ಅನ್ಯ ಪಕ್ಷಗಳ ಪ್ರಭಾವಿಗಳಿಗೂ ಜೆಡಿಎಸ್‌ ಗಾಳ


Team Udayavani, Feb 16, 2017, 3:45 AM IST

JDS.jpg

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕೆಂದು ಹಠಕ್ಕೆ ಬಿದ್ದಿರುವ ಜೆಡಿಎಸ್‌, ಸ್ವಂತ ಶಕ್ತಿ ಮೇಲೆ ಗೆಲುವು ಸಾಧಿಸುವ ಪ್ರಭಾವಿ ಮುಖಂಡರನ್ನು ಸೆಳೆಯಲು ಮುಂದಾಗಿದ್ದು, ಕಾಂಗ್ರೆಸ್‌ಗೆ ತ್ಯಜಿಸಿರುವ ಎಸ್‌.ಎಂ.ಕೃಷ್ಣ ಬೆಂಬಲಿಗರು ಸೇರಿದಂತೆ ಹಲವಾರು ಪ್ರಮುಖ ನಾಯಕರ ಜತೆ ಮಾತುಕತೆ ಆರಂಭಿಸಿದೆ.

ಎಸ್‌.ಎಂ.ಕೃಷ್ಣ ಅವರ ಪ್ರಬಲ ಅನುಯಾಯಿ ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ, ಮಾಜಿ ಕೇಂದ್ರ ಸಚಿವ ಜಾಲಪ್ಪ ಅವರ ಪುತ್ರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಮಾಜಿ ಸಚಿವ ಚೆನ್ನಪಟ್ಟಣದ ಸಿ.ಪಿ.ಯೋಗೇಶ್ವರ್‌ ಅವರ ಜೆಡಿಎಸ್‌ ಸೇರ್ಪಡೆ ಸಂಬಂಧ ಮಾತುಕತೆ ನಡೆದಿದೆ. ಮುಳಬಾಗಿಲು ಹಾಲಿ ಶಾಸಕ ಕೊತ್ತೂರು ಮಂಜುನಾಥ್‌ ಜೆಡಿಎಸ್‌ ಸೇರ್ಪಡೆಗೆ ಒಲವು ಹೊಂದ್ದಿದ್ದಾರೆ ಎಂದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ಮುಖಂಡರು ಸಹ ಜೆಡಿಎಸ್‌ಗೆ ಸೇರಲು ಆಸಕ್ತಿಯನ್ನು ತೋರಿದ್ದು, ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ, ಮಂಗಳವಾರ ನಡೆದ ಕೋರ್‌ ಕಮಿಟಿ ಸಭೆಯಲ್ಲಿ 75 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳಿಸಿದೆ.ಈ ಮಾಸಾಂತ್ಯಕ್ಕೆ ಇನ್ನೂ 25 ಕ್ಷೇತ್ರಗಳಿಗೆ ಅಭ್ಯಥಿಗಳನ್ನು ಅಂತಿಮಗೊಳಿಸಿ ಮೊದಲ ಹಂತದಲ್ಲಿ ಕನಿಷ್ಠ 100 ಕ್ಷೇತ್ರಗಳ ಪಟ್ಟಿ ಮೊದಲ ಹಂತದಲ್ಲಿ ಬೃಹತ್‌ ಸಮಾವೇಶ ನಡೆಸಿ ಘೋಷಿಸುವ ತೀರ್ಮಾನಕ್ಕೆ ಬಂದಿದೆ.

ಮೊದಲ ಹಂತದಲ್ಲಿ 120 ರಿಂದ 130 ಕ್ಷೇತ್ರಗಳ ಪಟ್ಟಿ ಬಿಡುಗಡೆಗೆ ತೀರ್ಮಾನಿಸಿ ಜನವರಿಯಲ್ಲೇ 100 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತಾದರೂ ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಪ್ರಭಾವಿ ಮುಖಂಡರು ಬರುವ ಬಗ್ಗೆ ಮಾತುಕತೆ ನಡೆಸಿದ್ದು ಹಾಗೂ ಆಯ್ಕೆ ಮಾಡಲಾಗಿದ್ದ ಅಭ್ಯರ್ಥಿಗಳ ಬಗ್ಗೆ ಕಾರ್ಯಕರ್ತರು ಮತ್ತು ಮುಖಂಡರ ಒಲವು ವ್ಯಕ್ತವಾಗದ ಕಾರಣ ಇದೀಗ ಪಟ್ಟಿ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜನತಾಪರಿವಾರದ ಮೂಲದವರೇ ಆಗಿರುವ ಪಿ.ಜಿ.ಆರ್‌.ಸಿಂದ್ಯ ಅವರನ್ನು ಮನವೊಲಿಸಿ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಪ್ರಯತ್ನ ಖುದ್ದು ಎಚ್‌.ಡಿ.ದೇವೇಗೌಡರಿಂದಲೇ ಆಗುತ್ತಿದೆ ಎನ್ನಲಾಗಿದೆ. ಮತ್ತೂಂದು ಬೆಳವಣಿಗೆಯಲ್ಲಿ ಶಾಸಕ ಗೋಪಾಲಯ್ಯ ಪತ್ನಿ ಮಾಜಿ ಉಪ ಮೇಯರ್‌ ಹೇಮಲತಾ ಅವರ ಹೆಸರು ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಕೇಳಿಬರುತ್ತಿದೆ.

ರಾಜ್ಯದ 224 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ “ಗಟ್ಟಿ’ ಅಭ್ಯರ್ಥಿಗಳ ಕೊರತೆ ಇದೆ. ಆದರೆ, ಕನಿಷ್ಠ 100 ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ಇರುವವರಿಗಂತೂ ಕೊರತೆಯಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷಗಳಿಂದ ಗೆಲ್ಲುವ ಸಾಮರ್ಥ್ಯ ಇರುವವರು ಜೆಡಿಎಸ್‌ಗೆ ಬರಬಹುದು. ಹೀಗಾಗಿ, ತಕ್ಷಣಕ್ಕೆ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಚುನಾವಣಾ “ಅಖಾಡ’ಕ್ಕೆ ಇಳಿಸಿ ಮುಂದಿನ ದಿನಗಳಲ್ಲಿ ಇತರೆ ಕ್ಷೇತ್ರಗಳಲ್ಲಿ ಶಕ್ತಿವಂತ ಅಭ್ಯರ್ಥಿಗಳನ್ನು ತಲಾಷೆ ಮಾಡುವುದು ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರ “ಮಾಸ್ಟರ್‌ ಪ್ಲಾನ್‌’ ಎಂದು ಪಕ್ಷದ ನಾಯಕರೊಬ್ಬರು ತಿಳಿಸುತ್ತಾರೆ.

ಈಗಾಗಲೇ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಮೇಲೆ ಅಮಾನತುಗೊಂಡ ಎಂಟು ಶಾಸಕರ ಪೈಕಿ ಮಹಾಲಕ್ಷ್ಮಿ ಲೇ ಔಟ್‌ನ ಗೋಪಾಲಯ್ಯ ಅವರ ಅಮಾನತು ರದ್ದು ಮಾಡಲಾಗಿದೆ. ಆದರೆ, ಇನ್ನೂ ಐವರು ಶಾಸಕರು ಬೇರೆ ಪಕ್ಷಗಳತ್ತ ಕಣ್ಣು ಹಾಕಿದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಾಗಿ, ಗೊಂದಲಕ್ಕೆ ಅವಕಾಶ ಇರಬಾರದು ಎಂಬ ಕಾರಣಕ್ಕೆ ಏಳು ಜನ ಹೊರತುಪಡಿಸಿ ಹಾಲಿ ಶಾಸಕರಿಗೆಲ್ಲಾ ಮೊದಲ ಪಟ್ಟಿಯಲ್ಲೇ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳುತ್ತಾರೆ.

