ಶೇ.60 ಭಾರತೀಯರಿಗೆ ಸಾಂದರ್ಭಿಕ ನಿದ್ರಾಹೀನತೆ


Team Udayavani, Mar 26, 2023, 2:02 PM IST

tdy-10

ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ನಿದ್ರೆ ಅತ್ಯಗತ್ಯವಾದರೂ, ದೇಶದಲ್ಲಿ ಲಕ್ಷಾಂತರ ಜನ ಉತ್ತಮ ನಿದ್ದೆಯಿಂದ ವಂಚಿತರಾಗಿದ್ದಾರೆ.

ಒಬ್ಬ ವ್ಯಕ್ತಿ ತನ್ನ ಜೀವನದ ಸರಾಸರಿ ಅವಧಿಯಲ್ಲಿ 26 ವರ್ಷ(ಮೂರನೇ ಒಂದು ಭಾಗ)ಗಳನ್ನು ನಿದ್ರೆ ಯಲ್ಲಿ ಕಳೆಯುತ್ತಾನೆ. ನಿದ್ರೆಯಿಂದ ವಿಶ್ರಾಂತಿ ಪಡೆ ಯುವುದರೊಂದಿಗೆ ದೇಹವು ಸಮತೋಲನ ಹೊಂದುತ್ತದೆ. ಆದರೆ, ಬಹುತೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವುದನ್ನು ಕಂಡು ವೈಜ್ಞಾನಿಕವಾಗಿ ನಿದ್ರೆ ಮತ್ತು ನಿದ್ರಾಹೀನತೆಯ ಪ್ರಾಮುಖ್ಯಯನ್ನು ಸಾರ್ವಜನಿಕರಲ್ಲಿ ಅರಿವು ಮೂಡಿ ಸುವ ಉದ್ದೇಶದಿಂದ ವಿಶ್ವ ನಿದ್ರಾ ಸೊಸೈಟಿಯ ವಿಶ್ವ ನಿದ್ರಾ ದಿನ ಸಮಿತಿಯು 2008 ರಿಂದ ಮಾ.17ರಂದು “ವಿಶ್ವ ನಿದ್ರಾ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಪಿ ಮತ್ತು ಜಿ ಸಹಯೋಗದಲ್ಲಿ ಕಾಂತರ್‌ ನಡೆಸಿದ “ಝ್ಕ್ವಿಟ್‌ ಇಂಡಿಯಾ ನ್ಯಾಷನಲ್‌ ಸ್ಲಿàಪ್‌ ಸಮೀಕ್ಷೆ’ ಪ್ರಕಾರ ಶೇ.60ರಷ್ಟು ಭಾರತೀಯರು ಸಾಂದರ್ಭಿಕ ನಿದ್ರಾಹೀನತೆಯನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗವಾಗಿದೆ. ವಿಶ್ವ ನಿದ್ರಾ ದಿನವು ನಿದ್ರೆ, ನಿದ್ರೆ ಔಷಧ, ನಿದ್ರೆಯ ಬಗ್ಗೆ ಶಿಕ್ಷಣ ಮತ್ತು ದೈನಂದಿನ ಜೀವನದಲ್ಲಿ ನಿದ್ರೆಯ ಅಭಾವವು ಉಂಟುಮಾಡುವ ಸಾಮಾಜಿಕ ಪರಿಣಾಮಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿದ್ದು, ನಿದ್ರೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ ಎಂದು ವೈದ್ಯಕೀಯ ಮತ್ತು ತಾಂತ್ರಿಕತೆಗಳ ಸಮೂಹ ವಿಜ್ಞಾನಿ ಡಾ. ಯಾಂಗ್‌ ಚಿಯಾತ್‌ ವಾಂಗ್‌ ತಿಳಿಸುತ್ತಾರೆ.

