ಜ್ಯೋತಿಷಿ ದರೋಡೆಗೆ ಆಪ್ತ ಸಹಾಯಕಿಯಿಂದಲೇ ಸುಪಾರಿ
Team Udayavani, Jul 14, 2022, 9:51 AM IST
ಬೆಂಗಳೂರು: ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದಲ್ಲಿ ನೆಲೆಸಿದ್ದ ಜ್ಯೋತಿಷಿ ಪ್ರಮೋದ್ ಎಂಬುವರ ಮನೆಗೆ ನುಗ್ಗಿ ದರೋಡೆ ಮಾಡಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಜ್ಯೋತಿಷಿ ಆಪ್ತ ಸಹಾಯಕಿ ಎನ್ನಲಾದ ಮೇಘನಾ ಎಂಬಾಕೆ ಕೃತ್ಯ ಎಸಗಲು ಆರೋಪಿಗಳಿಗೆ ಸುಪಾರಿ ಕೊಟ್ಟಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.
ಅಲ್ಲದೆ ಮೇಘನಾ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಮೆಘನಾ(27), ರಿಚರ್ಡ್ ಮತ್ತು ರಾಜು ಬಂಧಿತರು.
ಮೇಘನಾ ಕೆಲ ವರ್ಷಗಳಿಂದ ಜ್ಯೋತಿಷಿ ಪ್ರಮೋದ್ ಆಪ್ತ ಸಹಾಯಕಿಯಾಗಿದ್ದಳು. ಒಂಟಿಯಾಗಿ ವಾಸಿಸುತ್ತಿರುವ ಪ್ರಮೋದ್ ಅವರು ತಮ್ಮ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ, ನಗದು ಹಣದ ಬಗ್ಗೆ ಆಕೆಗೆ ಮಾಹಿತಿ ಇತ್ತು. ಆ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಪ್ರಮೋದ್ ಮನೆಗೆ ನುಗ್ಗಿ ದರೋಡೆ ಮಾಡಲು ತನ್ನ ಪರಿಚಿತರಿಗೆ ಮೇಘನಾ ಸುಪಾರಿ ಕೊಟ್ಟಿದ್ದಳು. ಆಕೆಯ ಸೂಚನೆಯಂತೆ ಜ್ಯೋತಿಷ್ಯ ಕೇಳುವ ನೆಪದಲ್ಲಿ ಕಳೆದ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಮೋದ್ ಮನೆಗೆ ಬಂದ ಆರೋಪಿಗಳು, ಪ್ರಮೋದ್ ಅವರನ್ನು ಬೆದರಿಸಿ 400 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು. ಆರೋಪಿ ಮೇಘನಾ ರಿಚರ್ಡ್ ಮತ್ತು ರಾಜು ಅವರಿಗೆ ವಿಚಾರಣೆ ಮುಂದುವರಿದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಮೃತ್ ಪೌಲ್-ಶಾಂತಕುಮಾರ್ ನಡುವೆ 1.36 ಕೋಟಿ ರೂ. ವಹಿವಾಟು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