ವಿಶ್ವ ಜೇನು ದಿನಾಚರಣೆ: ತಾರಸಿ ತೋಟದಲ್ಲಿ ದುಂಬಿಗಳ ಗುಂಗು


Team Udayavani, May 20, 2023, 10:39 AM IST

ವಿಶ್ವ ಜೇನು ದಿನಾಚರಣೆ: ತಾರಸಿ ತೋಟದಲ್ಲಿ ದುಂಬಿಗಳ ಗುಂಗು

ಬೆಂಗಳೂರು: ನಗರದಲ್ಲಿ ತಾರಸಿ ತೋಟ “ಟ್ರೆಂಡ್‌’ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಕ್ಕೆ ಪೂರಕವಾಗಿ ಈಗ ಜೇನುಕೃಷಿ ಅದರಲ್ಲೂ ಮುಜಂಟಿ ಜೇನು ಸಾಕಾಣಿಕೆ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಈ ಸಂಬಂಧ ತಿಂಗಳಿಗೆ ಕನಿಷ್ಠ 10 ಕರೆಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನುಕೃಷಿ ವಿಭಾಗಕ್ಕೆ ಬರುತ್ತಿವೆ.

ಅಪ್ಪಟ “ನಗರ ಸ್ನೇಹಿ’ಯಾದ ಮುಜಂಟಿ ಜೇನು, ಅತ್ಯಂತ ಕಡಿಮೆ ಹೂಗಳ ಮೇಲೆ ಅವಲಂಬಿತವಾಗಿದೆ. ತನ್ನ ಕುಟುಂಬದಲ್ಲಿ ಕೂಡ ಬೆಂಗಳೂರು ವಾಸಿಗಳಂತೆಯೇ ಅತ್ಯಂತ ಕಡಿಮೆ ಸದಸ್ಯರನ್ನು ಹೊಂದಿದ್ದು, ಶೂನ್ಯ ನಿರ್ವ ಹಣೆಯೊಂದಿಗೆ ತಾರಸಿ ಮೇಲಿರುವ ತರಕಾರಿಗಳಲ್ಲೇ ಪರಾಗ ಸ್ಪರ್ಶ ಮಾಡಿ, ಔಷಧೀಯ ಗುಣವುಳ್ಳ ಜೇನುತುಪ್ಪ ನೀಡುತ್ತದೆ. ತಾರಸಿ ತೋಟದಲ್ಲಿ ಪರಾಗಸ್ಪರ್ಶ ಮಾಡಿ ಅಲ್ಲಿನ ಇಳುವರಿ ಹೆಚ್ಚಿಸುವಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಇದಕ್ಕೆ ಬೇಡಿಕೆ ಕೇಳಿಬರುತ್ತಿದೆ.

ಸಾಂಪ್ರದಾಯಿಕವಾಗಿ ಗೋಡೆ ಅಥವಾ ಬಿದರಿನ ಬಂಬೂಗಳಲ್ಲಿ ಗೂಡುಕಟ್ಟುವ ಈ ಪ್ರಬೇಧಕ್ಕೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನಿಗಳು, ವಿವಿಧ ಪ್ರಕಾರದ ಸಾಕಾಣಿಕೆ ಪೆಟ್ಟಿಗೆಗಳನ್ನು ಅಭಿವೃದ್ಧಿಪಡಿಸಿ, ಸಾಕಾಣಿಕೆಗೆ ಕೆಲವು ಶಿಷ್ಟಾಚಾರ ಗಳನ್ನೂ ರೂಪಿಸಿದ್ದಾರೆ. ಇದರ ಫ‌ಲವಾಗಿ ನಗರದಲ್ಲಿ “ಟೆರೇಸ್‌ ಗಾರ್ಡನ್‌’ ಮಾಡುತ್ತಿರುವವರು ಅದಕ್ಕೆ ಪೂರಕವಾಗಿ ಮುಜಂಟಿ ಜೇನು ಸಾಕಾಣಿಕೆಗೆ ಆಸಕ್ತಿ ತೋರಿಸುತ್ತಿರುವುದು ಇತ್ತೀಚೆಗೆ ಕಂಡುಬರುತ್ತಿದೆ.