ಪ್ರತಿಯೊಬ್ಬರೂ ದಿನ ರಾತ್ರಿ ಕಡ್ಡಾಯವಾಗಿ 7ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ, ತೂಕ ಹೆಚ್ಚಾಗುವುದು ಕಡಿಮೆಯಾಗುವುದರೊಂದಿಗೆ ನಾನಾ ರೀತಿಯ ಸಣ್ಣ ಕಾಯಿಲೆಗಳಿಗೆ ನಿದ್ರೆಯೇ ಉತ್ತಮ ಔಷಧಿ. ಕತ್ತಲಲ್ಲಿ ಪ್ರತಿಯೊಬ್ಬರ ಮೆದುಳಿನಲ್ಲಿ ಮೆಲೋಟನಿನ್‌ ಎಂಬ ರಸಾಯನಿಕ ಉತ್ಪತ್ತಿಯಿಂದ ನಿದ್ರೆಗೆ ಜರುಗುತ್ತಾರೆ. ಆದರೆ, ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಟಿವಿಗಳಂತಹ ಉಪಕರಣಗಳಿಂದ ಹೊರಸೂಸುವ ಬ್ಲೂಲೈಟ್‌ನಿಂದಾಗಿ ಮೆಲೋಟನಿನ್‌ ಉತ್ಪತ್ತಿಯು ತಡವಾಗುತ್ತದೆ. ಆಗ ನಿದ್ರೆಗೆ ಪ್ರಚೋದನೆ ಬದಲಾಗುವುದರಿಂದ ಮಲಗುವುದು ತಡವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಭೌತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕ್ಷೀಣಿಸಿದ್ದು, ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಆಡುವ ಆನ್‌ಲೈನ್‌ ಗೇಮಿಂಗ್‌, ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುವುದರಿಂದ ಮಾನಸಿಕ ಚಂಚಲನ ಅಧಿಕವಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ನಿದ್ರೆಗೆ ಭಂಗವಾಗುತ್ತದೆ ಎಂದು ನಿಮ್ಹಾನ್ಸ್‌ ಹೆಚ್ಚುವರಿ ಉಪನ್ಯಾಸಕ ಡಾ.ರೂಪೇಶ್‌ ತಿಳಿಸುತ್ತಾರೆ.

ಉತ್ತಮ ನಿದ್ದೆ ಮಾಡಲು ಸಲಹೆಗಳು :

 ನಿಯಮಿತ ನಿದ್ರೆಯ ಸಮಯಚಕ್ರವನ್ನು ಇಟ್ಟುಕೊಂಡು, ವಾರಾಂತ್ಯ ಸೇರಿದಂತೆ ಎಲ್ಲಾ ದಿನಗಳಲ್ಲಿಯೂ ಅದನ್ನು ಅನುಸರಿಸಬೇಕು.

 ಮಲಗುವ ಮುನ್ನ ಎಲೆಕ್ಟ್ರಾನಿಕ್‌ ಸಾಧನಗಳ ಬಳಕೆ ನಿಲ್ಲಿಸಿ ಮತ್ತು ಮೊಬೈಲ್‌ ಸೈಲೆಂಟ್‌ ಮಾಡಬೇಕು.  ರಾತ್ರಿ ವೇಳೆ ಕೆಫಿನ್‌ ಸೇವನೆ ಮಿತಗೊಳಿಸಿ.

 ವಿಟಮಿನ್‌ ಬಿ 6 ಹೊಂದಿರುವ ಪೂರಕಗಳು ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ ಮತ್ತು ನಿದ್ರಿಸಲು ಸಹಾಯ ಮಾಡುತ್ತದೆ.

 ನಿಗದಿತ ಸಮಯ, ನಿರಂತರತೆ ಮತ್ತು ಆಳವಾದ ನಿದ್ರೆ ಅಭ್ಯಾಸ ಮಾಡಿಕೊಳ್ಳಿ.

 ಮಲಗುವ ಮುನ್ನ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ.

ಶಾಲಾವಧಿ ಕಡಿತದಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ : ಅಮೆರಿಕನ್‌ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ ನಡೆಸಿದ ಸಮೀಕ್ಷೆ ಪ್ರಕಾರ ಬೆಳಗ್ಗೆ ಒಂದು ಗಂಟೆ ತಡವಾಗಿ ಶಾಲಾ ತರಗತಿಗಳನ್ನು ಪ್ರಾರಂಭಿಸಿದ್ದರಿಂದ, ಮಕ್ಕಳು ಪರೀಕ್ಷೆಯಲ್ಲಿ ಶೇ.15ರಷ್ಟು ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ವರದಿಯಾಗಿದೆ.

