ಜಲಮಂಡಳಿಗೆ ವರದಾನವಾದ ಮಳೆಕೊಯ್ಲು


Team Udayavani, Jul 4, 2018, 12:41 PM IST

jalamandali.jpg

ಬೆಂಗಳೂರು: ನಾಗರಿಕರು ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ನಿರಾಸಕ್ತಿ ತೋರಿರುವುದು ಬೆಂಗಳೂರು ಜಲಮಂಡಳಿಗೆ ವರದಾನವಾಗಿದ್ದು, ಪ್ರತಿ ತಿಂಗಳು ದಂಡದ ರೂಪದಲ್ಲಿ ಮಂಡಳಿಗೆ ಕೋಟ್ಯಂತರ ರೂ. ದಂಡ ಸಂಗ್ರಹವಾಗುತ್ತಿದೆ. 

ಬೃಹತ್‌ ಕಟ್ಟಡಗಳಿಗೆ ಮಳೆನೀರು ಕೊಯ್ಲು ಅಳವಡಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದರೂ, ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಕೆಗೆ ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಹಕರ ಬಿಲ್‌ ಮೇಲೆ ಇಂತಿಷ್ಟು ಪ್ರಮಾಣದ ದಂಡವನ್ನು ಪ್ರತಿ ತಿಂಗಳು ಹಾಕುತ್ತಿದ್ದು, ತಿಂಗಳಿಗೆ ದಂಡದ ರೂಪದಲ್ಲಿಯೇ ಮಂಡಳಿಗೆ 2 ಕೋಟಿ ರೂ. ಸಂದಾಯವಾಗುತ್ತಿದೆ.

ರಾಜಧಾನಿಯಲ್ಲಿ ಅಂತರ್ಜಲ ಪ್ರಮಾಣ ದಿನೇ ದಿನೆ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಬವಣೆ ಉಂಟಾಗಬಾರದೆಂಬ ಉದ್ದೇಶದಿಂದ ಮಳೆನೀರು ಕೊಯ್ಲು ಪದ್ಧತಿಯ ಕುರಿತು ಈಗಾಗಲೇ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅದರಂತೆ 2009 ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರವು 30*40 ಚ.ಅಡಿಯಲ್ಲಿ ನಿರ್ಮಾಣವಾಗುವ ಎಲ್ಲಾ ಹೊಸ ಕಟ್ಟಡಗಳು ಹಾಗೂ 60*40 ಚ.ಅಡಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಸುತ್ತಳತೆಯಲ್ಲಿ ನಿರ್ಮಾಣಗೊಂಡ ಕಟ್ಟಡಗಳಿಗೆ ಮಳೆನೀರು ಕೊಯ್ಲು ಅಳವಡಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಆ ಹಿನ್ನೆಲೆಯಲ್ಲಿ ಜಲಮಂಡಳಿಯು 2009 ರಿಂದಲೂ ಮಳೆನೀರು ಕೊಯ್ಲು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿತ್ತು. ಆನಂತರವೂ ಗ್ರಾಹಕರು ನಿಯಮ ಪಾಲಿಸದಿದ್ದಾಗ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಾಗ, ಕೆಲ ಹಳೆಯ ಕಟ್ಟಡಗಳಿಗೆ ಮಾತ್ರ ವಿನಾಯ್ತಿ ನೀಡಿ ನಿಯಮ ಬದಲಿಸಿತ್ತು. ಅದರ ನಂತರವೂ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಜಲಮಂಡಳಿಯು ದಂಡ ಪ್ರಯೋಗಕ್ಕೆ ಮುಂದಾಗಿದೆ. 