“ತಾರಸಿ ತೋಟದಲ್ಲಿ ಹೆಚ್ಚು ಇಳುವರಿ: “ಮುಜಂಟಿ ಅಥವಾ ನಸರು ಜೇನು ತುಂಬಾ ವಿಶಿಷ್ಟ ಪ್ರಬೇಧವಾಗಿದೆ. ಸಾಮಾನ್ಯವಾಗಿ ಒಂದು ಜೇನು ಕುಟುಂಬದಲ್ಲಿ 15ರಿಂದ 20 ಸಾವಿರ ಸದಸ್ಯರಿರುತ್ತಾರೆ. ಇದರಲ್ಲಿ ಕೇವಲ 1,500ರಿಂದ 2,000 ಸದಸ್ಯರು. ಉಳಿದವುಗಳಿಗೆ ಹೋಲಿಸಿದರೆ, ಗಾತ್ರದಲ್ಲೂ ತೀರಾ ಚಿಕ್ಕದು. ಸಾಮಾನ್ಯ ಜೇನುನೊಣದ ಗಾತ್ರ 11- 14 ಮಿಲಿಮೀಟರ್‌ ಇದ್ದರೆ, ಮುಜಂಟಿ ಗಾತ್ರ 5- 8 ಮಿಲಿಮೀಟರ್‌. ಇದರಿಂದ ತುಳಸಿ, ಮೆಣಸಿನಕಾಯಿ, ಬದನೆಕಾಯಿ, ಟೊಮೆಟೊ ಸೇರಿದಂತೆ ಸಣ್ಣ ಹೂವುಗಳಿಂದಲೂ ಜೇನು ಹೀರುವ ಸಾಮರ್ಥ್ಯ ಹೊಂದಿದ್ದು, ಕಡಿಮೆ ಹೂವುಗಳನ್ನು ಅವಲಂಬಿಸಿವೆ. ಕಚ್ಚುವುದಾಗಲಿ ಅಥವಾ ಬೆನ್ನಟ್ಟುವುದಾಗಲಿ ಮಾಡುವುದಿಲ್ಲ. ಈ ಎಲ್ಲ ಗುಣಗಳಿಂದ ನಗರ ಪ್ರದೇಶಗಳಿಗೆ ಹೇಳಿಮಾಡಿಸಿದ್ದಾಗಿದೆ. ಇದೇ ಕಾರಣಕ್ಕೆ ಹೆಚ್ಚು ಜನಪ್ರಿಯಗೊಳ್ಳುತ್ತಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನುಕೃಷಿ ವಿಭಾಗದ ವಿಜ್ಞಾನಿ ಡಾ.ಕೆ.ಟಿ. ವಿಜಯಕುಮಾರ್‌ ತಿಳಿಸುತ್ತಾರೆ.

“ನಗರದಲ್ಲಿ ಎಷ್ಟು ಜನ ಈ ಮುಜಂಟಿ ಜೇನು ಕೃಷಿ ಮಾಡುತ್ತಿದ್ದಾರೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ಟೆರೇಸ್‌ ಗಾರ್ಡನ್‌ ನಂತೆ ಇದರಲ್ಲೂ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಮಾತ್ರ ಕಂಡುಬರುತ್ತಿದೆ. ಯಾಕೆಂದರೆ, ಜೇನು ಸಾಕಾಣಿಕೆಯಿಂದ ಇಳುವರಿ ಕೂಡ ಸಹಜವಾಗಿ ಹೆಚ್ಚಾಗುತ್ತದೆ. ತಿಂಗಳಿಗೆ ಕನಿಷ್ಠ ಹತ್ತು ಕರೆಗಳು ಈ ಜೇನುಕೃಷಿಗೆ ಸಂಬಂಧಿಸಿದಂತೆ ನಮ್ಮ ವಿಭಾಗಕ್ಕೆ ಬರುತ್ತವೆ. ಅದರಲ್ಲಿ ಬಹುತೇಕರು ತಾರಸಿ ತೋಟ ಹೊಂದಿದವರೇ ಆಗಿರುತ್ತಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ಮುಜಂಟಿ ಜೇನು ಮತ್ತು ಸಾಕಾಣಿಕೆ ಪೆಟ್ಟಿಗೆ ಸೇರಿ 2ರಿಂದ 3 ಸಾವಿರ ರೂ. ಆಗುತ್ತದೆ. ಒಂದು ಕುಟುಂಬದಿಂದ 200ರಿಂದ 500 ಗ್ರಾಂ ಜೇನುತುಪ್ಪ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಕೆ.ಜಿ.ಗೆ 2,500ರಿಂದ 3,000 ರೂ. ಆಗಿದೆ. ಜನರಿಗೆ ಇದರ ಸಾಕಾಣಿಕೆ ಬಗ್ಗೆ ಆಸಕ್ತಿ ಬರಲು ಟೆರೇಸ್‌ ಗಾರ್ಡನಿಂಗ್‌ ಪದ್ಧತಿ ಹೆಚ್ಚಾಗುತ್ತಿರುವುದು, ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಜತೆಗೆ ಜೇನುನೊಣಗಳ ಗುಣಲಕ್ಷಣಗಳು ಕಾರಣವಾಗಿವೆ ಎಂದು ತಜ್ಞರು ತಿಳಿಸುತ್ತಾರೆ.

