ಲೆಕ್ಕಕ್ಕುಂಟು ಆಟಕ್ಕಿಲ್ಲದ ಉದ್ಯಾನವನದ ಆಟಿಕೆಗಳು


Team Udayavani, Aug 19, 2018, 11:59 AM IST

lekkakuntu.jpg

ಬೆಂಗಳೂರು: ಜಾರುಬಂಡೆಗಳಲ್ಲಿ ಮಕ್ಕಳ ಜಾರುತ್ತಿಲ್ಲ. ತೂಗುಯ್ನಾಲೆಗಳು ಸ್ತಬ್ಧವಾಗಿವೆ. ರಂಗು ರಂಗಿನ ಆಟಿಕೆಗಳು ಮೃದು ಕೈಗಳ ಸ್ಪರ್ಶವಿಲ್ಲದೇ ಸೊರಗಿವೆ. ಪ್ರತಿ ದಿನ ಸಂಜೆ, ವಾರಾಂತ್ಯದ ಇಡೀ ದಿನ ಮಕ್ಕಳ ಕಲರವದಿಂದ ಕಂಗೊಳಿಸುತ್ತಿದ್ದ ನಗರದ ಉದ್ಯಾನಗಳಲ್ಲೀಗ ನೀರವ ಮೌನ ಆವರಿಸಿದೆ. ಕಾರಣ, ಉದ್ಯಾನಗಳಲ್ಲಿನ ಆಟಿಕೆಗಳು ಹಾಳಾಗಿರುವುದು.

ಬಹುತೇಕ ಪಾರ್ಕ್‌ಗಳಲ್ಲಿನ ಆಟಿಕೆಗಳು ಮುರಿದಿವೆ. ಕೆಲವು ಬಳಕೆಗೆ ಬಾರದಂತಿದ್ದರೆ, ಇನ್ನೂ ಕೆಲವು ತುಕ್ಕು ಹಿಡಿದು ಅಪಾಯ ತಂದೊಡ್ಡುವ ಸ್ಥಿತಿಯಲ್ಲಿವೆ. ಚಿಕ್ಕ ಉದ್ಯಾನಗಳಷ್ಟೇ ಅಲ್ಲ, ಪ್ರತಿಷ್ಠಿತ ಬಾಲ ಭವನ, ಮಕ್ಕಳ ಕೂಟ, ರಾಮಾಂಜನೇಯ ಗುಡ್ಡದ ಆವರಣದಲ್ಲಿನ ಆಟಿಕೆಗಳ ಸ್ಥಿತಿ ಕೂಡ ಚಿಂತಾಜನಕ.

ಕೂಟದಿಂದ ಮಕ್ಕಳು ವಿಮುಖ: ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ಈಚೆಗೆ ಮಕ್ಕಳ ಕೇಕೆ, ನಗು ಕೇಳುತ್ತಿಲ್ಲ, ಪುಟ್ಟ ಕಾಲ್ಗಳ ಓಡಾಟ ಕಾಣುತ್ತಿಲ್ಲ. ಮಕ್ಕಳ ಪ್ರಮುಖ ಆಷರ್ಕಣೆಯಾಗಿದ್ದ ಎಲ್ಲ 8 ಉಯ್ನಾಲೆಗಳೂ ಕೊಂಡಿ ಕಳಚಿ ನೆಲ ಹಿಡಿದಿವೆ. ಇರುವ ಒಂದು ಉಯ್ನಾಲೆಯೇ ಎಲ್ಲ ಮಕ್ಕಳ ಭಾರ ಹೊರಬೇಕಿದೆ. ಜಾರುಬಂಡೆ ಕೂಡ ಅಲ್ಲಲ್ಲಿ ಕಿತ್ತುಬಂದಿದ್ದು, ಬಳಸಲು ಯೋಗ್ಯವಾಗಿಲ್ಲ. ಬಹುಪಾಲು ಆಟಿಕೆಗಳು ಹಾಳಾಗಿರುವ ಕಾರಣ ಉದ್ಯಾನಕ್ಕೆ ಹೋಗಬೇಕಂತ ಅನಿಸುತ್ತಲೇ ಇಲ್ಲ ಎನ್ನುತ್ತಾರೆ ಪುಟಾಣಿಗಳು. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ ಎನ್ನುತ್ತಾರೆ ಪೋಷಕರು.