ಹೆದರಿದ ಗ್ರಾಹಕರು: ಕಾಯ್ದೆ ಜಾರಿಗೆ ಬಂದು 9 ವರ್ಷ ಕಳೆದರೂ ಹೆಚ್ಚಿನ ಜನರು ಮಳೆ ನೀರು ಸಂಗ್ರಹಿಸಿ ಬಳಸಲು ಮುಂದಾಗಿರಲಿಲ್ಲ. ಜತೆಗೆ ಮಳೆ ನೀರು ಅಂತರ್ಜಲಕ್ಕೆ ಹೋಗಲು ಇಂಗುಗುಂಡಿಗಳನ್ನು ಸಹ ನಿರ್ಮಿಸಿಲ್ಲ. ಹೀಗಾಗಿ ಜಲಮಂಡಳಿ 2017 ಫೆಬ್ರವರಿಯಲ್ಲಿ ದಂಡ ವಿಧಿಸಲು ಕ್ರಮಕೈಗೊಂಡ ಪರಿಣಾಮ, ದಂಡ ಕಟ್ಟಬೇಕೆಂದು ಹೆದರಿಸದ 56 ಸಾವಿರ ಕಟ್ಟಡ ಮಾಲೀಕರು ಒಂದು ವರ್ಷದಲ್ಲಿ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದಾರೆ. ಆದರೆ, ಇನ್ನೂ 98 ಸಾವಿರ ಕಟ್ಟಡಗಳು ಬಾಕಿಯಿದ್ದು, ಈ ಕಟ್ಟಡಗಳಿಗೆ ಪ್ರತಿ ತಿಂಗಳು ದಂಡ ಹಾಕಲಾಗುತ್ತಿದೆ.

ದಂಡ ಪ್ರಮಾಣ ಹೇಗೆ?: ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳನ್ನು ಪಟ್ಟಿ ಮಾಡಿರುವ ಜಲಮಂಡಳಿಯು ಆ ಕಟ್ಟಡಗಳ ನೀರಿನ ಶುಲ್ಕದ ಜತೆಗೆ ದಂಡವೂ ಸೇರಿ ಬರುವಂತೆ ವ್ಯವಸ್ಥೆ ಮಾಡಿದೆ. ಅದರಂತೆ ಗೃಹಬಳಕೆ ಕಟ್ಟಡಗಳಿಗೆ ಮೊದಲ ಮೂರು ತಿಂಗಳಿಗೆ ಒಟ್ಟಾರೆ ಬಿಲ್‌ನ ಶೇ 25ರಷ್ಟು ದಂಡ ಹಾಕಲಾಗಿದೆ. ಆರು ತಿಂಗಳ ನಂತರ ಶೇ50ರಷ್ಟು ದಂಡ ಹಾಕಲಾಗುತ್ತಿದೆ.

ಇನ್ನು ಗೃಹೇತರ ಕಟ್ಟಡಗಳಿಗೆ ಮೊದಲ ಮೂರು ತಿಂಗಳು ಒಟ್ಟು ಶುಲ್ಕದ ಮೇಲೆ ಶೇ.50 ರಷ್ಟು, ನಂತರದಲ್ಲಿಯೂ ಅಳವಡಿಸಿಕೊಳ್ಳದಿದ್ದರೆ ಕಟ್ಟಡಗಳಿಗೆ ಶೇ 100 ರಷ್ಟು ದಂಡ ಹಾಕಲಾಗುತ್ತಿದೆ. ಉದಾಹರಣೆಗೆ ಗೃಹೇತರ ಕಟ್ಟಡದ ನೀರಿನ ಶುಲ್ಕ 100 ರೂ ಬಂದರೆ ದಂಡ 100 ಸೇರಿ 200 ರೂ ಅನ್ನು ಬಿಲ್‌ ಪ್ರತಿಯೇ ಸೃಜಿಸುತ್ತದೆ. 