“ಬೆಳೆಗಳಿಗೆ ಪರಾಗಸ್ಪರ್ಶ ಅಗತ್ಯ ಮತ್ತು ಅನಿವಾರ್ಯ ಎಂಬುದು ಮನಗಂಡವರು ನಮ್ಮ ಬಳಿ ಬಂದು ಮುಜಂಟಿ ಜೇನುನೊಣಗಳನ್ನು ತೆಗೆದುಕೊಂಡು ಹೋಗುತ್ತಾರೆ. ನೆಲಮಂಗಲ, ಹೆಸರಘಟ್ಟ ಸೇರಿದಂತೆ ವಿವಿಧೆಡೆಯಿಂದ ಜನ ಬರುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಹತ್ತಾರು ಜನರಿಗೆ ಜೇನು ಕುಟುಂಬಗಳನ್ನು ಮಾರಾಟ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ಜನರಲ್ಲಿ ಆಸಕ್ತಿ ಕಂಡುಬರುತ್ತಿದೆ’ ಎಂದು ಲಕ್ಷ್ಮೀಪುರ ಕ್ರಾಸ್‌ನ ಎ.ಕೆ. ಅಲೆಕ್ಸಾಂಡರ್‌ ಹೇಳಿದರು.

5 ಪ್ರಬೇಧಗಳು: ಜೇನುನೊಣಗಳಲ್ಲಿ ಐದು ಪ್ರಬೇಧಗಳಿದ್ದು, ತುಡವೆ, ಇಟಲಿಯಿಂದ ತಂದು ಸಾಕಾಣಿಕೆ ಮಾಡು ತ್ತಿರುವ ಮಿಲಿಫ‌ರಾ ಸಾಕಾಣಿಕೆ ಮಾಡಲಾಗುತ್ತದೆ. ಹೆಜ್ಜೇನು, ಕಡ್ಡಿಜೇನು ಸಾಕಾಣಿಕೆ ಸಾಧ್ಯವಿಲ್ಲ. ಮುಜಂಟಿ ನಗರ ಪ್ರದೇಶಕ್ಕೆ ಹೇಳಿಮಾಡಿಸಿದ್ದಾಗಿದೆ.

ಗುಣಲಕ್ಷಣಗಳು:

 ಕಡಿಮೆ ಹೂವುಗಳ ಅವಲಂಬನೆ

 ಔಷಧೀಯ ಗುಣವುಳ್ಳ ಜೇನುತುಪ್ಪ

 ಚಿಕ್ಕ ಮತ್ತು ಚೊಕ್ಕ ಕುಟುಂಬ

 ಗಾತ್ರ ಸಣ್ಣದಾಗಿರುವುದರಿಂದ ಸಣ್ಣ ಹೂವಿನಿಂದಲೂ ಜೇನು ಹೀರುವ ಸಾಮರ್ಥ್ಯ

 ಶೂನ್ಯ ನಿರ್ವಹಣೆ

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.