ಲಾಲ್‌ಬಾಗ್‌ ಇತಿಹಾಸ ಹೇಳಲಿದೆ ಅಶರೀರವಾಣಿ


Team Udayavani, Sep 16, 2019, 3:08 AM IST

lalbhag

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) “ಬೆಂಗಳೂರು ದರ್ಶನ’ ಬಸ್‌ ಮಾದರಿಯಲ್ಲೇ “ಲಾಲ್‌ಬಾಗ್‌ ದರ್ಶನ’ಕ್ಕೆ ಪರಿಸರ ಸ್ನೇಹಿ “ಬಗ್ಗೀಸ್‌’ ಸಜ್ಜಾಗಿದೆ. ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನ ಪ್ರೇಕ್ಷಣಿಯ ಸ್ಥಳಗಳ ಇತಿಹಾಸ ಹೇಳುವ ಆಡಿಯೋ ತಂತ್ರಜ್ಞಾನವನ್ನು ಈ ಪರಿಸರ ಸ್ನೇಹಿ ವಾಹನದಲ್ಲಿ ಅಳವಡಿಸಲು ಮುಂದಾಗಿದೆ.

ಬಗ್ಗೀಸ್‌ನಲ್ಲಿ ಕುಳಿತು ಲಾಲ್‌ಬಾಗ್‌ನ ರಸ್ತೆಗಳಲ್ಲಿ ಸಂಚರಿಸುವಾಗ ಆ ರಸ್ತೆಯ ಇತಿಹಾಸ ಮಾತ್ರವಲ್ಲದೇ, ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಆಡಿಯೋ ಮಾಹಿತಿ ಪ್ರವಾಸಿಗರಿಗೆ ಸಿಗಲಿದೆ. ಮೆಟ್ರೋ ರೈಲಿನಲ್ಲಿ ನಿಲ್ದಾಣಗಳ ಬಗ್ಗೆ ಮಾಹಿತಿ ನೀಡಲು ಇರುವ ಆಡಿಯೋ ವ್ಯವಸ್ಥೆ ಮಾದರಿಯನ್ನೇ ಬಗ್ಗೀಸ್‌ ವಾಹನದಲ್ಲಿ ಬಳಸಲಾಗಿದೆ. ಸೇವೆ ಆರಂಭವಾದರೆ, ಆಡಿಯೋ ಮೂಲಕ ಇತಿಹಾಸ ತಿಳಿಸುವ ರಾಜ್ಯದ ಮೊದಲ ಪ್ರಯತ್ನ ಇದಾಗಲಿದೆ.

ಎರಡು ವಾರದಲ್ಲಿ ಆಡಿಯೋ ಅಳವಡಿಕೆ: ಈಗಾಗಲೇ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ವಾಹನಗಳಿಗೆ ಆಡಿಯೋ ಅಳವಡಿಕೆಯಾಗಲಿದೆ. ಲಾಲ್‌ಬಾಗ್‌ನ ಇತಿಹಾಸ, ಸಸ್ಯಗಳ ತಳಿ, ಲಾಲ್‌ಬಾಗ್‌ ತೆರೆ ಹಿಂದಿರುವ ಸಾಧಕರ ಬಗ್ಗೆ ತಿಳಿಸುವ ಮಹತ್ವದ ಉದ್ದೇಶಕ್ಕೆ ತೋಟಗಾರಿಕೆ ಇಲಾಖೆ ಕೈ ಹಾಕಿದೆ. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಗೋಪುರ, ಫ‌ಲಪುಷ್ಪ ಪ್ರದರ್ಶನ ನಡೆಯುವ ಗಾಜಿನಮನೆ, ಲಾಲ್‌ಬಾಗ್‌ ಕೆರೆ, 4 ದ್ವಾರ, ಹೂದೋಟ, ಸಭಾಂಗಣ ಸೇರಿ ಸುಮಾರು 20ಕ್ಕೂ ಅಧಿಕ ಪ್ರೇಕ್ಷಣಿಕ ಸ್ಥಳಗಳಲ್ಲಿ ವಾಹನ ಸಂಚರಿಸಿ ಮಾಹಿತಿ ನೀಡಲಿದೆ.

