ರಾಜ್ಯದ ಯಾರಿಗೆಲ್ಲಾ ಕೇಂದ್ರ ಸಚಿವ ಸ್ಥಾನ?


Team Udayavani, May 24, 2019, 3:10 AM IST

rajyada

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಸ್ಥಾನ ಗೆದ್ದು ಐತಿಹಾಸಿಕ ದಾಖಲೆ ಸೃಷ್ಟಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಅತ್ಯುನ್ನತ ಸಾಧನೆ ತೋರಲು ರಾಜ್ಯವು ಮಹತ್ತರ ಕೊಡುಗೆ ನೀಡಿದೆ. ಅದರ ಬೆನ್ನಲ್ಲೇ ಹೊಸ ಕೇಂದ್ರ ಸಂಪುಟದಲ್ಲಿ ರಾಜ್ಯದ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆ ಶುರುವಾಗಿದೆ.

2014ರ ಲೋಕಸಭಾ ಚುನಾವಣೆ ಬಳಿಕ ರಚನೆಯಾದ ಕೇಂದ್ರ ಸಂಪುಟದಲ್ಲಿ ದಿವಂಗತ ಅನಂತ ಕುಮಾರ್‌, ಡಿ.ವಿ.ಸದಾನಂದಗೌಡ, ಜಿ.ಎಂ.ಸಿದ್ದೇಶ್ವರ ಸಚಿವರಾಗಿದ್ದರು. ನಂತರದ ಸಂಪುಟ ಪುನಾರಚನೆಯಲ್ಲಿ ಸಿದ್ದೇಶ್ವರ ಸಚಿವ ಸ್ಥಾನ ಕಳೆದುಕೊಂಡರೆ ಅನಂತ್‌ ಕುಮಾರ್‌ ಹೆಗಡೆ, ರಮೇಶ್‌ ಜಿಗಜಿಣಗಿ ಕೇಂದ್ರ ಸಚಿವ ಸ್ಥಾನ ಪಡೆದಿದ್ದರು. ಅನಂತ ಕುಮಾರ್‌ ವಿಧಿವಶರಾದ ಬಳಿಕ ಕೆಲ ಖಾತೆಯ ಜವಾಬ್ದಾರಿಯನ್ನು ಸದಾನಂದಗೌಡರಿಗೆ ವಹಿಸಲಾಗಿತ್ತು.

ಈ ಬಾರಿ ರಾಜ್ಯದಲ್ಲಿ ಬರೋಬ್ಬರಿ 25 ಸ್ಥಾನಗಳನ್ನು ಬಿಜೆಪಿ ಗೆದ್ದಿರುವ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟದಲ್ಲೂ ಹೆಚ್ಚಿನ ಸ್ಥಾನಮಾನ ಸಿಗುವ ನಿರೀಕ್ಷೆ ಮೂಡಿದೆ. ಕಳೆದ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ, ಅನಂತ ಕುಮಾರ್‌ ಹೆಗಡೆ, ರಮೇಶ್‌ ಜಿಗಜಿಣಗಿ ಅವರಿಗೆ ಮತ್ತೆ ಸಚಿವ ಸ್ಥಾನ ಒಲಿಯಬಹುದು. ಬ್ರಾಹ್ಮಣ ಸಮುದಾಯದ ಅನಂತ ಕುಮಾರ್‌ ನಿಧನರಾದ ಬಳಿಕ ಆ ಸಮುದಾಯದ ಸಂಸದರೊಬ್ಬರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಹಿರಿಯ ಸಂಸದ ಪ್ರಹ್ಲಾದ್‌ ಜೋಷಿಯವರನ್ನು ಪರಿಗಣಿಸಬಹುದು ಎಂಬ ಮಾತುಗಳು ಕೇಳಿಬಂದಿವೆ.