ನಿದ್ರೆಯು ನಮ್ಮ ದೇಹ ಮತ್ತು ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದು, ಬಹುತೇಕರು ಇಂದಿನ ಕಳಪೆ ಜೀವನ ಶೈಲಿ, ಮಾನಸಿಕ ಒತ್ತಡವೇ ನಿದ್ರಾಹೀನತೆಗೆ ಪ್ರಮುಖ ಕಾರಣಗಳು. ಆದ್ದರಿಂದ ಉತ್ತಮ ಆಹಾರ ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಅನಗತ್ಯ ವಿಚಾರಗಳಿಂದ ದೂರವಿರಬೇಕು. – ಡಾ. ವಸುನೇತ್ರ ಕಾಸರಗೋಡು, ಮಣಿಪಾಲ್‌ ಆಸ್ಪತ್ರೆಯ ಪಲ್ಮನಾಲಜಿ ಸಮಾಲೋಚಕರು

ಟಾಪ್ ನ್ಯೂಸ್

1-sadsad

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

rishi in telugu web series

ವೆಬ್ ಸಿರೀಸ್ ನತ್ತ ರಿಷಿ: ತೆಲುಗಿನ ‘ಶೈತಾನ್’ನಲ್ಲಿ ನಟನೆ

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು!

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು

2-

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health: ಆರೋಗ್ಯಯುತ ಪಿತ್ತಕೋಶಕ್ಕೆ ಆರೋಗ್ಯಕರ ಜೀವನ ಶೈಲಿ..ಪಿತ್ತಕೋಶದ ಸಾಮಾನ್ಯ ಕಾಯಿಲೆ

Health: ಆರೋಗ್ಯಯುತ ಪಿತ್ತಕೋಶಕ್ಕೆ ಆರೋಗ್ಯಕರ ಜೀವನ ಶೈಲಿ..ಪಿತ್ತಕೋಶದ ಸಾಮಾನ್ಯ ಕಾಯಿಲೆ

TDY-18

ಮುಟ್ಟಿನ ಕಪ್‌ ಬಳಕೆ ಸುಲಭ, ಕಿರಿಕಿರಿಯೂ ಇಲ್ಲ

Health Tips: ಕಣ್ಣಿನ ಊತ ಕಡಿಮೆ ಮಾಡಿಕೊಳ್ಳುವುದು ಹೇಗೆ ?

Health Tips: ಕಣ್ಣಿನ ಊತ ಕಡಿಮೆ ಮಾಡಿಕೊಳ್ಳುವುದು ಹೇಗೆ ?

Insomnia Disorder: ನಿದ್ರಾಹೀನತೆಗೆ ಕಾರಣಗಳೇನು…ಚಿಕಿತ್ಸಾ ವಿಧಾನಗಳೇನು?

Insomnia Disorder: ನಿದ್ರಾಹೀನತೆಗೆ ಕಾರಣಗಳೇನು…ಚಿಕಿತ್ಸಾ ವಿಧಾನಗಳೇನು?

Covid test

WHOನಿಂದ ಕೋವಿಡ್-19 ಡೌನ್‌ಗ್ರೇಡ್‌; ಇನ್ನು ಮುಂದೆ ತುರ್ತುಸ್ಥಿತಿಯಿಲ್ಲ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

1-sadsad

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

ಮಕ್ಕಳಿದ್ದರೂ ಶಿಕ್ಷಕರಿಲ್ಲ, ಮುಚ್ಚುವ ಸ್ಥಿತಿಯಲ್ಲಿ 15 ಶಾಲೆಗಳು

ಮಕ್ಕಳಿದ್ದರೂ ಶಿಕ್ಷಕರಿಲ್ಲ, ಮುಚ್ಚುವ ಸ್ಥಿತಿಯಲ್ಲಿ 15 ಶಾಲೆಗಳು

rishi in telugu web series

ವೆಬ್ ಸಿರೀಸ್ ನತ್ತ ರಿಷಿ: ತೆಲುಗಿನ ‘ಶೈತಾನ್’ನಲ್ಲಿ ನಟನೆ

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು!

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು