ರಾಜಧಾನಿಯಲ್ಲಿ ಸಾಧಾರಣ ಮಳೆ
Team Udayavani, Oct 21, 2019, 3:00 AM IST
ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಹಿಂಗಾರು ಚುರುಕುಗೊಂಡಿರುವುದರಿಂದ ನಗರದ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿಯ ಸಿಬ್ಬಂದಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಳೆ?: ಎಚ್ಎಎಲ್ 18 ಮಿ.ಮೀ,ಶ್ರೀಕಂಠಪುರ 4 ಮಿ.ಮೀ, ಚಿಕ್ಕಬಿದರಕಲ್ಲು 3 ಮಿ.ಮೀ, ಕೆ.ಆರ್ಪುರ 8 ಮಿ.ಮೀ, ಬಾಗಲೂರು 5 ಮಿ.ಮೀ, ರಾಜನಕುಂಟೆ 3 ಮಿ.ಮೀ, ಜಾಲ 6 ಮಿ.ಮೀ, ಯಶವಂತಪುರ 4 ಮಿ.ಮೀ, ಮಾದನಾಯಕನ ಹಳ್ಳಿ 3 ಮಿ.ಮೀ, ಬಸವೇಶ್ವರ ನಗರ 3 ಮಿ.ಮೀ, ಗಾಳೀಆಂಜನೇಯ ಸ್ವಾಮಿ ದೇವಸ್ಥಾನ 7 ಮಿ.ಮೀ, ಜ್ಞಾನಭಾರತಿ 4 ಮಿ.ಮೀ, ನಾಗರಬಾವಿ 3 ಮಿ.ಮೀ, ಚಾಮರಾಜಪೇಟೆ 7 ಮಿ.ಮೀ, ಅಗ್ರಹಾರ ಮತ್ತು ದಾಸರಹಳ್ಳಿ 5 ಮಿ.ಮೀ, ಬೇಗೂರು 6 ಮಿ.ಮೀ, ಕೆಂಗೇರಿ 5 ಮಿ.ಮೀ, ರಾಜರಾಜೇಶ್ವರಿ ನಗರ 2 ಮಿ.ಮೀ, ಆವಲಹಳ್ಳಿ 5 ಮಿ.ಮೀ, ಬಾಣಸವಾಡಿ 3 ಮಿ.ಮೀ, ಸಂಪಂಗಿ ರಾಮನಗರ 8 ಮಿ.ಮೀ, ರಾಮಮೂರ್ತಿನಗರ 9 ಮಿ.ಮೀ, ಕಣ್ಣೂರು 8 ಮಿ.ಮೀ, ಮಂಡೂರು 10 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.
ಭಾರೀ ಮಳೆ ಸಾಧ್ಯತೆ: ರಾಜ್ಯಾದ್ಯಂತ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರಾಜ್ಯದ 30 ಜಿಲ್ಲೆಗಳಿಗೂ ಭಾರತೀಯ ಹವಾಮಾನ ಇಲಾಖೆ “ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್