಿದ್ದರೆ ಒಂದು ದಿನದ ವೇತವನ್ನು ಸಂತ್ರಸ್ತರ ಪರಿಹಾರ ನಿಧಿಗೆ ನೀಡಬಹುದು. ಬಲವಂತವಾಗಿ ಯಾರ ವೇತನವನ್ನೂ ಕಡಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೆರೆ ಸಂತ್ರಸ್ತರಿಗೆ ಸಾರ್ವಜನಿಕರು ಹಳೆಯ ಬಟ್ಟೆಗಳನ್ನು ಕಳುಹಿಸಬೇಡಿ. ಇದರಿಂದ ಅವರ ಮನಸ್ಸಿಗೆ ನೋವಾಗುತ್ತದೆ. ಗುಣಮಟ್ಟದ ಆಹಾರ ಪದಾರ್ಥ ಹಾಗೂ ಔಷಧಗಳನ್ನು ನೀಡಿ.
-ಪದ್ಮನಾಭ ರೆಡ್ಡಿ, ವಿಪಕ್ಷ ನಾಯಕ 

ಕಾರ್ಪೊರೇಟರ್‌ಗಳ ಒಂದು ತಿಂಗಳ ಗೌರವಧನ ಹಾಗೂ ಅಧಿಕಾರಿ, ನೌಕರರ ಒಂದು ದಿನದ ವೇತನ ಸೇರಿ 1.28 ಕೋಟಿ ಹಾಗೂ ಪಾಲಿಕೆಯಿಂದ 2 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು.
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ

Ad

ಟಾಪ್ ನ್ಯೂಸ್

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

9-moodbidri

ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ:ಇಬ್ಬರು ಉಪನ್ಯಾಸಕರು, ಗೆಳೆಯ ಸೇರಿ ಮೂವರು ಆರೋಪಿಗಳ ಬಂಧನ

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ

Devanahalli: ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ

ʼಕೂಲಿʼ ಟ್ರೇಲರ್‌ ರಿಲೀಸ್, ಆಮಿರ್‌ ಖಾನ್‌ ಜತೆಗಿನ ಸಿನಿಮಾದ ಬಗ್ಗೆ ಅಪ್ಡೇಟ್‌ ಕೊಟ್ಟ ಲೋಕೇಶ್

ʼಕೂಲಿʼ ಟ್ರೇಲರ್‌ ರಿಲೀಸ್, ಆಮಿರ್‌ ಖಾನ್‌ ಜತೆಗಿನ ಸಿನಿಮಾದ ಬಗ್ಗೆ ಅಪ್ಡೇಟ್‌ ಕೊಟ್ಟ ಲೋಕೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲಾವಿದನಿಗೆ ನಿಂದನೆ: ಕನ್ನಡ, ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿರುದ್ಧ ಪ್ರಕರಣ

ಕಲಾವಿದನಿಗೆ ನಿಂದನೆ: ಕನ್ನಡ, ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿರುದ್ಧ ಪ್ರಕರಣ

7

Arrested: ಮಸಾಜ್‌ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಮಹಿಳೆ ಸೆರೆ, ನಾಲ್ವರ ರಕ್ಷಣೆ

Bengaluru: ದಾರಿ ಬಿಡದಿದ್ದಕ್ಕೆ ಸವಾರನ ಮೇಲೆ ಹಲ್ಲೆ

Bengaluru: ದಾರಿ ಬಿಡದಿದ್ದಕ್ಕೆ ಸವಾರನ ಮೇಲೆ ಹಲ್ಲೆ

5

Tragic: ಪುತ್ರಿಯ ಆತ್ಮಹತ್ಯೆ ಕಂಡು ತಾಯಿಯೂ ಆತ್ಮಹ*ತ್ಯೆ

Bengaluru: ಜೈಲಿನಿಂದಲೇ ಉಗ್ರ ಕೃತ್ಯ ಸಂಚು; ತಪ್ಪೊಪ್ಪಿಗೆ ಹೇಳಿಕೆ

Bengaluru: ಜೈಲಿನಿಂದಲೇ ಉಗ್ರ ಕೃತ್ಯ ಸಂಚು; ತಪ್ಪೊಪ್ಪಿಗೆ ಹೇಳಿಕೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Brahmavar ಬೈಕ್‌ ಅಪಘಾತ: ಮೂವರಿಗೆ ಗಾಯ

Brahmavar ಬೈಕ್‌ ಅಪಘಾತ: ಮೂವರಿಗೆ ಗಾಯ

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

Gangolli; ದನ ಕಳ್ಳತನಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

11-sagara

Sagara: ಲಿಂಗನಮಕ್ಕಿ ಜಲಾಶಯ; ಪ್ರವಾಹದ ಮೊದಲ ಮುನ್ಸೂಚನೆ

supreme-Court

ಜಯತೀರ್ಥರ ಆರಾಧನೆ: ಮಂತ್ರಾಲಯ ರಾಯರ ಮಠದ ಅರ್ಜಿ ವಜಾ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

ಆನಂದಪುರ; ಕಾರು-ಬಸ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.