-ಕೋರ್‌ ಕಮಿಟಿಯಲ್ಲಿ ಅಂತಿಮಗೊಂಡಿರುವ ಪಟ್ಟಿ
*ಬಸವಕಲ್ಯಾಣ- ಮಲ್ಲಿಕಾರ್ಜುನ ಖೂಬಾ
*ರಾಯಚೂರು-ಡಾ.ಶಿವರಾಜ್‌ ಪಾಟೀಲ್‌
*ಲಿಂಗಸಗೂರು-ಮಾನಪ್ಪ ವಜ್ಜಲ್‌
*ಹರಿಹರ- ಎಚ್‌.ಎಸ್‌.ಶಿವಶಂಕರ್‌
*ಶಿವಮೊಗ್ಗ ಗ್ರಾಮಾಂತರ- ಶಾರಧಾ ಪೂರ್ಯ ನಾಯಕ್‌
*ಭದ್ರಾವತಿ-ಅಪ್ಪಾಜಿ
*ಸೊರಬ-ಮಧು ಬಂಗಾರಪ್ಪ
*ಮೂಡಿಗೆರೆ- ಬಿ.ಬಿ.ನಿಂಗಯ್ಯ
*ಕಡೂರು-ವೈಎಸ್‌ವಿ ದತ್ತ
*ಚಿಕ್ಕನಾಯಕನಹಳ್ಳಿ-ಸುರೇಶ್‌ಬಾಬು
*ತುರುವೇಕೆರೆ- ಎಂ.ಟಿ.ಕೃಷ್ಣಪ್ಪ
*ಕುಣಿಗಲ್‌-ಡಿ.ನಾಗರಾಜಯ್ಯ
*ಕೊರಟಗೆರೆ-ಸುಧಾಕರ್‌ ಲಾಲ್‌
*ಗುಬ್ಬಿ-ವಾಸು
*ಪಾವಗಡ-ತಿಮ್ಮರಾಯಪ್ಪ
*ಶಿಡ್ಲಘಟ್ಟ-ರಾಜಣ್ಣ
*ಚಿಂತಾಮಣಿ-ಜಿ.ಕೆ.ಕೃಷ್ಣಾರೆಡ್ಡಿ
*ಮಾಲೂರು-ಮಂಜುನಾಥಗೌಡ
*ಮಹಾಲಕ್ಷ್ಮಿ ಲೇ ಔಟ್‌- ಗೋಪಾಲಯ್ಯ
*ದೇವನಹಳ್ಳಿ-ಪಿಳ್ಳಮುನಿಶಾಮಪ್ಪ
*ನೆಲಮಂಗಲ-ಡಾ.ಶ್ರೀನಿವಾಸಮೂರ್ತಿ
*ರಾಮನಗರ-ಎಚ್‌.ಡಿ.ಕುಮಾರಸ್ವಾಮಿ
*ಮದ್ದೂರು-ಡಿ.ಸಿ.ತಮ್ಮಣ್ಣ
*ಕೃಷ್ಣರಾಜಪೇಟೆ-ನಾರಾಯಣಗೌಡ
*ಶ್ರವಣಬೆಳಗೊಳ-ಸಿ.ಎನ್‌.ಬಾಲಕೃಷ್ಣ
*ಅರಸೀಕೆರೆ-ಶಿವಲಿಂಗೇಗೌಡ
*ಹಾಸನ-ಪ್ರಕಾಶ್‌
*ಹೊಳೇನರಸೀಪುರ-ಎಚ್‌.ಡಿ.ರೇವಣ್ಣ
*ಸಕಲೇಶಪುರ-ಎಚ್‌.ಕೆ.ಕುಮಾರಸ್ವಾಮಿ
*ಕೃಷ್ಣರಾಜನಗರ-ಸಾ.ರಾ.ಮಹೇಶ್‌
*ಹೆಗ್ಗಡದೇವನಗೋಟೆ- ಚಿಕ್ಕಮಾದು
*ಚಾಮುಂಡೇಶ್ವರಿ-ಜಿ.ಟಿ.ದೇವೇಗೌಡ
*ನವಲಗುಂದ- ಕೋನರೆಡ್ಡಿ
*ಕಾಗವಾಡ-ಶ್ರೀಮಂತ ಪಾಟೀಲ್‌
*ದೇವರಹಿಪ್ಪರಗಿ-ಎ.ಎಸ್‌.ಪಾಟೀಲ್‌ ನಡಹಳ್ಳಿ
*ಸಿಂಧಗಿ-ಎಂ.ಸಿ.ಮನಗೋಳಿ
*ಬೀದರ್‌ ದಕ್ಷಿಣ-ಬಂಡೆಪ್ಪ ಕಾಶಂಪುರ್‌
*ಶಿವಮೊಗ್ಗ-ಶ್ರೀಕಾಂತ್‌
*ಶ್ರೀಂಗೇರಿ-ಎಚ್‌.ಜಿ. ವೆಂಕಟೇಶ್‌
*ತಿಪಟೂರು-ಲೋಕೇಶ್ವರ್‌