ಲಾಲ್‌ಬಾಗ್‌ನಲ್ಲಿ ಈಗಾಗಲೇ ಇರುವ 5 ಪರಿಸರ ಸ್ನೇಹಿ ವಾಹನಗಳಲ್ಲಿ ಆಡಿಯೋ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಒಂದು ವಾಹನದಲ್ಲಿ 16 ಜನ ಕುಳಿತುಕೊಳ್ಳಲು ಸ್ಥಳವಿದ್ದು, ಒಬ್ಬರಿಗೆ 100 ರೂ. ಶುಲ್ಕವಿದೆ. 240 ಎಕರೆ, 4 ಕಿ.ಮೀ. ವ್ಯಾಪ್ತಿಯ ಲಾಲ್‌ಬಾಗ್‌ ಸುತ್ತಲು 45 ನಿಮಿಷಗಳಿಂದ 1 ಗಂಟೆ ಸಮಯ ಬೇಕಾಗುತ್ತದೆ. ಈ ಪರಿಸರ ಸ್ನೇಹಿ ವಾಹನವೊಂದಕ್ಕೆ 5 ಲಕ್ಷ ರೂ. ವೆಚ್ಚವಾಗಿದ್ದು, 8 ಗಂಟೆ ಬ್ಯಾಟರಿ ಚಾರ್ಜ್‌ ಮಾಡಿದರೆ 20 ಕಿ.ಮೀ. ಸಂಚರಿಸುತ್ತದೆ. ಪ್ರಸ್ತುತ ಈ ವಾಹನಗಳು ದಿನಕ್ಕೆ 3-4 ಟ್ರಿಪ್‌ ಮಾಡಲಿದ್ದು, ನಿತ್ಯ 250ರಿಂದ 300 ಜನ ಪ್ರಯಾಣಿಸುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 500ರ ಗಡಿ ದಾಟುತ್ತದೆ.

ವಾರ್ಷಿಕ 24 ಲಕ್ಷ ರೂ. ಆದಾಯ: ಲಾಲ್‌ಬಾಗ್‌ನಲ್ಲಿ 4 ದೊಡ್ಡ 1 ಸಣ್ಣ ಬಗ್ಗೀಸ್‌ ವಾಹನವನ್ನು ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ತೋಟಗಾರಿಕೆ ಇಲಾಖೆಗೆ ಒಂದು ವಾಹನಕ್ಕೆ ಒಂದು ತಿಂಗಳಿಗೆ 50 ಸಾವಿರ ರೂ. ನೀಡಲಿದ್ದು, ವರ್ಷಕ್ಕೆ ಇಲಾಖೆಗೆ 24 ಲಕ್ಷ ರೂ. ಆದಾಯ ಬರಲಿದೆ.

ಕನ್ನಡ- ಇಂಗ್ಲಿಷ್‌ನಲ್ಲಿ ಮಾಹಿತಿ: ಸಸ್ಯಕಾಶಿಗೆ ಭೇಟಿ ನೀಡುವ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯ, ವಿದೇಶಿ ಪ್ರವಾಸಿಗರಿಗೆ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಲಾಲ್‌ಬಾಗ್‌ನ ಇತಿಹಾಸ ತಿಳಿಸುವ ಚಿಂತನೆಯಿದೆ. ಪ್ರಸ್ತುತ ವಾಹನ ಚಾಲಕರೇ ಎಲ್ಲಾ ಸ್ಥಳಗಳ ಮಾಹಿತಿ ನೀಡುತ್ತಿದ್ದು, ಆಡಿಯೋ ಅಳವಡಿಸಿದರೆ ಸಸ್ಯಕಾಶಿಯ ಇತಿಹಾಸ ಆಡಿಯೋ ಮೂಲಕವೇ ಕೇಳಬಹುದು. ಈ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಲಾಲ್‌ಬಾಗ್‌ನಲ್ಲಿರುವ ಗೋಪುರ, ಗಾಜಿನಮನೆ ಇತಿಹಾಸ ಬಹುತೇಕರಿಗೆ ತಿಳಿದಿಲ್ಲ. ಪರಿಸರ ಸ್ನೇಹಿ ಬಗ್ಗೀಸ್‌ ವಾಹನಗಳಿಗೆ ಆಡಿಯೋ ವ್ಯವಸ್ಥೆ ಅಳವಡಿಸಿದರೆ ಪ್ರವಾಸಿಗರಿಗೆ ಲಾಲ್‌ಬಾಗ್‌ನ ಇತಿಹಾಸ ತಿಳಿಸಲು ಸುಲಭವಾಗುತ್ತದೆ.
-ಸುನೀಲ್‌, ಬಗ್ಗೀಸ್‌ ವಾಹನ ಚಾಲಕ

* ಮಂಜುನಾಥ್‌ ಗಂಗಾವತಿ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.