ಬಾಲಭವನದಲ್ಲಿ ತ್ಯಾಜ್ಯ ರಾಶಿ: ಚಿಣ್ಣರ ನೆಚ್ಚಿನ ತಾಣ ಬಾಲಭವನ, ಕಸದ ರಾಶಿಯಿಂದಾಗಿ ಕಳೆಗುಂದುತ್ತಿದೆ. ನಾಲ್ಕು ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಇಲ್ಲಿ ಸಾಕಷ್ಟು ಆಟಿಕೆಗಳಿವೆ. ಆದರೆ ನಾಲ್ಕು ವರ್ಷದೊಳಗಿನ ಮಕ್ಕಳ ಆಕರ್ಷಣೆಗೆ ಆಟಿಕೆ ಅಳವಡಿಸುವ ಅಗತ್ಯವಿದೆ. ಇಲ್ಲಿದ್ದ ನಾಲ್ಕು ಉಯ್ನಾಲೆಗಳು, ಮಕ್ಕಳನ್ನು ಕೂರಿಸಿ ತಿರುಗಿಸುವ ಆಟಿಕೆ ಹಾಳಾಗಿವೆ. ಮಾದರಿ ಸೇತುವೆ ಹಲಗೆಗಳು ಮುರಿದಿದ್ದು, ಮಕ್ಕಳು ನಡೆಯುವಾಗ ಬೀಳುತ್ತಾರೆ.

ರೈಲು ಹಳಿ ಸುತ್ತಲೆಲ್ಲಾ ಪ್ಲಾಸ್ಟಿಕ್‌ ರಾಶಿ: ಬಾಲಭವನದ ಪುಟಾಣಿ ರೈಲು ಚಿಣ್ಣರಿಗೆ ಅಚ್ಚುಮೆಚ್ಚು. ಈ ರೈಲಿನಲ್ಲಿ ಜಾಲಿ ರೈಡ್‌ ಮಾಡಿಸಲೆಂದೇ ಪೋಷಕರು ಮಕ್ಕಳನ್ನು ಇಲ್ಲಿಗೆ ಕರೆತರುತ್ತಾರೆ. ಆದರೆ ರೈಲು ಹಳಿ ಸುತ್ತ ಬಿದ್ದಿರುವ ಪ್ಲಾಸ್ಟಿಕ್‌ ರಾಶಿ, ಜಾಲಿ ರೈಢ್‌ನ ಉತ್ಸಾಹ ಕುಂದಿಸುತ್ತದೆ. ರೈಲು ಇಂಜಿನ್‌ ಮಾದರಿಯೂ ಕಸಮಯವಾಗಿದೆ. ಬಾಲಭವನದ ತುಂಬಾ ಕಸದ ರಾಶಿ ಇದ್ದು, ಮಕ್ಕಳು ನೆಮ್ಮದಿಯಾಗಿ ಆಟವಾಡುವ ಸ್ಥಿತಿಯಿಲ್ಲ.

ಬ್ರೆಕ್‌ ಡ್ಯಾನ್ಸ್‌, ಡ್ರ್ಯಾಗನ್‌ ಪ್ಲೇ ಸೇರಿದಂತೆ ಇನ್ನಿತರ ಆಟಿಕೆಗಳಲ್ಲಿ ಮಕ್ಕಳೊಂದಿಗೆ ದೊಡ್ಡವರೂ ಆಟವಾಡುತ್ತಿದ್ದು, ಅವೂ ಹಾಳಾಗುತ್ತಿವೆ. ಜಾರುಬಂಡೆ, ಉಯ್ನಾಲೆಗಳೊಂದಿಗೆ ಹೊಸ ಆಟಿಕೆಗಳನ್ನು ಅಳವಡಿಸಬೇಕು. ಈ ಪೀಳಿಗೆಗೆ ತಕ್ಕಂತೆ ಬಾಲಭವನ ಮಾರ್ಪಾಡಾಗಬೇಕು ಎಂಬುದು ಮಕ್ಕಳ ಮನವಿ.

ಪೊಲೀಸೇ ಇಲ್ಲದ ಟ್ರಾಫಿಕ್‌ ಪಾರ್ಕ್‌: ಬಾಲ ಭವನದಲ್ಲಿರುವ ಟ್ರಾಫಿಕ್‌ ಪಾರ್ಕ್‌ ಕೂಡ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿದೆ. ಟ್ರಾಫಿಕ್‌ ಪಾರ್ಕ್‌ನಲ್ಲಿ ಕೆಲವೇ ಫ‌ಲಕಗಳನ್ನು ಬಿಟ್ಟರೆ, ಮಕ್ಕಳಿಗೆ ಸಂಚಾರ ನಿಯಮದ ಅರಿವು ಮೂಡಿಸುವ ಯಾವುದೇ ಆಟಿಕೆ ಇಲ್ಲ. ಕನಿಷ್ಠ ಕೆಂಪು, ಹಳದಿ, ಹಸಿರು ದೀಪಗಳು, ಟ್ರಾಫಿಕ್‌ ಪೊಲೀಸ್‌, ಝೀಬ್ರಾ ಕ್ರಾಸ್‌ ರೀತಿಯ ಮಾಹಿತಿ ಸಹ ಇಲ್ಲ. ಅಳವಡಿಸಿರುವ ಕೆಲವು ಬೋರ್ಡ್‌ಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಟ್ರಾಫಿಕ್‌ ಪಾರ್ಕ್‌ನಲ್ಲಿರುವ ಸಣ್ಣ ಕಲ್ಯಾಣಿಯಲ್ಲೂ ಕಸವೇ ತುಂಬಿದೆ.

