ಇ-ಸ್ವತ್ತು ದಾಖಲೆ ರಹಿತ ನೋಂದಣಿ ಆರೋಪ  


Team Udayavani, Jun 9, 2023, 3:39 PM IST

ಇ-ಸ್ವತ್ತು ದಾಖಲೆ ರಹಿತ ನೋಂದಣಿ ಆರೋಪ  

ಚನ್ನರಾಯಪಟ್ಟಣ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ನಂತರ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಇದೆ. ಹೀಗಿರುವಾಗ ಅಧಿಕಾರಿ ಗಳು ಸಹ ತಮ್ಮ ಮೂಲ ಕರ್ತವ್ಯವನ್ನು ಮರೆತು, ಅಗತ್ಯ ದಾಖಲೆಗಳಿಲ್ಲದಿದ್ದರೂ ಉಳ್ಳವರ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮದ ಟಿ.ಅಗ್ರಹಾರ ಗ್ರಾಮದಲ್ಲಿನ ಸರ್ವೆ ನಂ.50 ಜಮೀನಿಗೆ ಸಂಬಂಧಿಸಿದಂತೆ, ಒಟ್ಟು 3 ಎಕರೆಯಷ್ಟು ಜಾಗವನ್ನು 2004-05ರಲ್ಲಿ ವಾಸದ ಉದ್ದೇಶಕ್ಕೆಂದು ಖಾಸಗಿಯವರು ಭೂಪರಿವರ್ತನೆ ಮಾಡಿಸಿಕೊಂಡಿರುತ್ತಾರೆ. ಗ್ರಾಪಂ ವ್ಯಾಪ್ತಿಗೆ ಒಳಪಡುವುದರಿಂದ ಸ್ಥಳೀಯವಾಗಿ ಗ್ರಾಪಂನಲ್ಲಿ ಇ-ಖಾತೆ ಮಾಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹುಂಡಿ ಖಾತೆಯನ್ನು 2022ರಲ್ಲಿ ಮಾಡಿರುವುದು ಸರಿಯಷ್ಟೇ. ಆದರೆ, ಭೂ ಪರಿವರ್ತನೆಯಾದ ಭೂಮಿ ಯನ್ನು ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮೋದನೆಯನ್ನು ಪಡೆ ಯದೆಯೇ ಆಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಪಂಚಾಯಿತಿಯಲ್ಲಿ ಜಮೀನಿಗೆ ನಕ್ಷೆ ಅನು ಮೋದನೆ ಮಾಡಿಕೊಟ್ಟಿರುತ್ತಾರೆ.

ವಾಸಕ್ಕಾಗಿ ಭೂಪರಿವರ್ತನೆಯಾದ ಭೂಮಿಯನ್ನು ಬಡಾವಣೆ ಯನ್ನಾಗಿ ನಿರ್ಮಾಣ ಮಾಡಲು ಅಕ್ರಮವಾಗಿ ಸಾಮಾನ್ಯ ರಶೀದಿಯನ್ನು ಪಡೆದು ಉಳ್ಳವರು ಬಡಾವಣೆ ನಿರ್ಮಾಣಕ್ಕೆ ಕಾಮಗಾರಿಯನ್ನು ಕೈಗೆತ್ತಿ ಕೊಂಡಿರುತ್ತಾರೆ. ಇದನ್ನು ಪ್ರಶ್ನಿಸಿ, ದಲಿತ ಸಂಘರ್ಷ ಸಮಿತಿ (ಭೀಮ ಶಕ್ತಿ‰) ಸಂಘಟನೆಯು ಚನ್ನಹಳ್ಳಿ ಗ್ರಾಪಂ ಪಿಡಿಒಗೆ ಫೆ.27, 2023ರಂದು ಅನಧಿ ಕೃತವಾಗಿ ನಿರ್ಮಾಣವಾಗುತ್ತಿರುವ ಬಡಾವಣೆ ಯನ್ನು ನಿಲ್ಲಿಸಲು ಅರ್ಜಿ ಸಲ್ಲಿಸಿದ್ದಾರೆ.

