ಅವಧಿ ಮುಗಿದ್ರೂ ಲಸಿಕೆಗೆ ಬಾರದ 10 ಲಕ್ಷ ಜನ..!


Team Udayavani, Dec 7, 2021, 11:39 AM IST

vaccination pending

Representative Image used

ಬೆಂಗಳೂರು: ಒಂದೆಡೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಸಿಕೆಯಿಂದ ದೂರ ಉಳಿದ ಕೆಲವರು ಲಸಿಕಾ ಕೇಂದ್ರಗಳತ್ತ ದೌಡಾಯಿಸು ತ್ತಿದ್ದಾರೆ. ಆದರೆ, ಮತ್ತೂಂದೆಡೆ ಅವಧಿ ಮೀರಿದರೂ ಎರಡನೇ ಡೋಸ್‌ನಿಂದ ದೂರ ಉಳಿದ ಸುಮಾರು ಹತ್ತು ಲಕ್ಷ ಜನ ಬಿಬಿಎಂಪಿ ಕೈಗೆ ಸಿಗದೆ ಸತಾಯಿಸುತ್ತಿದ್ದಾರೆ!

ನಗರ ವ್ಯಾಪ್ತಿಯಲ್ಲಿ ಎರಡೂ ಡೋಸ್‌ ಲಸಿಕೆಗಳ ನಡುವೆ ಸರ್ಕಾರ ಮತ್ತು ತಜ್ಞರು ನಿಗದಿಪಡಿಸಿರುವ 84 ದಿನಗಳ ಅವಧಿ ಮೀರಿದವರು ಇನ್ನೂ ಸುಮಾರು ಹತ್ತು ಲಕ್ಷ ಜನರಿದ್ದು, ಇವರಲ್ಲಿ ಬಹುತೇಕರು ಬಿಬಿ ಎಂಪಿ ಕೈಗೆ ಸಿಗುತ್ತಲೇ ಇಲ್ಲ. ಪಾಲಿಕೆ ಆರೋಗ್ಯ ಇಲಾಖೆ ಸಿಬ್ಬಂದಿ ನಿರಂತರವಾಗಿ ಕರೆ ಮಾಡಿ ಆಮಂ ತ್ರಣ ನೀಡಿದ್ದಾಯಿತು.

ಸಿಬ್ಬಂದಿಯನ್ನು ಮನೆ ಬಾಗಿಲಿಗೆ ಕಳುಹಿಸಿದ್ದಾಯಿತು. ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿದ್ದಾಯಿತು. ಆದರೂ “ನಾಳೆ ಬಾ’ ಉತ್ತರ ಸಿಗುತ್ತಿದೆ. “ನಗರದಲ್ಲಿ ಇದುವರೆಗೆ 1.43 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಇದರಲ್ಲಿ ಮೊದಲ ಡೋಸ್‌ ಪಡೆದವರು 81.62 ಲಕ್ಷ ಇದ್ದು, ಎರಡನೇ ಡೋಸ್‌ 61.52 ಲಕ್ಷ ಇದ್ದಾರೆ.

ಇದುವರೆಗೆ ಲಸಿಕೆಯಿಂದ ದೂರ ಉಳಿದವರ ಸಂಖ್ಯೆ ಕಳೆದ ವಾರ ಪರಿಶೀಲನಾ ಸಭೆಯಲ್ಲಿ 12 ಲಕ್ಷ ಜನ ಇದ್ದರು. ಈಗ ಸುಮಾರು ಹತ್ತು ಲಕ್ಷಕ್ಕೆ ಇಳಿಕೆ ಆಗಿರಬಹುದು. ಈ ಎರಡೂ ವರ್ಗಗಳು ಅಂದರೆ ಇದುವರೆಗೆ ದೂರ ಉಳಿದವರು ಹಾಗೂ ಅವಧಿ ಮುಗಿದರೂ ಎರಡನೇ ಡೋಸ್‌ ಪಡೆಯದ ಹತ್ತು ಲಕ್ಷ ಜನರಿಗೆ ಲಸಿಕೆ ನೀಡು ವುದು ಸವಾಲಾಗಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

“ಅತ್ತ ನಮಗೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಲಸಿಕೆ ನೀಡುವಂತೆ ಮೇಲಧಿಕಾರಿಗಳಿಂದ ಒತ್ತಡ ಬರುತ್ತಿದೆ. ಕೆಲವರಿಗೆ ಟಾರ್ಗೆಟ್‌ ಕೂಡ ನೀಡಲಾಗಿದೆ. ಇತ್ತ ಜನರ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಮೊಬೈಲ್‌ ನಂಬರ್‌ ಮತ್ತು ಮತದಾರರ ಪಟ್ಟಿಯನ್ನು ಹಿಡಿದುಕೊಂಡು ಹುಡುಕುತ್ತಿದ್ದೇವೆ. ಕೆಲವರು ಸಿಗುತ್ತಾರೆ; ಹಲವರು ಸಿಗುವುದಿಲ್ಲ.