ಗುಡ್ಡದ ಉದ್ಯಾನದಲ್ಲೂ ಮುರಿದ ಆಟಿಕೆ: ಬಸವನಗುಡಿಯ ರಾಮಾಂಜನೇಯ ಗುಡ್ಡ ಹಾಗೂ ಕಹಳೆ ಬಂಡೆ ಉದ್ಯಾನವನಗಳಲ್ಲೂ ಮಕ್ಕಳ ಆಟಿಕೆಗಳ ಸ್ಥಿತಿ ಶೋಚನೀಯ. ರಾಮಾಂಜನೇಯ ಗುಡ್ಡದಲ್ಲಿ 10 ವರ್ಷಗಳ ಹಿಂದೆ ಇದ್ದ ಆಟಿಕೆಗಳೇ ಈಗಲೂ ಇವೆ. ಮೂರ್‍ನಾಲ್ಕು ಜಾರುಬಂಡೆಗಳಿದ್ದರೂ ಜಾರಲು ಯೋಗ್ಯವಾಗಿಲ್ಲ. ಹಿಂದೆ ಐದಾರಿದ್ದ ಜೋಕಾಲಿಗಳ ಸಂಖ್ಯೆ ಎರಡಕ್ಕೆ ಸೀಮಿತಗೊಂಡಿದೆ. ಅದರಲ್ಲೂ ಒಂದು ಜೋಕಾಲಿ ಸರಪಳಿ ತುಂಡಾಗುವ ಸ್ಥಿತಿಯಲ್ಲಿದೆ. ಕಹಳೆ ಬಂಡೆಯಲ್ಲೂ ಉಯ್ನಾಲೆಗಳು ಮುರಿದು ಬಿಳುವ ಸ್ಥಿತಿಯಲ್ಲಿವೆ. ಆಟಿಕೆಗಳೂ ಹಳತಾಗಿವೆ.

ಬಾಲಭವನ ಉದ್ಯಾನದಲ್ಲಿ ಮಕ್ಕಳ ಆಟಕ್ಕೆ ಪೂರಕ ವಾತಾವರಣವಿಲ್ಲ. ಮೂರ್‍ನಾಲ್ಕು ವರ್ಷದ ಮಕ್ಕಳು ಆಟವಾಡಲು ಯೋಗ್ಯವಾದ ಆಟಿಕೆಗಳಿಲ್ಲ.
-ಕಲಾ, ಖಾಸಗಿ ಉದ್ಯೋಗಿ

ಮಾರತ್‌ಹಳ್ಳಿ ಸುತ್ತಮುತ್ತ ಮಕ್ಕಳು ಆಟ ಆಡಲು ಯೋಗ್ಯವಾದ ಪಾರ್ಕ್‌ಗಳಿಲ್ಲ. ಹೀಗಾಗಿ ಆಗಾಗ ಬಾಲಭವನಕ್ಕೆ ಬರುತ್ತೇವೆ. ಇಲ್ಲಿ ಒಂದೂ ಆಟಿಕೆ ಸರಿಯಿಲ್ಲ.
-ಉಮಾ, ಗೃಹಿಣಿ

ಬಾಲಭವನದಲ್ಲಿ ಪುಟಾಣಿ ರೈಲು ಸಂಚಾರ ಇಷ್ಟ. ಕೇವಲ ಜಾರುಬಂಡೆ ಹಾಗೂ ಉಯ್ನಾಲೆಯಲ್ಲಿ ಆಟವಾಡಿ ಬೇಸರವಾಗಿದೆ. ಹೊಸ ಆಟಿಕೆಗಳನ್ನು ಅಳವಡಿಸಬೇಕು.
-ಸಾಧನಾ, ವಿದ್ಯಾರ್ಥಿನಿ

ಮಕ್ಕಳಕೂಟ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ತೆರೆದಿರಬೇಕು. ಜೋಕಾಲಿಗಳನ್ನು ಬೇಗ ಸರಿಪಡಿಸಿಬೇಕು. ಫ್ಯಾಂಟಸಿ ಪಾರ್ಕ್‌ ಮಾದರಿ ಆಟಿಕೆ ಅಳವಡಿಸಬೇಕು.
-ಮೊಹಮ್ಮದ್‌ ದಿಲ್‌ಷಾ, ವಿದ್ಯಾರ್ಥಿ

* ಶ್ರುತಿ ಮಲೆನಾಡತಿ 

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.