*ತುಮಕೂರು-ಗೋವಿಂದರಾಜ್‌
*ತುಮಕೂರು ಗ್ರಾಮಾಂತರ-ಗೌರಿಶಂಕರ
*ಸಿರಾ-ಸತ್ಯನಾರಾಯಣ
*ಮಳವಳ್ಳಿ-ಡಾ.ಅನ್ನಾದಾನಿ
*ಮಂಡ್ಯ-ಎಂ.ಶ್ರೀನಿವಾಸ್‌
*ಅರಕಲಗೂಡು-ಎ.ಟಿ.ರಾಮಸ್ವಾಮಿ
*ಪಿರಿಯಾಪಟ್ಟಣ-ಮಹದೇವ್‌
*ನರಸಿಂಹರಾಜ-ಸಂದೇಶಸ್ವಾಮಿ
*ಟಿ.ನರಸೀಪುರ-ಸುಂದರೇಶನ್‌
*ಕೊಪ್ಪಳ-ಪ್ರದೀಪ್‌ಗೌಡ
*ಹುಬ್ಬಳ್ಳಿ-ಧಾರವಾಡ ಪೂರ್ವ-ಹಲ್ಕೋಡ್‌ ಹನುಮಂತಪ್ಪ
*ಸಿರಸಿ-ಶಶಿಭೂಷಣ ಹೆಗಡೆ
*ಗುರುಮಿಟ್ಕಲ್‌-ನಾಗನಗೌಡ
*ಚಿಂಚೋಳಿ-ಸುಶೀಲಾಬಾಯಿ
*ಚಾಮರಾಜ-ರಂಗಪ್ಪ
*ಹನೂರು-ಪರಿಮಳ ನಾಗಪ್ಪ
*ಮುಳಬಾಗಿಲು – ಸಿದ್ಧನಹಳ್ಳಿ ಶೇಖರ್‌/ ಆದಿನಾರಾಯಣ/ಕೋಲಾರ ಕೇಶವ
*ಬಾಗೇಪಲ್ಲಿ-ಹರಿನಾಥರೆಡ್ಡಿ
*ಚಿಕ್ಕಬಳ್ಳಾಪುರ-ಬಚ್ಚೇಗೌಡ/ಕೆ.ವಿ.ನಾಗಾರಾಜ್‌
*ಶ್ರೀನಿವಾಸಪುರ-ವೆಂಕಟಶಿವಾರೆಡ್ಡಿ
*ಕೆಜಿಎಫ್- ಭಕ್ತವತ್ಸಲಂ/ಕೆ.ವಿ.ರಾಜೇಂದ್ರನ್‌
*ಕೋಲಾರ-ಶ್ರೀನಿವಾಸಗೌಡ/ ರಾಮರಾಜು/ಮುಬಾರಕ್‌
*ಯಲಹಂಕ-ಜಿ.ಹನುಮಂತೇಗೌಡ
*ಯಶವಂತಪುರ-ಟಿ.ಎನ್‌.ಜವರಾಯಿಗೌಡ
*ಹೆಬ್ಟಾಳ-ಹನುಮಂತೇಗೌಡ
*ಬಸವನಗುಡಿ-ಬಾಗೇಗೌಡ
*ದೊಡ್ಡಬಳ್ಳಾಪುರ-ಮುನೇಗೌಡ/ ಜೆ.ನರಸಿಂಹಸ್ವಾಮಿ
*ಕನಕಪುರ-ವಿಶ್ವನಾಥ್‌/ಪಿ.ಜಿ.ಆರ್‌.ಸಿಂಧ್ಯ
*ಚನ್ನಪಟ್ಟಣ-ಅಶ್ವಥ್‌/ಲಿಂಗೇಶ್‌ಕುಮಾರ್‌/ಜಯಮುತ್ತು
*ರಾಜಾಜಿನಗರ-ಆನಂದ್‌
*ಪದ್ಮನಾಭನಗರ-ಗೋಪಾಲ್‌
*ಬೆಂಗಳೂರು ದಕ್ಷಿಣ-ಗೊಟ್ಟಿಗೆರೆ ಮಂಜು
*ಗಾಂಧಿನಗರ-ಡಿ.ಜಿ.ಚಕ್ರವರ್ತಿ ಅಲಿಯಾಸ್‌ ಸಕ್ರೆ/ಮಲ್ಲೇಶ್‌
*ರಾಜರಾಜೇಶ್ವರಿನಗರ-ಪ್ರಕಾಶ್‌/ ಹೇಮಲತಾ
*ದಾಸರಹಳ್ಳಿ-ಬೆಮೆಲ್‌ ಕಾಂತರಾಜ್‌/ಅಂದಾನಪ್ಪ/ರಂಗನಾಥ್‌

– ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.