ಮೆಟ್ರೋ: ಗರಿಗೆದರಿದ ರಿಯಲ್‌ ಎಸ್ಟೇಟ್‌

ಕೋವಿಡ್ ಲಾಕ್‌ಡೌನ್‌ ನಿಂದ ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಉದ್ಯಮ ಚೇತರಿಕೆಯತ್ತ

Team Udayavani, Sep 3, 2021, 3:15 PM IST

ಮೆಟ್ರೋ: ಗರಿಗೆದರಿದ ರಿಯಲ್‌ ಎಸ್ಟೇಟ್‌

ಬೆಂಗಳೂರು: “ನಮ್ಮ ಮೆಟ್ರೋ’2ನೇ ಹಂತದ ವಿಸ್ತರಿತ ಕೆಂಗೇರಿ ಮಾರ್ಗವು ಕೇವಲ ಹೊರವಲಯವನ್ನು ನಗರದ ಹೃದಯಭಾಗಕ್ಕೆ ಸಂಪರ್ಕ ಕಲ್ಪಿಸುವ “ಸಂಚಾರ ನಾಡಿ’ ಮಾತ್ರವಲ್ಲ; ಆ ಭಾಗದ ಸುತ್ತಲಿನ ರಿಯಲ್‌ ಎಸ್ಟೇಟ್‌ ಉದ್ಯಮ ಗರಿಗೆದರುವಲ್ಲಿಯೂ ಪ್ರಮುಖಪಾತ್ರ ವಹಿಸಲಿದೆ.

ಕೋವಿಡ್ ಹಾವಳಿ ಮತ್ತು ಲಾಕ್‌ಡೌನ್‌ ನಿಂದ ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಈ ಉದ್ಯಮಕ್ಕೆ “ನಮ್ಮ ಮೆಟ್ರೋ’ ಉತ್ತೇಜನ
ನೀಡಿದಂತಾಗಿದ್ದು, ನಗರದ ಪಶ್ಚಿಮ ಭಾಗದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು, ದೊಡ್ಡ ಸಮ್ಮೇಳನ ಸಭಾಂಗಣಗಳು, ಮಾಲ್‌ಗ‌ಳು,
ಅಪಾರ್ಟ್‌ಮೆಂಟ್‌ಗಳು ತಲೆಯೆತ್ತಲಿವೆ. ಈಗಾಗಲೇ ಇರುವ ಮಳಿಗೆಗಳು, ವಸತಿ ಸಮುತ್ಛಯಗಳು ಮತ್ತು ನಿವೇಶನಗಳಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ.

ಈ ಮೊದಲು ನಗರದ ಕೋರ್‌ ಏರಿಯಾದಲ್ಲಿಯೇ ಬೀಡುಬಿಡಲು ಇಚ್ಛಿಸುತ್ತಿದ್ದ ಜನ ಈಗ ಹೊರವಲಯದಲ್ಲಿ ಹರಡಿಕೊಳ್ಳಲಿದ್ದಾರೆ. ಇದರಿಂದ ಕೆಂಗೇರಿ,ಪಟ್ಟಣಗೆರೆ, ಕುಂಬಳಗೋಡು,ಬಿಡದಿ ಸೇರಿದಂತೆ ಮಾರ್ಗದ ಆಸುಪಾಸು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿಗೆ ಮತ್ತಷ್ಟು ಬೆಲೆ ಬರಲಿದೆ. ಇದೇ ವೇಳೆ ನಗರದ ಹೃದಯಭಾಗದಲ್ಲಿ ಗಗನಕ್ಕೇರಿರುವ ಮಳಿಗೆಗಳು, ಮನೆಗಳ ಬಾಡಿಗೆ ದರ ತಕ್ಕಮಟ್ಟಿಗೆ ಕಡಿಮೆ ಆಗಲೂ ಬಹುದು. ಕಾರಣವಿಷ್ಟೇ, ಸಾರ್ವಜನಿಕರು ಹೊರವಲಯದತ್ತ ಹೋದರೆ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳೂ ವಿಸ್ತರಿಸಲಿವೆ.