ಆದರೆ, ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾಗಲೀ, ಅಧ್ಯಕ್ಷರಾಗಲೀ ಕ್ರಮಕ್ಕೆ ಮುಂದಾಗದೆ, ಅರ್ಜಿಗೆ ಯಾವುದೇ ದಾಖಲಾತಿ, ಅನುಮತಿ ದಾಖಲಾತಿಗಳನ್ನು ನೀಡಿರುವುದಿಲ್ಲವೆಂದು ಹಿಂಬರಹದ ಮೂಲಕ ಸಮಜಾಯಿಷಿ ನೀಡಿರುತ್ತಾರೆ. ಇದರ ಭಾಗವಾಗಿ ತಾಪಂ ಕಾರ್ಯನಿರ್ವ ಹಣಾಧಿಕಾರಿಗಳ ಗಮನಕ್ಕೆ ತಂದು, ಅನಧಿಕೃತ ಬಡಾವಣೆಯನ್ನು ತೆರವು ಗೊಳಿಸುವಂತೆ ಏ.1, 2023ರಂದು ಅರ್ಜಿ ಸಲ್ಲಿಸಿದಾಗ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಚನ್ನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒಗೆ ಪತ್ರ ವ್ಯವಹಾರದ ಮೂಲಕ ಅನಧಿಕೃತ ಬಡಾ ವಣೆಯ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಲು ಸೂಚಿಸಿರುತ್ತಾರೆ. ಆದರೆ, ಮೇಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ, ಯಾವುದೇ ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಡಿಎಸ್‌ಎಸ್‌ (ಭೀಮಸೇನೆ) ಸಂಘಟನೆ ಆಕ್ರೋಶ : ಕಾನೂನಿನಡಿಯಲ್ಲಿ ಇ-ಸ್ವತ್ತು ಇಲ್ಲದೆ, ನೊಂದಣಿ ಮಾಡಲು ಬರುವುದಿಲ್ಲವಾದರೂ, ಸಬ್‌ರಿಜಿಸ್ಟ್ರಾರ್‌ನ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ, ಡಿಎಸ್‌ಎಸ್‌ ಸಂಘಟನೆ ಸಲ್ಲಿಸಿದ ಅರ್ಜಿಗೆ ಹಿಂಬರಹ ನೀಡುವುದರ ಮೂಲಕ ಜಾರಿಕೊಳ್ಳುತ್ತಿದ್ದಾರೆ. ಹುಂಡಿ ಖಾತೆಯ ದಾಖಲೆ ಯನ್ನು ಬಳಸಿಕೊಂಡು ಇಸ್ವತ್ತು ದಾಖಲೆ ರಹಿತ ಬಡಾವಣೆಯ ನಿವೇಶನಗಳ ನೊಂದಣಿ ಕಾರ್ಯವನ್ನು ಮುಂದುವರೆಸಿದ್ದು, ಈಗಾಗಲೇ ಅಕ್ರಮವಾಗಿ 62 ನಿವೇಶನಗಳ ನೊಂದಣಿ ಮಾಡುವುದರ ಮೂಲಕ ಸಂಘಟನೆ ಸಲ್ಲಿಸಿದ ಅರ್ಜಿಗೆ ಹಿಂಬರಹದಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಸಮಜಾಯಿಷಿ ದೃಢೀಕೃತ ನೀಡಿರುವು ಸರಿಯಾದ ಕ್ರಮವಲ್ಲ ವೆಂದು ದಲಿತ ಸಂಘರ್ಷ ಸಮಿತಿ (ಭೀಮಶಕ್ತಿ) ಖಂಡಿಸುತ್ತಿದೆ.

Ad

ಟಾಪ್ ನ್ಯೂಸ್

Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹತ್ಯೆಗೆ ಶರಣು!

Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹತ್ಯೆಗೆ ಶರಣು!

Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು

Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

11-belagavi

Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ

Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು

Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು

ʼManjummel Boysʼ ಹಣಕಾಸು ವಿವಾದ: ಖ್ಯಾತ ನಟ ಸೌಬಿನ್ ಶಾಹಿರ್ ಸೇರಿ ಮೂವರ ಬಂಧನ – ಬಿಡುಗಡೆ

ʼManjummel Boysʼ ಹಣಕಾಸು ವಿವಾದ: ಖ್ಯಾತ ನಟ ಸೌಬಿನ್ ಶಾಹಿರ್ ಸೇರಿ ಮೂವರ ಬಂಧನ – ಬಿಡುಗಡೆ

8-ckm

ವಿದ್ಯಾರ್ಥಿನಿಯರ ಆತ್ಮಹ*ತ್ಯೆ ಪ್ರಕರಣ; ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

ಅಶ್ಲೀ*ಲ ಮೆಸೇಜ್‌ ಮಾಡಿದ್ದಕ್ಕೆ ಯುವಕನ ಕಿಡ್ನಾಪ್:‌ ರೇಣುಕಾಸ್ವಾಮಿ ಹೆಸರು ಹೇಳಿ ಹಲ್ಲೆ

6

ಗ್ರಾಮಾಂತರ ಇನ್ಮುಂದೆ ಬೆಂಗಳೂರು ಉತ್ತರ ಜಿಲ್ಲೆ

Road Mishap: ಲಾರಿ ಓವರ್‌ಟೇಕ್‌ ಭರದಲ್ಲಿ ಕಾರು ಪಲ್ಟಿ; ನಾಲ್ವರು ಸ್ಥಳದಲ್ಲೇ ದುರ್ಮರಣ

Road Mishap: ಲಾರಿ ಓವರ್‌ ಟೇಕ್‌ ಭರದಲ್ಲಿ ಕಾರು ಪಲ್ಟಿ; ನಾಲ್ವರು ಸ್ಥಳದಲ್ಲೇ ದುರ್ಮರಣ

Hoskote: ಲಾರಿ-ಬಸ್‌ ಡಿಕ್ಕಿಗೆ 2 ಮಕ್ಕಳು ಸೇರಿ ಐವರು ಸಾವು

Hoskote: ಲಾರಿ-ಬಸ್‌ ಡಿಕ್ಕಿಗೆ 2 ಮಕ್ಕಳು ಸೇರಿ ಐವರು ಸಾವು

7-bng

Bengaluru: ಮನೆಗೆ ಬೀಗ ಜಡಿದ ಫೈನಾನ್ಸ್‌ : ಕುಟುಂಬ ಬೀದಿಗೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

12-gundlupete

Gundlupete: ಪಾಠ ಕೇಳುತಿದ್ದ ವೇಳೆ ಹೃದಯಾಘಾತವಾಗಿ ವಿದ್ಯಾರ್ಥಿ ಸಾ*ವು

Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹತ್ಯೆಗೆ ಶರಣು!

Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹತ್ಯೆಗೆ ಶರಣು!

Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು

Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು

13

Kota: ಟಿಲ್ಲರ್‌ನಿಂದ ಟ್ಯಾಕ್ಟರ್‌ ಕಡೆಗೆ ಮುಖ ಮಾಡಿದ ರೈತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.