PARIHAR: ಪರಿಹಾರ್‌ನಲ್ಲಿ ಕೌಟುಂಬಿಕ ಕಲಹಗಳಿಗೆ ನೆರವು


Team Udayavani, May 15, 2023, 12:22 PM IST

tdy-5

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಾನಸಿಕ ಕಿರುಕುಳ, ಮದ್ಯ ಸೇವನೆ, ಹೊಂದಾಣಿಕೆ ಇಲ್ಲದೇ ಗಂಡ ಮತ್ತು ಹೆಂಡತಿ ಬೇರ್ಪಟ್ಟಿರುವ ಪ್ರಕರಣಗಳೇ ಅಧಿಕ.

ಕೌಟುಂಬಿಕ ಕಲಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷದಿಂದ(ಏಪ್ರಿಲ್‌ 2022- ಮಾರ್ಚ್‌ 2023) ಸುಮಾರು 1469 ಪ್ರಕರಣಗಳು ಪರಿಹಾರ ಕೇಂದ್ರದಲ್ಲಿ ದಾಖಲಾಗಿವೆ.  ಇದರಲ್ಲಿ 45 ವಿವಾಹ ಪೂರ್ವ ಸಮಸ್ಯೆಗಳ ಪ್ರಕರಣಗಳು, ಲೀವ್‌-ಇನ್‌ ಸಂಬಂಧ ಪ್ರಕರಣಗಳು, 594 ಕೌಟುಂಬಿಕ ಕಲಹ, 436 ಹೊಂದಾಣಿಕೆ ಇಲ್ಲದೇ ಬೇರ್ಪಟ್ಟ ಪ್ರಕರಣಗಳು, 180 ವಿವಾಹೇತರ ಸಂಬಂಧ, 69 ವರದಕ್ಷಿಣೆ ಕಿರುಕುಳ, 109 ಮಾದಕ ವಸ್ತುವಿನಿಂದ ಹಾಗೂ ಮಾನಸಿಕ ಹಿಂಸೆಯ ಪ್ರಕರಣಗಳು ಮತ್ತು 28 ಇನ್ನಿತರೆ ಪ್ರಕರಣಗಳು “ಪರಿಹಾರ’ ಕೇಂದ್ರದಲ್ಲಿ ದಾಖಲಾಗಿರುವುದು ವರದಿಯಲ್ಲಿ ಕಂಡು ಬಂದಿದೆ.

“ಪರಿಹಾರ್‌’ನಲ್ಲಿ ದಾಖಲಾಗಿರುವ ಹೆಚ್ಚು ಪ್ರಕರಣಗಳಲ್ಲಿ ಒಬ್ಬರಿಗೊಬ್ಬರು ಅಥೆìçಸಿಕೊಳ್ಳದೇ ಇರುವುದು, ಮದ್ಯಸೇವಿಸಿ ಹೆಂಡತಿ-ಮಕ್ಕಳನ್ನು ಹೊಡೆಯುವುದು, ಇಬ್ಬರಲ್ಲೂ ನಂಬಿಕೆ ಇಲ್ಲದಿರು ವುದು, ಸ್ವಾರ್ಥತೆಯುಳ್ಳ ಪ್ರಕರಣಗಳೇ ಅಧಿಕ. ಇಂತಹ ವೇಳೆ ಇಬ್ಬರಲ್ಲೂ ಹೊಂದಾಣಿಕೆ ಮೂಡಲು, ಇಗೋವನ್ನು ಕಡಿಮೆ ಮಾಡಲು ವನಿತಾ ಸಹಾಯ ವಾಣಿಯಿಂದ ನಾನಾ ರೀತಿಯ ಥೆರಪಿಗಳನ್ನು ನಡೆಸಲಾಗುತ್ತದೆ. ಆದರೂ ಕೆಲವೊಮ್ಮೆ ಪ್ರಯತ್ನಗಳು ವಿಫ‌ಲಾಗುತ್ತವೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಗಂಡ, ಹೆಂಡತಿಗೆ ಷರತ್ತುಗಳನ್ನು ವಿಧಿಸಲಾಗುತ್ತದೆ. ಈ ಷರತ್ತುಗಳಿಗೆ ಹೆಂಡತಿ ಒಪ್ಪದ್ದಿದ್ದಾಗ, ಅವರಿಬ್ಬರನ್ನೂ ಕೂಡಿಸಲು ಸಾಧ್ಯವಾಗುವುದಿಲ್ಲ. ಈ ರೀತಿ ಪ್ರಕರಣಗಳೂ ಸಾಕಷ್ಟಿವೆ. ಈ ಎಲ್ಲವುಗಳ ಮಧ್ಯೆಯೂ ಪರಿಹಾರ್‌-ವನಿತಾ ಸಹಾಯವಾಣಿ ಬಹುತೇಕ ಜೋಡಿಗಳನ್ನು ಒಂದುಮಾಡುವಲ್ಲಿ ಯಶ ಕಂಡಿದೆ.