ಸಿಕ್ಕವರೂ ನಾಳೆ ಬರುತ್ತೇವೆ ಎಂದು ಹೇಳಿಹೋಗುತ್ತಾರೆ. ಈ ಕಣ್ಣಾಮುಚ್ಚಾಲೆ ಆಟ ಬಿಬಿಎಂಪಿ ನಿದ್ದೆಗೆಡಿಸಿದೆ’ ಎಂದು ಹೆಸರು ಹೇಳ ಲಿಚ್ಛಿಸದ ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿ ಯೊಬ್ಬರು ಅಲವತ್ತುಕೊಂಡರು. “ಇತ್ತೀಚೆಗೆ ನಡೆದ ಒಮಿಕ್ರಾನ್‌ ಪ್ರಕರಣಗಳ ಪತ್ತೆ ಹಾಗೂ ಸೋಂಕು ಪ್ರಕರಣ ಹೆಚ್ಚಳವಾಗಿದ್ದರಿಂದ ಲಸಿಕೆ ಪ್ರಮಾಣ ದಲ್ಲಿ ಏರಿಕೆ ಕಂಡುಬಂದಿದೆ. ನಿತ್ಯ ಸರಾಸರಿ 35 ಸಾವಿರ ಲಸಿಕೆ ಹಾಕಲಾಗುತ್ತಿತ್ತು.

ಇದನ್ನೂ ಓದಿ;- ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

ಈಗ ಒಂದು ವಾರ ದಿಂದ ಈಚೆಗೆ 65-70 ಸಾವಿ ರಕ್ಕೆ ತಲುಪಿದೆ. ಆದರೆ, ಇನ್ನೂ 30-35 ಲಕ್ಷ ಮಂದಿ ಲಸಿಕೆಯಿಂದ ಹೊರಗುಳಿದಿದ್ದು, ಪ್ರತಿದಿನ ಕನಿಷ್ಠ ಒಂದು ಲಕ್ಷ ಲಸಿಕೆ ನೀಡಿದರೂ, 2ನೇ ಡೋಸ್‌ ಶೇಕಡ ನೂರರ ಗುರಿ ತಲುಪಲು ಇನ್ನೂ ಒಂದೂವರೆ ತಿಂಗಳು ಹಿಡಿಯು ತ್ತದೆ’ ಎಂದು ಹೇಳಿದರು.

“ಅವಧಿ ಮೀರಿದರೂ ಲಸಿಕೆ ಪಡೆಯದಿರುವುದು ತಪ್ಪು’ ಒಟ್ಟಾರೆ ಲಸಿಕೆ ಪಡೆದ 1.43 ಕೋಟಿ ಜನರಲ್ಲಿ ಕೊವ್ಯಾಕ್ಸಿನ್‌ ಪಡೆದವರು 19.47 ಲಕ್ಷ ಇದ್ದರೆ, ಕೊವಿಶೀಲ್ಡ್‌ ಪಡೆದವರು 1.22 ಕೋಟಿ ಹಾಗೂ ಸು#ಟ್ನಿಕ್‌ ಲಸಿಕೆ ಪೆಡದವರು 67,809. ಕೊವ್ಯಾಕ್ಸಿನ್‌ ಎರಡನೇ ಡೋಸ್‌ಗೆ 28 ದಿನ ಹಾಗೂ ಕೊವಿಶೀಲ್ಡ್‌ಗೆ 84 ದಿನಗಳು ಅಂತರ ಇರಬೇಕು ಎಂದು ಸರ್ಕಾರ ಸೂಚಿಸಿದೆ. ಅವಧಿ ಮೀರಿದರೆ ಲಸಿಕೆ ಸಾಮರ್ಥ್ಯ ಕಡಿಮೆ ಆಗುತ್ತದೆಯೇ ಎಂಬುದರ ಬಗ್ಗೆ ಯಾವುದೇ ಅಧ್ಯಯನ ಆಗಿಲ್ಲ. ಹಾಗಂತ, ಲಸಿಕೆಯಿಂದ ದೂರ ಉಳಿಯುವುದು ಕೂಡ ತಪ್ಪು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ನಿಗದಿಪಡಿಸಿದ ಅವಧಿಯಲ್ಲಿ ಲಸಿಕೆ ಪಡೆಯಿರಿ

“ಮೊದಲ ಮತ್ತು ಎರಡನೇ ಡೋಸ್‌ ನಡುವೆ ಗರಿಷ್ಠ ಎಷ್ಟು ವಿಳಂಬವಾಗಬಹುದು? ಗರಿಷ್ಠ ವಿಳಂಬದಿಂದ ಆ ಲಸಿಕೆ ಸಾಮರ್ಥ್ಯ ಕುಗ್ಗುತ್ತದೆಯೇ ಅಥವಾ ಇಲ್ಲವೇ? ಇದರ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದು. ಯಾಕೆಂದರೆ, ಈ ನಿಟ್ಟಿನಲ್ಲಿ ಅಧ್ಯಯನಗಳು ನಡೆದಿಲ್ಲ. ಆದರೆ, ಕೆಲವು ಸಲ ಮೊದಲ ಡೋಸ್‌ ತೆಗೆದುಕೊಂಡ ವ್ಯಕ್ತಿಯು ಎರಡನೇ ಡೋಸ್‌ ಸಮಯದಲ್ಲಿ ಶೀತ ಅಥವಾ ಜ್ವರ ಮತ್ತಿತರ ಕಾರಣಗಳಿಗೆ ನಾವೇ (ವೈದ್ಯರು) ತಿಂಗಳ ಮಟ್ಟಿಗೆ ಮುಂದೂಡಿರುತ್ತೇವೆ. ಅದೇನೇ ಇರಲಿ, ನಿಗದಿಪಡಿಸಿದ ಅವಧಿಯಲ್ಲಿ ಜನ ಲಸಿಕೆ ಪಡೆಯುವುದು ಸೂಕ್ತ’ ಎಂದು ಮಣಿಪಾಲ್‌ ಆಸ್ಪತ್ರೆಗಳ ಅಧ್ಯಕ್ಷ ಡಾ.ಸುದರ್ಶನ್‌ ಬಲ್ಲಾಳ್‌ ತಿಳಿಸುತ್ತಾರೆ.

– ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.