ಪೊಲೀಸರ ಸೋಗಿನಲ್ಲಿ ವ್ಯಾಪಾರಿ ಅಡ್ಡಗಟ್ಟಿ 10 ಲಕ್ಷ ರೂ. ದರೋಡೆ


Team Udayavani, Jan 16, 2023, 10:14 AM IST

tdy-5

ಬೆಂಗಳೂರು: ಚಾಮರಾಜಪೇಟೆಯಲ್ಲಿ ಸಿಸಿಬಿ ಪೊಲೀಸರ ಸೋಗಿನಲ್ಲಿ ವ್ಯಾಪಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಲ್ಲೆ ನಡೆಸಿ 10 ಲಕ್ಷ ರೂ. ಲಪಟಾಯಿಸಿದ್ದಾರೆ.

ಉತ್ತರ ಭಾರತ ಮೂಲದ ಕಾಟನ್‌ಪೇಟೆಯ ನಿವಾಸಿ ಮುಲರಾಮ್‌ (37) ದರೋಡೆಗೊಳಗಾದವರು.

ಮುಲರಾಮ್‌ ಮನವರ್ತಪೇಟೆ ಬಳಿ ಶೂ ಅಂಗಡಿ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಬಟ್ಟೆ ವ್ಯಾಪಾರಿ ರಮೇಶ್‌ ಅವ ರು ಮುಲರಾಮ್‌ ಹಾಗೂ ಉತ್ತರ ಭಾರತದ ಕೆಲವರಿಗೆ ಉದ್ಯಮ ನಡೆಸಲು ಹಣ ಕೊಡುತ್ತಿದ್ದರು. ತಾವು ಕೆಲ ವ್ಯಾಪಾರಿಗಳಿಗೆ ಕೊಟ್ಟ ಹಣವನ್ನು ಸಂಗ್ರಹಿಸಿಕೊಂಡು ತರುವಂತೆ ಜ.13ರಂದು ಮುಲರಾಮ್‌ಗೆ ರಮೇಶ್‌ ಹೇಳಿದ್ದರು. ಅದರಂತೆ ಮುಲರಾಮ್‌ ಅದೇ ದಿನ ಸಂಜೆ ಕೆಲ ವ್ಯಾಪಾರಿಗಳಿಂದ 10 ಲಕ್ಷ ರೂ.ನ್ನು ಸಂಗ್ರಹಿಸಿಕೊಂಡು ಬ್ಯಾಗ್‌ನಲ್ಲಿ ತುಂಬಿ ಸೆಟಲೈಟ್‌ ಬಸ್‌ ನಿಲ್ದಾಣದ ಬಳಿಯಿರುವ ರಮೇಶ್‌ ಅವರಿಗೆ ಕೊಡಲು ಬೈಕ್‌ನಲ್ಲಿ ಬರುತ್ತಿದ್ದರು. ರಾತ್ರಿ 7.45ರ ಸುಮಾರಿಗೆ ಸಿರ್ಸಿ ವೃತ್ತದಿಂದ ಕೊಂಚ ಮುಂದೆ ಸಾಗುತ್ತಿದ್ದಂತೆ ಎರಡು ಬೈಕ್‌ನಲ್ಲಿ ಮುಲರಾಮ್‌ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ಅಪರಿಚಿತರು ನಾವು ಸಿಸಿಬಿ ಪೊಲೀಸರು ಗಾಡಿ ನಿಲ್ಲಿಸಿ ಎಂದು ಸೂಚಿಸಿದ್ದರು.