ಪರಿಹಾರ್‌ ಎಂಬ ಬಾಳ ದಾರಿ: ನಗರ ವಾಸಿಯಾದ ಹರೀಶ್‌(ಹೆಸರು ಬದಲಿಸಿದೆ) ಅವರು ಚಿಕ್ಕವಯಸ್ಸಿ ನಿಂದ ಅಜ್ಜ-ಅಜ್ಜಿ ಮನೆಯಲ್ಲಿ ಬೆಳೆದರು. ಬಾಲ್ಯ ದಿಂದಲೇ ಶ್ರೀಮಂತಿಕೆ ಕಂಡಿದ್ದ ಹರೀಶ್‌ 3ನೇ ತರಗತಿ ಯಲ್ಲಿರುವಾಗಲೇ ಕ್ರಿಕೆಟ್‌ ಬೆಟ್ಟಿಂಗ್‌ ಗೀಳು ಅಂಟಿಸಿ ಕೊಂಡರು. ಮುಂದೆ ಎಂಜಿನಿಯರಿಂಗ್‌ ಕೋರ್ಸ್‌ನ ಶುಲ್ಕವನ್ನು ಇದೇ ಕ್ರಿಕೆಟ್‌ ಬೆಟ್ಟಿಂಗ್‌ನಿಂದ ನಿಭಾಯಿಸಿದರು. ಫೇಲ್‌ ಆಗಿದ್ದರೂ ಮರುಪರೀಕ್ಷೆಯಲ್ಲಿ ಪಾಸ್‌ ಆದ ಹರೀಶ್‌ ಪ್ರತಿಷ್ಠಿತ ಕಂಪೆನಿ ಸೇರಿದರು.

ಈ ನಡುವೆ ಕೋವಿಡ್‌ ಪರಿಣಾಮ ವರ್ಕ್‌ ಫ್ರಂ ಹೋಮ್‌ ಸಮಯದಲ್ಲಿ ಆನ್‌ಲೈನ್‌ ಗೇಮಿಂಗ್‌ ಮತ್ತಷ್ಟು ಹೆಚ್ಚಿತು. ತಿಂಗಳಿಗೆ ಅಂದಾಜು 6ರಿಂದ 7 ಲಕ್ಷ ಸಂಪಾದಿಸುತ್ತಿದ್ದರು. ಈ ಮಧ್ಯೆ ಗ್ಯಾಮ್ಲಿಂಗ್‌ನಲ್ಲಿ ಹರೀಶ್‌ 70 ಲಕ್ಷ ರೂ. ಕಳೆದುಕೊಳ್ಳುತ್ತಾರೆ. ಅದಕ್ಕೆ ಬೇಸತ್ತ ಪತ್ನಿ ಮಕ್ಕಳ ಜತೆ ತವರು ಸೇರಿದ್ದಾಳೆ. ಇದ ರಿಂದ ಹರೀಶ್‌ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದಕ್ಕಾಗಿ ಪತ್ನಿ ಪರಿಹಾರ-ವನಿತಾ ಸಹಾಯವಾಣಿ ಮೊರೆ ಹೋಗುತ್ತಾರೆ. ಗಂಡನನ್ನು ಕರೆಸಿ ಆಪ್ತಸಮಾ ಲೋಚನೆ ನಡೆಸಿದ್ದು, ವಿವಿಧ ಥೆರಪಿಗಳನ್ನು ಸೂಚಿಸ ಲಾಯಿತು. 6 ತಿಂಗಳ ಬಳಿಕ ಹರೀಶ್‌ಗೆ ತನ್ನ ತಪ್ಪಿನ ಅರಿವಾಗಿ ಗೀಳಿನಿಂದ ಹೊರ ಬಂದು ಒಂದಾಗಿದ್ದಾರೆ.

ಕೌಟುಂಬಿಕ ದೌರ್ಜನ್ಯ, ಮಾನಸಿಕ ಕಿರುಕುಳ, ಮದ್ಯ ಸೇವನೆಯ ಪ್ರಕರಣಗಳು ಹೆಚ್ಚಾಗಿ ಬರುತ್ತವೆ. ಆಪ್ತಸಮಾಲೋಚನೆ ವೇಳೆ ಇಬ್ಬರ ಸಮಸ್ಯೆಗಳನ್ನು ಗಮನವಿಟ್ಟು ಆಲಿಸಿ, ತಾಳ್ಮೆಯಿಂದ ಪರಿಹಾರ ನೀಡಲಾಗುತ್ತದೆ. ಕೆಲವೊಂದು ಪ್ರಕರಣ ತುಂಬಾ ಸವಾಲು ಆಗಿರುತ್ತವೆ. 30 ವರ್ಷಗಳ ಅನುಭವದಲ್ಲಿ ದೂರವಾಗಿದ್ದ ದಂಪತಿಗಳನ್ನು ಒಂದು ಮಾಡಿದ ಪ್ರಕರಣಗಳೇ ಹೆಚ್ಚು. ಇದರಿಂದ ನನಗೆ ಸಂತಸ ತಂದಿದೆ. -ರಾಣಿಶೆಟ್ಟಿ, ಪರಿಹಾರ್‌-ವನಿತಾ ಸಹಾಯವಾಣಿ ಮುಖ್ಯಸ್ಥೆ

-ಭಾರತಿ ಸಜ್ಜನ್‌

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.