ಸ್ವದೇಶಗಳಿಗೆ ತೆರಳಿದ 3 ಸಾವಿರ ವಿದೇಶಿಗರು

ಭಾರತದಲ್ಲೇ ಸಿಲುಕಿದ್ದ ವಿದೇಶಿಗರು 17 ದೇಶಗಳಿಗೆ 22 ವಿಮಾನಗಳ ಹಾರಾಟ

Team Udayavani, Apr 30, 2020, 4:35 PM IST

ಸ್ವದೇಶಗಳಿಗೆ ತೆರಳಿದ 3 ಸಾವಿರ ವಿದೇಶಿಗರು

ದೇವನಹಳ್ಳಿ: ಲಾಕ್‌ಡೌನ್‌ನಿಂದಾಗಿ ಭಾರತದಲ್ಲೇ ಸಿಲುಕಿಕೊಂಡಿದ್ದ 17 ದೇಶಗಳ 3000 ಸಾವಿರ ವಿದೇಶಿ ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ 22
ವಿಮಾನಗಳ ಮೂಲಕ ಸ್ವದೇಶಕ್ಕೆ ತೆರಳಲು ಅವಕಾಶ ಮಾಡಿಕೊಡಲಾಯಿತು. ಮೂರು ದಿನಗಳಲ್ಲಿ ಮೂರು ವಿಮಾನಗಳ ಹಾರಾಟ ಕಾರ್ಯಾಚರಣೆ ನಡೆಸಿದ್ದು ಜಪಾನ್‌ ಏರ್‌ ಲೈನ್ಸ್‌(ಜೆಎಎಲ್‌) ಟೋಕಿಯೋಗೆ ಹಾರಾಟ ನಡೆಸಿ, ಅತಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಲಾಯಿತು. ಬಳಿಕ ದಕ್ಷಿಣ ಕೊರಿಯಾದ ಇಂಚೆನ್‌ಗೆ ಕೊರಿಯನ್‌ ಏರ್‌ ಸಂಸ್ಥೆ ಹಾರಾಟ ನಡೆಸಿತು. ಇವುಗಳೊಂದಿಗೆ ಅಜರ್‌ಬೈಜಾನ್‌, ಬಾಗ್ಧಾದ್‌, ಖೈರೊ, ಕೊಲಂಬೊ, ದೋಹಾ, ಫ್ರಾಂಕ್‌ಫ‌ರ್ಟ್‌, ಲಂಡನ್‌, ಮಾಲೆ, ಮಸ್ಕಾಟ್‌, ಪ್ಯಾರಿಸ್‌, ಪಾರೊ(ಭೂತಾನ್‌), ರಿಯಾದ್‌, ರೋಮ್‌, ಸ್ಟಾಕ್‌ಹೋಮ್‌ ಮತ್ತು ಟಿಬಿಲಿಸಿ(ಜಾರ್ಜಿಯಾ) ಮುಂತಾದ ಸ್ಥಳಗಳಿಗೆ ಹಾರಾಟ ನಡೆಸಲಾಯಿತು.

ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ತಮ್ಮ ದೇಶಕ್ಕೆ ಒಯ್ಯಲು ಮೊದಲ ಹಾರಾಟ ಫ್ರಾಂಕ್‌ಫ‌ರ್ಟ್‌ಗೆ ನಡೆಸಲಾಗಿದೆ. ಏರ್‌ ಇಂಡಿಯಾ ಮಾರ್ಚ್‌ 31, 2020ರಂದು ವಿಮಾನ ಹಾರಾಟದ ಕಾರ್ಯಾಚರಣೆ ನಡೆಸಿತ್ತು. ಈ ಮೇಲೆ ಹೇಳಿದ ಸ್ಥಳಗಳ ಪೈಕಿ 8 ನೂತನ ನಗರಗಳಿಗೆ ವಿಮಾನ ಹಾರಾಟಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲ ಬಾರಿಗೆ ಅವಕಾಶ ಮಾಡಿಕೊಡಲಾಗಿದ್ದು, ಈ ಸ್ಥಳಗಳಲ್ಲಿ, ಬಾಕೂ(ಅಜರ್‌ಬೈಜಾನ್‌), ಬಾಗ್ಧಾದ್‌, ಖೈರೋ, ಇಂಚಿಯಾನ್‌, ಪಾರೊ(ಭೂತಾನ್‌), ರೋಮ್‌, ಸ್ಟಾಕ್‌ ಹೋಮ್‌ ಮತ್ತು ಟಿಬಿಲಿಸಿ(ಜಾರ್ಜಿಯಾ) ಸೇರಿವೆ.

ವಿಮಾನ ನಿಲ್ದಾಣಗಳ ಸಮನ್ವಯ ಕಾರ್ಯ ಎರಡೂ ದೇಶಗಳ ಸರ್ಕಾರದ ಮಟ್ಟದಲ್ಲಿ ನಡೆದಿದ್ದು, ಬೆಂಗಳೂರು ಮತ್ತು ದಕ್ಷಿಣ ಭಾರತದಲ್ಲಿ ಸಿಲುಕಿಕೊಂಡಿದ್ದ ವಿದೇಶಿಗರು, ಸ್ವಸ್ಥಳಗಳಿಗೆ ತೆರಳಲು ನೆರವು ನೀಡಲಾಯಿತು. ಪ್ರತಿ ವಿಮಾನ ಹಾರಾಟದ ಸಿದ್ಧತೆಗೆ ಟರ್ಮಿನಲ್‌ ಮತ್ತು ಇತರೆ ಪ್ರಯಾಣಿಕರ ಸ್ಪರ್ಶ ಹೊಂದಿರುವ ಸ್ಥಳ ಸ್ವಚ್ಛಗೊಳಿಸಿ, ಸೋಂಕು ನಿವಾರಕ ಮತ್ತು ಕ್ರಿಮಿನಾಶಕ ಹೊಗೆ ಹಾಕಲಾಯಿತು.

ಬಿಐಎಎಲ್‌ ಸಿಬ್ಬಂದಿ ಬೆಂಬಲದೊಂದಿಗೆ ಟರ್ಮಿನಲ್‌ನಲ್ಲಿ ಸಿಐಎಸ್‌ಎಫ್, ವಲಸೆ ಮತ್ತು ವಿಮಾನಯಾನ ಸಂಸ್ಥೆ ಸಿಬ್ಬಂದಿಯೊಂದಿಗೆ ಕೆಲಸ ಮಾಡುವುದರೊಂದಿಗೆ ಪ್ರಯಾಣಿಕರು ಸಾಮಾಜಿಕ ಅಂತರ ಖಾತ್ರಿ ಮಾಡಿಕೊಳ್ಳಲಾಯಿತು. ಜೊತೆಗೆ ಅವರಿಗೆ ಹ್ಯಾಂಡ್‌ ಸ್ಯಾನಿಟೈಸರ್‌ಗಳು ಮತ್ತು ಮಾಸ್ಕ್ ನೀಡಲಾಗಿತ್ತು.

ಟಾಪ್ ನ್ಯೂಸ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Voting ಹದಿನೈದು ನಿಮಿಷ ಕಾದು‌ ಮತ ಹಾಕಿದ ಅನಂತಕುಮಾರ!

Voting ಹದಿನೈದು ನಿಮಿಷ ಕಾದು‌ ಮತ ಹಾಕಿದ ಅನಂತಕುಮಾರ್ ಹೆಗಡೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.