ಪೊಲೀಸರು ಇರಬಹುದು ಎಂದು ಭಾವಿಸಿದ ಮುಲರಾಮ್‌ ಬೈಕ್‌ ಅನ್ನು ರಸ್ತೆ ಬದಿ ನಿಲುಗಡೆ ಮಾಡಿದ್ದರು. ಆ ವೇಳೆ ನಾಲ್ವರ ಪೈಕಿ ಇಬ್ಬರು ಮುಲರಾಮ್‌ನನ್ನು ಹಿಡಿದುಕೊಂಡರೆ, ಮತ್ತಿಬ್ಬರು 10 ಲಕ್ಷ ರೂ.ಯಿದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದರು. ಮುಲರಾಮ್‌ ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರೆ ತಮ್ಮ ಸುಳಿವು ಸಿಗಬಹುದು ಎಂಬ ಕಾರಣಕ್ಕೆ ದುಷ್ಕರ್ಮಿಗಳು ಬ್ಲೇಡ್‌ನಿಂದ ಅವರ ಕೈ ಬೆರಳುಗಳಿಗೆ ಗಾಯಗೊಳಿಸಿದ್ದರು. ಹೀಗಾಗಿ ಮುಲರಾಮ್‌ ಪ್ರಕರಣ ನಡೆದ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ.

ತಮ್ಮ ಮುಖಚಹರೆ ಕಾಣದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆರೋಪಿಗಳು ಹೆಲ್ಮೆಟ್‌ ಧರಿಸಿಕೊಂಡು ದ್ವಇಚಕ್ರವಾಹನದಲ್ಲಿ ಬಂದಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ಆರೋಪಿಗಳಿಗೆ ಶೋಧ ಮುಂದುವರಿಸಿದ್ದಾರೆ

ಟಾಪ್ ನ್ಯೂಸ್

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?

police siren

ಹೊಟೇಲ್‌ ಮಾಲಕನ ಶವವನ್ನು ಬ್ಯಾಗ್‌ನಲ್ಲಿ ಸಾಗಿಸಿದ ಪ್ರಕರಣ: ಯುವತಿ ಸಹಿತ ನಾಲ್ವರು ವಶಕ್ಕೆ

bill gates

ಹಳೆ ಪ್ರೇಮ ಪ್ರಕರಣದಿಂದ Bill Gates ಗೆ ಸಂಕಷ್ಟ!

congress flag

Karnataka: ಸಾಮಾಜಿಕ ಸಮಾನತೆ, ಪ್ರಾದೇಶಿಕ ಅಸಮಾನತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೆಟ್ರೋ-ಕ್ಯೂಆರ್‌ ಕೋಡ್‌ ಬಳಕೆದಾರರು ಹೆಚ್ಚಳ

ಮೆಟ್ರೋ-ಕ್ಯೂಆರ್‌ ಕೋಡ್‌ ಬಳಕೆದಾರರು ಹೆಚ್ಚಳ

ಪದೇ ಪದೆ ಗುಂಡಿ ಸೃಷ್ಟಿಸುವ ಕಳಪೆ ಕಾಮಗಾರಿ

ಪದೇ ಪದೆ ಗುಂಡಿ ಸೃಷ್ಟಿಸುವ ಕಳಪೆ ಕಾಮಗಾರಿ

tdy-5

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಗೆ ವಂಚನೆ, ಲೈಂಗಿಕ ದೌರ್ಜನ್ಯ 

ಜೈಲಿನಿಂದ ಹೊರ ಬಂದವ ಸ್ನೇಹಿತರಿಂದ ಹೆಣವಾದ!

ಜೈಲಿನಿಂದ ಹೊರ ಬಂದವ ಸ್ನೇಹಿತರಿಂದ ಹೆಣವಾದ!

ಮನೆ ಒಡತಿ ತಲೆಗೆ ಕಟ್ಟಿಗೆಯಿಂದ ಹೊಡೆದು ಚಿನ್ನ ದೋಚಿದ ಕಳ್ಳಿ!

ಮನೆ ಒಡತಿ ತಲೆಗೆ ಕಟ್ಟಿಗೆಯಿಂದ ಹೊಡೆದು ಚಿನ್ನ ದೋಚಿದ ಕಳ್ಳಿ!

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?

police siren

ಹೊಟೇಲ್‌ ಮಾಲಕನ ಶವವನ್ನು ಬ್ಯಾಗ್‌ನಲ್ಲಿ ಸಾಗಿಸಿದ ಪ್ರಕರಣ: ಯುವತಿ ಸಹಿತ ನಾಲ್ವರು ವಶಕ್ಕೆ