ಸೋಲಾರ್ ಪ್ಲಾಂಟ್ ಹೆಸರಲ್ಲಿ ವಂಚನೆ: ಸೆರೆ
Team Udayavani, Mar 25, 2023, 1:26 PM IST
ಬೆಂಗಳೂರು: ಸಂಜಯ ನಗರದ ಉದ್ಯಮಿಯೊಬ್ಬ ರಿಗೆ ಸೋಲಾರ್ ಪ್ಲಾಂಟ್ ಅಳವಡಿಸುವುದಾಗಿ ನಂಬಿಸಿ 4.11 ಕೋಟಿ ರೂ. ವಂಚಿಸಿದ್ದ ಆರೋಪಿ ಯು ಸಂಜಯ್ನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪ್ರಮೋದ್ ಪ್ರಕಾಶ್ ಬಂಧಿತ. ಜೆಮಿನಿ ಡೈಯಿಂಗ್ ಆ್ಯಂಡ್ ಪ್ರಿಂಟಿಂಗ್ ಮಿಲ್ಸ್ ಪ್ರೈವೇಟ್ ಲಿ. ಮಾಲೀಕ ಗುಲ್ಲು ತಲರೇಜಾ (70) ವಂಚನೆ ಗೊಳಗಾದವರು.
ಗುಲ್ಲು ತಲರೇಜಾ ಗೊರಗುಂಟೆ ಪಾಳ್ಯ ಬಳಿ ಇರುವ ತಮ್ಮ ಕಂಪನಿಗೆ ಸೋಲಾರ್ ಪ್ಲಾಂಟ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಸಮೃದ್ಧಿ ರಿನವಬೇಲ್ ಸಲ್ಯೂಷನ್ ಪ್ರೈವೇಟ್ ಲಿ.ಮಾಲೀಕ ಪ್ರಮೋದ್ ಪ್ರಕಾಶ್ ಪರಿಚಯವಾಗಿದ್ದ. ಉದ್ಯಮಿಗೆ ನಕಲಿ ದಾಖಲೆ ತೋರಿಸಿದ್ದ ಪ್ರಮೋದ್ ಪ್ರಕಾಶ್ ಸೋಲಾರ ಪ್ಲಾಂಟ್ ಅಳವಡಿಸುವುದಾಗಿ ಹೇಳಿದ್ದ. ಪ್ರಾಜೆಕ್ಟ್ ಬೇಗ ಮುಗಿಸಿಕೊಡಲು ಹಂತ-ಹಂತವಾಗಿ 4.11 ಕೋಟಿ ರೂ.ಪಡೆದಿದ್ದ. ಹಣ ಪಡೆದರೂ ಕೆಲಸ ಪ್ರಾರಂಭಿಸಿರಲಿಲ್ಲ. ಉದ್ಯಮಿ ಗುಲ್ಲು ತಲರೇಜಾ ಪ್ರಮೋದ್ ಪ್ರಕಾಶ್ನನ್ನು ಸಂಪರ್ಕಿಸಿದಾಗ ಸಬೂಬು ಹೇಳಿ ತಪ್ಪಿಸಿಕೊಂಡಿದ್ದ. ಆತನ ಮೇಲೆ ಅನುಮಾನ ಬಂದು ಉದ್ಯಮಿ ಆತನ ಹಿನ್ನೆಲೆ ಪರಿಶೀಲಿಸಿದಾಗ ಆರೋಪಿ ವಂಚನೆ ಬೆಳಕಿಗೆ ಬಂದಿದೆ.
ಹಣ ಹಿಂತಿರುಗಿಸುವಂತೆ ಕೇಳಿದರೆ ಆರೋಪಿ ಬೆದರಿಸುತ್ತಿದ್ದ. ಇತ್ತ ಉದ್ಯಮಿ ಸಂಜಯನಗರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿ ಪ್ರಮೋದ್ನನ್ನು ಬಂಧಿಸಿದ್ದಾರೆ.
ಆರೋಪಿ ವಂಚಿಸಿದ ಹಣವನ್ನು ಚಲನಚಿತ್ರದಲ್ಲಿ ಹೂಡಿಕೆ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್