ಇನ್ನು ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಪೈಕಿ ಇಬ್ಬರು ಸಂಸದರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಇಲ್ಲವೇ ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸಚಿವ ಸ್ಥಾನ ಒಲಿಯುವುದೆ ಎಂಬ ಚರ್ಚೆ ಶುರುವಾಗಿದೆ. ಬಿಜೆಪಿಯ ಭದ್ರಕೋಟೆ ಎಂದೇ ಹೆಸರಾಗಿರುವ ಕರಾವಳಿ ಭಾಗ ಹಾಗೂ ರಾಜ್ಯ ಬಿಜೆಪಿಯ ಮತ ಬ್ಯಾಂಕ್‌ನಲ್ಲಿ ಪ್ರಧಾನವೆನಿಸಿರುವ ಲಿಂಗಾಯಿತ ಸಮುದಾಯಕ್ಕೂ ಆದ್ಯತೆ ಸಿಗುವುದೇ ಎಂಬ ಕುತೂಹಲ ಮೂಡಿದೆ. ಜತೆಗೆ, ಮಹಿಳಾ ಪ್ರಾತಿನಿಧ್ಯವಾಗಿ ಶೋಭಾ ಕರಂದ್ಲಾಜೆ ಅವರಿಗೂ ಅವಕಾಶ ಸಿಗಬಹುದು ಎಂಬ ಮಾತುಗಳು ಇವೆ.

ಮೀಸಲು ಕ್ಷೇತ್ರಗಳಲ್ಲಿ ಅರಳಿದ ಕಮಲ: ರಾಜ್ಯದ ಐದು ಪರಿಶಿಷ್ಟ ಜಾತಿ ಹಾಗೂ ಎರಡು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಲ್ಲಿ ಈ ಬಾರಿ ಕಮಲ ಅರಳಿದೆ. ಹಾಗಾಗಿ ಪರಿಶಿಷ್ಟ ಜಾತಿ, ಪಂಗಡದ ಸಂಸದರಿಗೂ ಆದ್ಯತೆ ಸಿಗುವುದೇ ಎಂಬ ಲೆಕ್ಕಾಚಾರ ಶುರುವಾಗಿದೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌, ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಪರಾಭವಗೊಳಿಸಿದ ಡಾ.ಉಮೇಶ್‌ ಜಾಧವ್‌ ಅವರಿಗೆ ಅವಕಾಶ ಸಿಗುವುದೇ ಎಂಬ ನಿರೀಕ್ಷೆ ಮೂಡಿದೆ. ಇನ್ನು ಪ್ರಖರ ಹಿಂದುತ್ವ, ವಾಕಟುತ್ವದಿಂದಲೇ ಜನಪ್ರಿಯರಾಗಿರುವ ಪ್ರತಾಪ್‌ ಸಿಂಹ, ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೂ ಅವಕಾಶ ಸಿಗುವುದೇ ಎಂದು ಕಾದು ನೋಡಬೇಕಿದೆ.

* ಎಂ.ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

ಬಿಸಿಲಾಘಾತದಿಂದ ಸಾವು: 115 ಕೋ.ರೂ. ಪರಿಹಾರ !

ಬಿಸಿಲಾಘಾತದಿಂದ ಸಾವು: 115 ಕೋ.ರೂ. ಪರಿಹಾರ !

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಸುಳ್ಯದ ಪಿಎಫ್ಐ ಕಚೇರಿ ಜಪ್ತಿ

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಸುಳ್ಯದ ಪಿಎಫ್ಐ ಕಚೇರಿ ಜಪ್ತಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಶಾಸಕ ಎನ್. ವೈ. ಗೋಪಾಲಕೃಷ್ಣ ಕಾಂಗ್ರೆಸ್ ನತ್ತ?

ಬಿಜೆಪಿ ಶಾಸಕ ಎನ್. ವೈ. ಗೋಪಾಲಕೃಷ್ಣ ಕಾಂಗ್ರೆಸ್ ನತ್ತ?

ಟೌನ್ ಶಿಫ್ ಗೆ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ: ಸಚಿವ ಎಸ್.ಟಿ.ಸೋಮಶೇಖರ್

ಟೌನ್ ಶಿಫ್ ಗೆ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಸಿಗದಿದ್ದಲ್ಲಿ ಭೂಮಿ ವಾಪಾಸ್

TDY-7

ಓಟಿಪಿ ನಂಬರ್‌ ಪಡೆದು 1.80 ಲಕ್ಷ ವಂಚನೆ

tdy-5

ಮಾದಕ ವಸ್ತು ಮಾರಾಟ: ಆರೋಪಿ ಬಂಧನ

tdy-4

ಮಹಿಳೆಗೆ ಮಾರಕಾಸ್ತ್ರದಿಂದ ಹಲ್ಲೆ : ಇಬ್ಬರ ಸೆರೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.