29.76 ಕೋಟಿ ರೂ. ದಂಡ ಸಂಗ್ರಹ: ಜಲಮಂಡಳಿಯ ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ ಒಟ್ಟು 9.8 ಕಟ್ಟಡಗಳು ನೀರಿನ ಸಂಪರ್ಕ ಪಡೆದಿದ್ದಾರೆ. ಆ ಪೈಕಿ 1.95 ಲಕ್ಷ ಕಟ್ಟಡಗಳು ಮಳೆನೀರು ಕೊಯ್ಲು ಕಡ್ಡಾಯ ನಿಯಮಕ್ಕೆ ಒಳಪಡುತ್ತವೆ. ಈವರೆಗೆ 97,486 ಕಟ್ಟಡಗಳು ಮಳೆನೀರು ಕೊಯ್ಲು ಅಳವಡಿಸಿಕೊಂಡಿದ್ದು, ಇನ್ನೂ 97,686 ಕಟ್ಟಡಗಳು ಅಳವಡಿಸಿಕೊಳ್ಳದೆ ದಂಡ ಪಾವತಿಸುತ್ತಿವೆ. ಅದರಂತೆ ಒಂದು ವರ್ಷಗಳಲ್ಲಿ ಜಲಮಂಡಳಿಗೆ ದಂಡದ ರೂಪದಲ್ಲಿ 29.76 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವಂತೆ ನಾಗರಿಕರಿಗೆ ಈಗಾಗಲೇ ಹಲವಾರು ಬಾರಿ ಜಾಗೃತಿ ಮೂಡಿಸಲಾಗಿದೆ. ಆ ನಂತರವೂ ನಿಯಮ ಪಾಲಸದ ಕಟ್ಟಡಗಳಿಗೆ ನೀರಿನ ಬಿಲ್‌ ಮೇಲೆ ದಂಡ ವಿಧಿಸಲಾಗುತ್ತಿದೆ. ಗ್ರಾಹಕರು ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡು ಆ ಕುರಿತು ದಾಖಲೆಗಳನ್ನು ಒದಗಿಸಿದ ಕೂಡಲೇ ದಂಡ ಹಾಕುವುದು ಸ್ಥಗಿತಗೊಳಿಸಲಾಗುವುದು.
-ಕೆಂಪರಾಮಯ್ಯ, ಪ್ರಧಾನ ಇಂಜಿನಿಯರ್‌ ಜಲಮಂಡಳಿ

ಜಲಮಂಡಳಿಗೆ ದಂಡದ ರೂಪದಲ್ಲಿ ಸಂಗ್ರಹವಾಗುವ ಆದಾಯ ಮುಖ್ಯವಲ್ಲ. ಬದಲಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಮಳೆನೀರು ಕೊಯ್ಲು ಅಳವಡಿಸಿಕೊಂಡು, ಅಂತರ್ಜಲ ಪ್ರಮಾಣ ಹೆಚ್ಚಿಸಲು ಜಲಮಂಡಳಿಗೆ ಸಹಕಾರ ನೀಡಬೇಕಿದೆ.
-ಮಂಜುನಾಥ್‌, ಸಾರ್ವಜನಿಕ ಸಂಪರ್ಕಾಧಿಕಾರಿ ಜಲಮಂಡಳಿ

ಅಂಕಿ ಅಂಶ ಬಾಕ್ಸ್‌…
-9.6 ಲಕ್ಷ ನಗರದಲ್ಲಿರುವ ಒಟ್ಟು ಸಂಪರ್ಕಗಳು
-1,450 ಎಂಎಲ್‌ಡಿ ನಿತ್ಯ ಪೂರೈಕೆಯಾಗುವ ನೀರಿನ ಪ್ರಮಾಣ
-97,486 ಮಳೆನೀರು ಕೊಯ್ಲು ಅಳವಡಿಸಿಕೊಂಡ ಕಟ್ಟಡಗಳು
-97,686 ಮಳೆನೀರು ಕೊಯ್ಲು ಅಳವಡಿಸಿಕೊಳ್ಳದೇ ದಂಡ ಪಾವತಿಸುತ್ತಿರುವ ಕಟ್ಟಡಗಳು
-2 ಕೋಟಿ ರೂ. ಪ್ರತಿ ತಿಂಗಳು ದಂಡದ ರೂಪದಲ್ಲಿ ಸಂಗ್ರಹವಾಗುತ್ತಿರುವ ಅಂದಾಜು ಮೊತ್ತ
-29.76 ಕೋಟಿ ರೂ. ಕಳೆದೊಂದು ವರ್ಷಗಳಲ್ಲಿ ಸಂಗ್ರಹವಾದ ದಂಡ

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.