ಆಗ ಹೃದಯಭಾಗದಲ್ಲೂ ಕೈಗೆಟಕುವ ದರದಲ್ಲಿ ಬಾಡಿಗೆ ಮನೆಗಳು ದೊರೆಯಬಹುದು. ಉದ್ದೇಶಿತ ಮಾರ್ಗಗಳುದ್ದಕ್ಕೂ ವಾಹನಗಳ ದಟ್ಟಣೆ ತಗ್ಗಲಿದೆ.ಇದರಿಂದವಾಯುಮಾಲಿನ್ಯ ಕಡಿಮೆ ಆಗಲಿದೆ. ಮನರಂಜನಾ ತಾಣಗಳು, ಶಾಪಿಂಗ್‌ ಮಾಲ್‌ಗ‌ಳ ಆಯ್ಕೆ ಕೂಡ ಬದಲಾಗಲಿದೆ.

ಈಗಾಗಲೇ ಜನ ಅಲ್ಲೆಲ್ಲಾ ಭೂಮಿ ಖರೀದಿ, ಮನೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ವಿಸ್ತರಣೆ ಮಾರ್ಗಗಳಿಂದ ನಗರದ ಯಾವುದೇ ಮೂಲೆ ಯಿಂದ ಕೇವಲ ಅರ್ಧ ಗಂಟೆಯಲ್ಲಿ ನಗರದ ಹೃದಯಭಾಗವನ್ನುತಲುಪಬಹುದು. ಹಾಗಾಗಿ, ಸಹಜವಾಗಿಯೇ ಜನ ಮೆಟ್ರೋ ಹಾದು ಹೋಗುವ ಮಾರ್ಗಗಳ ಸುತ್ತಮುತ್ತ ನೆಲೆಸಲುಬಯಸುತ್ತಾರೆ. ಪರಿಣಾಮ ನಗರದ ಹೊರವಲಯಗಳಲ್ಲಿ ಭೂಮಿ ಬೆಲೆ ಶೇ.15ರಿಂದ 20ರಷ್ಟು ಏರಿಕೆ ಆಗಬಹುದು’ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿ ರಮೇಶ್‌ ತಿಳಿಸುತ್ತಾರೆ.

ಇದನ್ನೂ ಓದಿ:ಮಕ್ಕಳ ಭವಿಷ್ಯದ ಕುತ್ತಿಗೆ ಕೊಯ್ಯುವಂಥ ಕೆಲಸದಲ್ಲಿ ಭಾಗಿಯಾದ ಪಶ್ಚಾತ್ತಾಪ ಹೊರಬೇಕಾದೀತು!

ಮೆಟ್ರೋ ನಿಲ್ದಾಣಗಳಿಂದ ವ್ಯವಸ್ಥಿತವಾಗಿ ಬಸ್‌ ಸಂಪರ್ಕ ಸೇವೆ ದೊರೆತರೆ, ಆಟೋ, ಟ್ಯಾಕ್ಸಿಗಳಿಗೂ ಹೊಡೆತ ಬೀಳಲಿದೆ. ಆಗ, ಜನ ಉದ್ದೇಶಿತ ಮಾರ್ಗಗಳಲ್ಲಿ ಸಂಪೂರ್ಣವಾಗಿ ಸಾರ್ವಜನಿಕ ಸಾರಿಗೆ ಮೊರೆಹೋಗುತ್ತಾರೆ. ಆಗ ವಾಹನ ದಟ್ಟಣೆ ಕಡಿಮೆ ಆಗಲಿದ್ದು, ಅಪಘಾತಗಳ ಸಂಖ್ಯೆ ತಗ್ಗಿಸಲಿಕ್ಕೂ ಕಾರಣವಾಗಲಿದೆ. ಎಂದು ಸಾರಿಗೆ ತಜ್ಞರು ವಿವರಿಸುತ್ತಾರೆ.

ಶೇ. 20-25ರಷ್ಟು ವೃದ್ಧಿ ನಿರೀಕ್ಷೆ
“ಜಗತ್ತಿನ ಯಾವುದೇ ಭಾಗದಲ್ಲಿ ಮೆಟ್ರೋದಂತಹ ನಗರ ಸಮೂಹ ಸಾರಿಗೆಗಳು ಬಂದಲ್ಲೆಲ್ಲಾ ವಸತಿ, ವಾಣಿಜ್ಯ ಚಟುವಟಿಕೆಗಳು ಗರಿಗೆದರಿರುವುದನ್ನು ಕಾಣಬಹುದು. ಉದಾಹರಣೆಗೆ ನ್ಯೂಯಾರ್ಕ್‌, ಲಂಡನ್‌ನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಶೇ. 30ರಷ್ಟು ವೃದ್ಧಿ ಯಾಯಿತು. ಸಿಲಿಕಾನ್‌ ಸಿಟಿ ಕೂಡ ಇದಕ್ಕೆ ಹೊರತಾಗಿಲ್ಲ. ಕೆಂಗೇರಿವರೆಗೆ ಮೆಟ್ರೋ ವಿಸ್ತರಣೆ ಆಗಿದ್ದರಿಂದ ಆ ಭಾಗದಲ್ಲಿ ಶೇ.20 ರಿಂದ 25 ರಷ್ಟು ಭೂಮಿ ಬೆಲೆಯಲ್ಲಿ ಏರಿಕೆಕಂಡುಬರಲಿದೆ’ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಸಂಘಗಳ ಒಕ್ಕೂಟ (ಕ್ರೆಡಾಯ್‌)ಬೆಂಗಳೂರು ಘಟಕದ ಅಧ್ಯಕ್ಷ ಭಾಸ್ಕರ್‌ ಟಿ. ನಾಗೇಂದ್ರಪ್ಪ ಅಭಿಪ್ರಾಯಪಡುತ್ತಾರೆ. ಕೆಂಗೇರಿ ಬಲಭಾಗ, ಆರ್‌.ಆರ್‌. ನಗರದ ಆಲದಮರ ರಸ್ತೆ ಬಳಿ ಹತ್ತಾರು ಕೈಗಾರಿಕೆಗಳಿವೆ. ಅಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರೆಲ್ಲರಿಗೂ ಸುರಕ್ಷಿತ ಸಾರಿಗೆ ಸೇವೆ ದೊರೆಯುತ್ತದೆ. ಸಮಯವೂ ಉಳಿತಾಯ ಆಗುತ್ತದೆ. ಅದೇ ರೀತಿ,ಕೈಗಾರಿಕೆಗಳಿಗೆ ಬಂದುಹೋಗುವ ಗ್ರಾಹಕರು, ಮೆಟ್ರೋ ಮಾರ್ಗ ಬಂದಿರುವುದರಿಂದ ಮತ್ತಷ್ಟು ಕೈಗಾರಿಕೆ ಗಳು ಅಲ್ಲಿ ಬರಲು ಅನುಕೂಲ ಆಗಲಿದೆ. ಇದೆಲ್ಲವೂಕೈಗಾರಿಕೆ ಬೆಳವಣಿಗೆಗೆ ಪೂರಕ ಎಂದುಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಪೆರಿಕಲ್‌ ಸುಂದರ್‌ ತಿಳಿಸುತ್ತಾರೆ. ಅಲ್ಲದೆ, ಮೆಟ್ರೋ ಕಾರಿಡಾರ್‌ಗಳು ಟ್ರಾನ್ಸಿಟ್‌ ಓರಿಯಂಟೆಡ್‌ ಡೆವಲಪ್‌ಮೆಂಟ್‌ (ಟಿಒಡಿ) ನೀತಿ ಅಡಿ ಬರುವುದರಿಂದ ಆಸುಪಾಸು ಇರುವ ಕಟ್ಟಡಗಳ ಫ್ಲೋರ್‌ ಏರಿಯಾ ರೇಷಿಯೋ ಹೆಚ್ಚಳಕ್ಕೂ ಉತ್ತೇಜನ ಸಿಗಲಿದೆ.

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.